ಹಲ್ಲೆ, ಕೊಲೆ ಯತ್ನ, ಇಬ್ಬರು ಬಾಲಪರಾಧಿಗಳು ಸೇರಿ ಐವರು ಅರೆಸ್ಟ್, ಏನಿದು ಪ್ರಕರಣ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 FEBRUARY 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕ್ಷುಲಕ ಕಾರಣಕ್ಕೆ  ಇಬ್ಬರು ಯುವಕರ ಕೊಲೆಗೆ ಯತ್ನಿಸಿದ್ದ ಐವರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಇಬ್ಬರು ಬಾಲಪರಾಧಿಗಳಿದ್ದಾರೆ.

ಏನಿದು ಕೇಸ್‍?

ಫೆಬ್ರವರಿ 16ರಂದು ರಾತ್ರಿ ರಾಕೇಶ್ (22), ರವಿಕುಮಾರ್ (24) ಎಂಬುವವರ ಮೇಲೆ ಹಲ್ಲೆ ನಡೆಸಿ, ಕೊಲೆ ಯತ್ನ ಮಾಡಲಾಗಿತ್ತು. ಎನ್.ಟಿ.ರಸ್ತೆಯ ಟೆಂಪೋ ಸ್ಟಾಂಡ್‍ ಬಳಿಯ ನಾಲ್ಕನೇ ಕ್ರಾಸ್‍ನಲ್ಲಿ ಘಟನೆ ಸಂಭವಿಸಿತ್ತು.

ಐವರನ್ನ ಬಂಧಿಸಿದ ಪೊಲೀಸ್

ಘಟನೆ ಸಂಬಂಧ ವಸೀಂ ಅಲಿಯಾಸ್ ಕಾಲಾ ವಸೀಂ (19), ವಸೀಂ ಅಕ್ರಂ (19), ಉಮರ್ ಖಾನ್ (19) ಎಂಬುವವರನ್ನು ಬಂಧಿಸಲಾಗಿದೆ. ಇವರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇಬ್ಬರು ಬಾಲಪರಾಧಿಗಳು

ಹಲ್ಲೆ, ಕೊಲೆಯ ಯತ್ನ ಪ್ರಕರಣದಲ್ಲಿ ಇಬ್ಬರು ಬಾಲಪರಾಧಿಗಳು ಭಾಗಿಯಾಗಿದ್ದಾರೆ. ಇವರನನ್ನು ಬಂಧಿಸಿದ ಪೊಲೀಸರು, ಬಾಲನ್ಯಾಯಮಂಡಳಿಯ ಕಸ್ಟಡಿಗೆ ಒಪ್ಪಿಸಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

ಡಿವೈಎಸ್‍ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ, ದೊಡ್ಡಪೇಟೆ ಠಾಣೆ ಇನ್ಸ್‍ಪೆಕ್ಟರ್ ವಸಂತ ಕುಮಾರ್ ನೇತೃತ್ವದಲ್ಲಿ, ಪಿಎಸ್ಐ ಶಂಕರಮೂರ್ತಿ, ಸಿಬ್ಬಂದಿಗಳಾದ ಹೆಚ್.ಸಿ.ಶೇಖರ್, ಶ್ರೀನಿವಾಸ್, ಸುರೇಶ್, ಲಚ್ಚಾನಾಯ್ಕ್, ಪಿ.ಸಿ.ರಮೇಶ್, ನಿತಿನ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment