ಮ್ಯಾಮ್ಕೋಸ್ ಚುನಾವಣಾ ಅಖಾಡಕ್ಕೆ ಸಹಕಾರಿ ಪ್ರತಿಷ್ಠಾನದಿಂದ 19 ಅಭ್ಯರ್ಥಿಗಳು, ಸಹಕಾರಿ ಭಾರತಿಗೆ ಮಾಜಿ ಮಿನಿಸ್ಟರ್ ಸವಾಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 18 ಫೆಬ್ರವರಿ 2020

85221334 807232136423365 6420779771679997952 o.jpg? nc cat=105& nc ohc=0AFKMvQNHbEAX ey0Sx& nc ht=scontent.fblr11 1

ಮ್ಯಾಮ್ಕೋಸ್ ನಿರ್ದೇಶಕರ ಸ್ಥಾನಕ್ಕೆ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದಿಂದ 19 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮತದಾರರು ಬೆಂಬಲ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್ ಅವರು, ಬಿಜೆಪಿಯೇತರ ಪಕ್ಷಗಳು ಒಗ್ಗೂಡಿ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನ ಸ್ಥಾಪಿಸಿಕೊಂಡಿದ್ದೇವೆ. ಇದರ ನೇತೃತ್ವದಲ್ಲಿ 19 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದರು.

ಸಹಕಾರ ಭಾರತಿಯವರು ಇದನ್ನು ಸ್ಪಷ್ಟಪಡಿಸಲಿ

ಅಡಕೆ ಹಾನಿಕಾರಕ ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಷಾ ಅವರು, ಇಲ್ಲಿ ಬಂದು ಅಡಕೆ ಬೆಳೆಗಾರರ ಹಿತ ಕಾಯುವುದಾಗಿ ತಿಳಿಸುತ್ತಾರೆ. ಇದಕ್ಕೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು. ಅಲ್ಲದೆ ಈ ಹೇಳಿಕೆ ಹಿಂಪಡೆಯಬೇಕು ಎಂದು ಸಹಕಾರ ಭಾರತಿ ಒತ್ತಾಯಿಸಬೇಕು ಎಂದು ಸವಾಲು ಹಾಕಿದರು.

ಪರಿಹಾರ ಒದಗಿಸಲು ಇವರಿಗೆ ಸಾದ್ಯವಾಗಿಲ್ಲ

ಅಡಕೆಗೆ ಕೊಳೆ ರೋಗ ಬಂದಿದೆ. ಫಸಲು ಕಡಿಮೆಯಾಗಿದೆ. ಸಹಕಾರ ಭಾರತಿ ಕಡೆಯಿಂದ ರೈತರಿಗೆ ಪರಿಹಾರ ಕೊಡಿಸಲು ಸಾದ್ಯವಾಗಲಿಲ್ಲ. ಅವರ ಕಡೆಯಿಂದ ಪರಿಹಾರ ಕೊಡಿಸಲು ಆಗಿದೆ ಅನ್ನುವುದಿದ್ದರೆ ಸಾಬೀತು ಪಡಿಸಿಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.

86395369 1055554264805993 8734925249029603328 o.jpg? nc cat=102& nc ohc=A0Ucb q2DQ4AX8DcEZ7& nc ht=scontent.fblr11 1

ಚುನಾವಣೆಗೆ ಯಾರೆಲ್ಲ ಸ್ಪರ್ಧಿಸಿದ್ದಾರೆ

ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ವತಿಯಿಂದ 19 ಅಭ್ಯರ್ಥಿಗಳು ಕಣಕ್ಕಿಳಿಸಲಾಗಿದೆ. ಅನ್ನಪೂರ್ಣ ಮೋಹನ್ (ಮಹಿಳಾ ಮೀಸಲು), ಜಯರಾಂ.ಎಂ.ವಿ, ತಾರಕೇಶ್ವರ್.ಎನ್.ಜಿ, ಎನ್.ಎಂ.ದಯಾನಂದ್, ಕಡ್ತೂರು ದಿನೇಶ್, ಹರತಾಳು ನಾಗರಾಜ್ (ಬಿಸಿಎಂಬಿ ಮೀಸಲು), ಪದ್ಮನಾಭ್ ಹಾರೋಗೊಳಿಗೆ, ಕೆ.ಬಿ.ಭದ್ರಪ್ಪ (ಪರಿಶಿಷ್ಟ ಪಂಗಡ ಮೀಸಲು), ಭಾರತಿ ಆರ್.ಹೆಗಡೆ (ಮಹಿಳಾ ಮೀಸಲು), ಹೆಚ್.ಜಿ.ಮಲ್ಲಯ್ಯ, ರಾಮಾನಂದ್ ಎನ್.ಎನ್, ರಮೇಶ್ ಯಡಗೆರೆ, ರಂಗನಾಥ ಪಿ.ಎನ್, ಹೆಚ್.ಎನ್.ಲಕ್ಷ್ಮಣಪ್ಪ (ಪರಿಶಿಷ್ಟ ಜಾತಿ ಮೀಸಲು), ಬಿ.ಹೆಚ್.ಲಿಂಗರಾಜ್, ಶೃಂಗೇರಿ ವಿಜಯಕುಮಾರ್.ಎ.ಆರ್, ಖಾಂಡ್ಯ ವೆಂಕಟೇಶ್, ಶ್ರೀನಿವಾಸ ಕೆ.ಆರ್, ಕೊರಂಬಳ್ಳಿ ಷಣ್ಮುಖಪ್ಪ ಸ್ಪರ್ಧಿಸಿದ್ದಾರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕಡಿದಾಳ್ ಗೋಪಾಲ್, ಶಿವಮೊಗ್ಗ ಪಾಲಿಕೆ ಕಾರ್ಪೊರೇಟರ್ ರಮೇಶ್ ಹೆಗ್ಡೆ ಸೇರಿದಂತೆ ಹಲವರು ಇದ್ದರು.

86383322 807422986404280 829757410657697792 o.jpg? nc cat=105& nc ohc=tgnbUtHzf98AX96gB3f& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment