SHIVAMOGGA LIVE NEWS | 1 APRIL 2024
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ELECTION SPECIAL : ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು, ಅರಣ್ಯ ಸತ್ಯಾಗ್ರಹ ನಡೆಸಿದ್ದ ಕೆ.ಜಿ.ಒಡೆಯರ್ ಶಿವಮೊಗ್ಗ ಕ್ಷೇತ್ರದ ಮೊದಲ ಸಂಸದ. ಮಹಾತ್ಮ ಗಾಂಧೀಜಿ ಅನುಯಾಯಿಯಾಗಿದ್ದ ಕೆ.ಜಿ.ಒಡೆಯರ್ ಸ್ವಾತಂತ್ರ್ಯ ಹೋರಾಟದ ಸಂದರ್ಭ ಮಧ್ಯ ಕರ್ನಾಟಕ ಭಾಗದಲ್ಲಿನ ಹಲವು ಚಳವಳಿಗಳಲ್ಲಿ ಭಾಗವಹಿಸಿದ್ದರು.
ಅರಣ್ಯ ಸತ್ಯಾಗ್ರಹದಲ್ಲಿ ಮುಂಚೂಣಿ
ಸ್ವಾತಂತ್ರ್ಯ ಚಳವಳಿ ವೇಳೆ ಅರಣ್ಯ ಸತ್ಯಾಗ್ರಹವು ಪ್ರಮುಖ ಹೋರಾಟವಾಗಿತ್ತು. ಸರ್ಕಾರಿ ಜಮೀನಿನಲ್ಲಿರುವ ಬೈನೆ ಮರಗಳನ್ನು ಕಡಿದು ಹೆಂಡ ಸರಬರಾಜು ಅಗದಂತೆ ತಡೆಯುವುದು ಇದರ ಪ್ರಮುಖ ಉದ್ದೇಶ. 1939ರಲ್ಲಿ ಸಾಗರ ಸಮೀಪದ ಸಣ್ಣಮನೆ ಹಳ್ಳದಲ್ಲಿ ಬಿ.ಕೆ.ಶಿವಪ್ಪ ಗೌಡ, ಬಿ.ವೆಂಕಟರಾವ್, ಕೆ.ಜಿ.ಒಡೆಯರ್ ಸೇರಿದಂತೆ ಹಲವರು ಕ್ಯಾಂಪ್ ಮಾಡಿ ಅರಣ್ಯ ಸತ್ಯಾಗ್ರಹದಲ್ಲಿ ತೊಡಗಿಸಿಕೊಂಡಿದ್ದರು. ಈ ಗುಂಪು ಆಗಾಗ ಪ್ರಭಾತ್ ಪೇರಿ (ಬೆಳಗೆ ಪಥಸಂಚಲನ) ನಡೆಸಿ ಜನ ಜಾಗೃತಿ ಮೂಡಿಸುತ್ತಿತ್ತು. ಸರ್ಕಾರಿ ಕಚೇರಿಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವುದು, ಹೆಂಡದ ಅಂಗಡಿಗಳ ಮುಂದೆ ಪ್ರತಿಭಟನೆ ನಡೆಸಿ ಬ್ರಿಟೀಷ್ ಆಡಳಿತದ ವಿರುದ್ಧ ಹೋರಾಟ ನಡೆಸುತ್ತಿತ್ತು.
ಜೈಲಿಗೆ ಹೋಗಿದ್ದರು ಕೆ.ಜಿ.ಒಡೆಯರ್
ಮನ್ನಾಜಂಗಲ್ನಲ್ಲಿ ಬೈನೆ ಮರ ಕಡಿದ ಪ್ರಕರಣದಲ್ಲಿ ಬ್ರಿಟೀಷ್ ಪೊಲೀಸರು 1939ರ ಅಕ್ಟೋಬರ್ 10ರಂದು ಕೆ.ಜಿ.ಒಡೆಯರ್, ಕಲ್ಲಕೊಪ್ಪ ಸೇರಿದಂತೆ 16 ಹೋರಾಟಗಾರರನ್ನು ಬಂಧಿಸಿದ್ದರು. ತಪ್ಪೊಪ್ಪಿಗೆ ಪತ್ರ ಬರೆದುಕೊಡುವಂತೆ ಬ್ರಿಟೀಷ್ ಪೊಲೀಸರು ಹಿಂಸೆ ನೀಡಿದ್ದರು. ಕೊನೆಗೆ ನ್ಯಾಯಾಲಯದಲ್ಲಿ ಕೆ.ಜಿ.ಒಡೆಯರ್ ಮತ್ತಿತರರನ್ನ ದೋಷಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿತ್ತು.
ಎರಡು ಬಾರಿ ಸಂಸದರಾಗಿದ್ದರು
ಕೆ.ಜಿ.ಒಡೆಯರ್ ಅವರು ಶಿವಮೊಗ್ಗದಿಂದ ಎರಡು ಬಾರಿ ಲೋಕಸಭೆ ಪ್ರವೇಶಿಸಿದ್ದರು. 1952ರಲ್ಲಿ ಮೊದಲ ಬಾರಿ ಸಂಸದರಾಗಿದ್ದರು. 1957ರಲ್ಲಿ ಎರಡನೇ ಲೋಕಸಭೆಗು ಶಿವಮೊಗ್ಗದ ಸಂಸದರಾಗಿದ್ದರು. ಸಂಸತ್ತಿನ ವಿವಿಧ ಕಮಿಟಿಗಳಿಗೆ ಸದಸ್ಯರಾಗಿದ್ದರು.
ಇದನ್ನೂ ಓದಿ – ‘ಹಸೆ ಚಿತ್ತಾರ’ ಪುಸ್ತಕ ಬಿಡುಗಡೆ, ಯಾರೆಲ್ಲ ಭಾಗವಹಿಸಿದ್ದರು, ಏನೇನೆಲ್ಲ ಮಾತನಾಡಿದರು?
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






