ಶಿವಮೊಗ್ಗ ರಂಗಾಯಣದಲ್ಲಿ ಬಿ.ವಿ.ಕಾರಂತರಿಗೆ ನುಡಿ ನಮನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

119060214 954258745054036 6933822829653446782 o.jpg? nc cat=105& nc sid=110474& nc ohc=XxkfaKGqL3MAX JHRqz& nc ht=scontent.fixe1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಸೆಪ್ಟಂಬರ್ 2020

ಬಿ.ವಿ.ಕಾರಂತ ಅವರು ಕನ್ನಡ ರಂಗಭೂಮಿಗೆ ಮಾತ್ರವಲ್ಲದೆ, ಭಾರತೀಯ ರಂಗಭೂಮಿಗೆ ಹೊಸ ಸ್ವರೂಪ ನೀಡಿದ ರಂಗ ದಿಗ್ಗಜ ಎಂದು ರಂಗ ಸಮಾಜ ಸದಸ್ಯ ಜೀವನರಾಂ ಸುಳ್ಯ ಅವರು ಸ್ಮರಿಸಿದರು.

ಶಿವಮೊಗ್ಗ ರಂಗಾಯಣದಲ್ಲಿ ಬಿ.ವಿ.ಕಾರಂತ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಮಾನ್ಯ ಹಿನ್ನೆಲೆಯಿಂದ ಬಂದು ಇಡೀ ಭಾರತೀಯ ರಂಗಭೂಮಿಗೆ ದಿಕ್ಸೂಚಿಯನ್ನು ತೋರಿದ ಬಿ.ವಿ.ಕಾರಂತ ಅವರು ಪಾಶ್ಚಾತ್ಯ ಸ್ವರೂಪದ ಪ್ರಭಾವದಲ್ಲಿದ್ದ ಭಾರತೀಯ ರಂಗಭೂಮಿಗೆ ಭಾರತೀಯತೆಯ ಸ್ಪರ್ಶವನ್ನು ಒದಗಿಸಿದವರು. ನನ್ನಂತಹ ಸಾವಿರಾರು ಕಲಾವಿದರಿಗೆ ರಂಗಭೂಮಿಯಲ್ಲಿ ನೆಲೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಬಿ.ವಿ.ಕಾರಂತ ಅವರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡರು.

ಯುವ ಕಲಾವಿದರಿಗೆ ಸ್ಫೂರ್ತಿ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಂಗ ಸಮಾಜದ ಸದಸ್ಯ ರಾಜಾರಾಮ್ ಅವರು ಮಾತನಾಡಿ, ರಂಗಭೂಮಿಯ ಬಗ್ಗೆ ಸ್ಪಷ್ಟವಾದ ಕಲ್ಪನೆಯಿದ್ದ ಬಿ.ವಿ.ಕಾರಂತ ಅವರು ಭಾರತೀಯ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಅವರ ನಾಟಕಗಳನ್ನು ಯುವ ಕಲಾವಿದರು ಹೆಚ್ಚೆಚ್ಚು ನೋಡುವ ಮೂಲಕ ಸ್ಪೂರ್ತಿಯನ್ನು ಪಡೆಯಬಹುದಾಗಿದೆ ಎಂದರು.

ರಂಗ ಸಮಾಜದ ಸದಸ್ಯ ಹಾಲಸ್ವಾಮಿ ಅವರು ಬಿ.ವಿ.ಕಾರಂತ್, ಕನ್ನಡ ರಂಗಭೂಮಿಗೆ ಹೊಸ ಸ್ವರೂಪವನ್ನು ನೀಡಿದವರು ಎಂದರು. ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಿ.ವಿ.ಕಾರಂತ ಅವರು ರಾಜ್ಯದಲ್ಲಿ ರಂಗಾಯಣ ಹುಟ್ಟು ಹಾಕುವ ಮೂಲಕ ರಂಗಭೂಮಿಗೆ ಶಿಸ್ತನ್ನು ತಂದುಕೊಟ್ಟರು ಎಂದರು. ರಂಗ ಸಮಾಜದ ಸದಸ್ಯರಾದ ಶಿವೇಶ್ವರ ಗೌಡ ಅವರು ಉಪಸ್ಥಿತರಿದ್ದರು. ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು. ಮಧುರಾ ಕಲಾತಂಡದವರ ರಂಗ ಸಂಗೀತ ಕಾರ್ಯಕ್ರಮ ನಡೆಸಿದರು.

119042982 954233958389848 2251827388540787956 o.jpg? nc cat=100& nc sid=8024bb& nc ohc=M11J4AM3B1UAX wbglB& nc ht=scontent.fixe1 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment