GOOD NEWS | ತೀರ್ಥಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಯ ಉತ್ತಮ ಕೆಲಸದ ಫೋಟೊ ವೈರಲ್, ಏನದು ಕೆಲಸ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

131951794 1031215290691714 4061890617426774129 n.jpg? nc cat=108&ccb=2& nc sid=730e14& nc ohc=FkyaIRRMuUEAX9p7CwQ& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 09 JANUARY 2021

ಊರು ಉಸಾಬರಿ ನಮಗ್ಯಾಕೆ ಅಂತಾ ಓಡಾಡುವವರ ನಡುವೆ ಸರ್ಕಾರಿ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಯೊಬ್ಬನ ಕೆಲಸಕ್ಕೆ ಸಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈತನ ಕೆಲಸ ಎಲ್ಲರಲ್ಲು ನಾಗರೀಕ ಕರ್ತವ್ಯವನ್ನು ಬಡಿದೆಚ್ಚರಿಸುತ್ತಿದೆ.

ವಿದ್ಯಾರ್ಥಿ ಮಾಡಿದ್ದೇನು?

137071964 3384936728294997 7683891878433805235 n.jpg? nc cat=107&ccb=2& nc sid=8bfeb9& nc ohc=v4EDWP2HikcAX zYGDJ& nc ht=scontent.fblr1 3ಗಾಳಿ, ಮಳೆಗೆ ಮರದ ತುಂಡು ಒಂದು ರಸ್ತೆಗೆ ಬಿದ್ದಿತ್ತು. ವಾಹನ ಸವಾರರು ಮರದ ತುಂಡು ಬಿದ್ದ ಮತ್ತೊಂದು ಬದಿಯಲ್ಲಿ ವಾಹನಗಳನ್ನು ಕೊಂಡೊಯ್ದು ಚಲಿಸುತ್ತಿದ್ದರು. ಯಾರೊಬ್ಬರು ಅದನ್ನು ಪಕ್ಕಕ್ಕೆ ಸರಿಸುವ ಪ್ರಯತ್ನ ಮಾಡುತ್ತಿರಲಿಲ್ಲ. ಅದೆ ಮಾರ್ಗದಲ್ಲಿ ಸೈಕಲ್‍ನಲ್ಲಿ ಬಂದ ಸಾಲೂರು ಸರ್ಕಾರಿ ಶಾಲೆಯ ವಿದ್ಯಾರ್ಥಿ ಉತ್ತನ್, ಮರದ ತುಂಡನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಿದ್ದಾನೆ. ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾನೆ.

ವೈರಲ್ ಆಯ್ತು ಫೋಟೊಗಳು

ಜಿಗಳಗೋಡಿನ ಲೀಲಾವತಿ – ಉಮೇಶ್ ದಂಪತಿಯ ಪುತ್ರ ಉತ್ತನ್ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರದ ತುಂಡನ್ನು ಉತ್ತನ್ ಪಕ್ಕಕ್ಕೆ ಸರಿಸುತ್ತಿರುವ ಫೋಟೊಗಳು ಫೇಸ್‍ಬುಕ್‍, ವಾಟ್ಸಪ್‍ನಲ್ಲಿ ಷೇರ್ ಆಗುತ್ತಿದೆ. ಪಶುವೈದ್ಯಕೀಯ ವಿಭಾಗದ ಸರ್ಜನ್ ಯುವರಾಜ್ ಹೆಗಡೆ ಅವರು ಉತ್ತನ್ ಉತ್ತಮ ಕೆಲಸದ ಫೋಟೊಗಳನ್ನು ಕ್ಲಿಕ್ ಮಾಡಿದ್ದರು.

ನಾಗರೀಕ ಪ್ರಜ್ಞೆ ಜಾಗೃತಗೊಳಿಸಿದ

ಉತ್ತನ್‍ ಕೆಲಸ ಉಳಿದವರಲ್ಲಿ ನಾಗರಿಕ ಕರ್ತವ್ಯ ಮತ್ತು ನಾಗರಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದೆ. ಮರದ ಕೊಂಬೆಯನ್ನು ಬದಿಗೆ ಸರಿಸುವುದು ಆಡಳಿತದ ಕರ್ತವ್ಯ ಎಂದು ಭಾವಿಸಿ ಸುಮ್ಮನಾದರೆ, ಅನಾಹುತ ಸಂಭವಿಸುವ ಅಪಾಯವಿತ್ತು. ಉತ್ತನ್ ಕಾರ್ಯದಿಂದ ವಾಹನಗಳ ಸರಾಗ ಸಂಚಾರಕ್ಕೆ ಅವಕಾಶವಾಗಿದೆ.

135083349 3384936914961645 6906415022909834419 n.jpg? nc cat=100&ccb=2& nc sid=8bfeb9& nc ohc=n3LqnwgPhDoAX QzjoF& nc ht=scontent.fblr1 6

136751408 3384937281628275 8753841447189590984 n.jpg? nc cat=111&ccb=2& nc sid=8bfeb9& nc ohc=7BhQCb0 mMoAX8oQ74z& nc ht=scontent.fblr1 5

135880650 3384937144961622 8898795982066860766 n.jpg? nc cat=100&ccb=2& nc sid=8bfeb9& nc ohc=MFWIFCBZI3oAX9Es3rT& nc ht=scontent.fblr1 6

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 9, 2021

Leave a Comment