ಶಿವಮೊಗ್ಗದ ಪಾನಿಪೂರಿ ಸ್ಟಾಲ್‌ಗೆ ಸಿನಿಮಾ ನಟ | ಭದ್ರಾವತಿಯಲ್ಲಿ ಶಾಸಕಿಯ ಕಚೇರಿ | ಮತ್ತಷ್ಟು ಸುದ್ದಿಗಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 3 ಜುಲೈ 2023

ಶಿವಮೊಗ್ಗದ ಪಾನಿ ಪೂರಿ ಅಂಗಡಿಯಲ್ಲಿ ನಟ

Daredevil film Hero visits panipuri shop

SHIMOGA : ಚಲನಚಿತ್ರ (Actor) ನಟ ಆದಿತ್ಯ ಆಶ್ರೀ ಜೊತೆಗೆ ಜನರು ಸೆಲ್ಫಿ, FATAFAT NEWS 1 jpgಫೋಟೊಗೆ ಮುಗಿಬಿದ್ದರು. ವೆಂಕಟೇಶ ನಗರದ ಎಎನ್‌ಕೆ ರಸ್ತೆಯಲ್ಲಿರುವ ಮಂಜುನಾಥ ಚಾಟ್ಸ್‌ ಸೆಂಟರ್‌ಗೆ ನಟ ಆದಿತ್ಯ ಶ್ರೀ ಕುಟುಂಬದೊಂದಿಗೆ ಭೇಟಿ ನೀಡಿದ್ದರು. ನಟನನ್ನು ಕಂಡು ಚಾಟ್ಸ್‌ ಸೆಂಟರ್‌ ಬಳ ಜನರು ಸೆಲ್ಫಿ, ಫೋಟೊಗೆ ಜನ ಸೇರಿದರು. ಇತ್ತೀಚೆಗೆ ಬಿಡುಗಡೆಯಾದ ಡೇರ್‌ ಡೆವಿಲ್‌ ಮುಸ್ತಫಾ ಸಿನಿಮಾದಲ್ಲಿ ಆದಿತ್ಯ ಆಶ್ರೀ ರಾಮಾನುಜ ಅಯ್ಯಂಗಾರಿಯ ಪಾತ್ರ ನಿರ್ವಹಿಸಿದ್ದರು. ಇದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ಸಿನಿಮಾ.

FATAFAT-MORE-NEWS

ಶಿವಮೊಗ್ಗ ಸ್ಮಾರ್ಟ್‌ ಸಿಟಿ ಎಂಡಿ ವರ್ಗಾವಣೆ

SHIMOGA : ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ FATAFAT NEWS 2 jpgಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಎಂ.ಡಿ. ಹುದ್ದೆಗೆ ಅವರನ್ನು ನೇಮಿಸಲಾಗಿದೆ. ಚಿದಾನಂದ ವಟಾರೆ ಅವರು ಶಿವಮೊಗ್ಗ ಮಹಾನಗರ ಪಾಲಿಕೆ ಕಮಿಷನರ್‌ ಆಗಿದ್ದರು. ಸ್ಮಾರ್ಟ್‌ ಸಿಟಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಬಳಿಕ ಶಿವಮೊಗ್ಗ ಸ್ಮಾರ್ಟ್‌ ಸಿಟಿಯ ಎಂ.ಡಿಯಾಗಿ ಪೂರ್ಣಾವಧಿ ನೇಮಕವಾಗಿದ್ದರು. ಚಿದಾನಂದ ವಟಾರೆ ಅವರಿಂದ ತೆರವಾಗಿರವ ಸ್ಥಾನಕ್ಕೆ ಯಾರನ್ನು ನೇಮಕ ಮಾಡಿಲ್ಲ.

FATAFAT-MORE-NEWS

ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಮನವಿ

SHIMOGA : ಗಾಂಧಿನಗರದಲ್ಲಿ ಭೂಗತ ಕೇಬಲ್ ಸಂಪರ್ಕ ಹೊಂದಿರುವ FATAFAT NEWS 3 jpgಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ನಗರದ ಜನತೆಯಲ್ಲಿ ಆತಂಕ ಉಂಟಾಗಿದೆ. ಈ ಯೋಜನೆಗೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಜೂ.29ರಂದು ಗಾಂಧಿನಗರದ ಭೂಗತ ಕೇಬಲ್‌ ಫೀಡರ್‌ ಪಿಲ್ಲರ್‌ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

FATAFAT-MORE-NEWS

ಗುತ್ತಿಗೆ ಪೌರ ಕಾರ್ಮಿಕರ ನೇಮಕ್ಕೆ ಸೂಚನೆ

SAGARA :  ಸಾಗರ ಪಟ್ಟಣ ದಿನೇ ದಿನೆ ಬೆಳೆಯುತ್ತಿದೆ. ನಗರದ ಸ್ವಚ್ಚತೆಗೆ FATAFAT NEWS 4 jpgಆದ್ಯತೆ ನೀಡಬೇಕಿದೆ. ಈ ಹಿನ್ನೆಲೆ ಹೆಚ್ಚುವರಿ ಪೌರ ಕಾರ್ಮಿಕರನ್ನು ನಿಯೋಜನೆ ಮಾಡಬೇಕಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದರು. ನಗರಸಭೆಯಲ್ಲಿ ಆಯೋಜಿಸಿದ್ದ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಗರಸಭೆ ಆಡಳಿತಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಪೌರಾಯುಕ್ತ ಸಿ.ಚಂದ್ರಪ್ಪ, ಇಂಜಿನಿಯರ್‌ ಎಸ್‌.ಕೆ.ನಾಗಪ್ಪ, ನಗರಸಭೆ ಸದಸ್ಯರು ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ವಿಮಾನ ಹಾರಾಟ, ಟೈಮಿಂಗ್‌ ಏನು? ಏರೋ ಶೋಗೆ ಸಂಸದರು ಮನವಿ ಮಾಡಿದ್ದೇಕೆ?

FATAFAT-MORE-NEWS

ಭದ್ರಾವತಿಯಲ್ಲಿ ಶಾಸಕರ ಕಾರ್ಯಾಲಯ ಉದ್ಘಾಟನೆ

BHADRAVATHI : ಹಳೆ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ FATAFAT NEWS 5 jpgಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರ ಕಚೇರಿಯನ್ನು ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಉದ್ಘಾಟಿಸಿದರು. ನೂತನ ಕಚೇರಿ ಉದ್ಘಾಟನೆ ಹಿನ್ನೆಲೆ ಕಾರ್ಯಕರ್ತರು, ಮುಖಂಡರಿಗೆ ಸಿಹಿ ಹಂಚಿದರು. ಬಳಿಕ ತಾಲೂಕು ಪಂಚಾಯಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment