ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 13 ಜುಲೈ 2019
ಗ್ಯಾಸ್ ಕಟಿಂಗ್ ಮಿಷನ್ ಬಳಸಿ ಕಬ್ಬಿಣದ ಕಿಟಕಿಯ ಸರಳುಗಳನ್ನು ಮುರಿದು, ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಣ ಕಳ್ಳತನ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕಿನ ಕನ್ನಂಗಿಯಲ್ಲಿರುವ ಸಂಘದಲ್ಲಿ ಘಟನೆ ನಡೆದಿದೆ.
ಮಂಡಗದ್ದೆ ಹೋಬಳಿಯ ಕನ್ನಂಗಿ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಹಿಂಭಾಗದ ಕಬ್ಬಿಣದ ಕಿಟಕಿಯನ್ನು, ಗ್ಯಾಸ್ ಕಟಿಂಗ್ ಬಳಸಿ ಮುರಿಯಲಾಗಿದೆ. ಒಳಗೆ ನುಗ್ಗಿರುವ ಕಳ್ಳರು ಕ್ಯಾಶ್ ಕೌಂಟರ್’ನಲ್ಲಿದ್ದ 13,700 ರೂ. ಹಣವನ್ನು ಕಳ್ಳತನ ಮಾಡಿದ್ದಾರೆ.
ಗುರುವಾರ ರಾತ್ರಿ ಘಟನೆ ನಡೆದಿದೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]