ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಬಿದರೆವರೆಗೆ ಕಾರು ಬೆನ್ನಟ್ಟಿ ಹೋಗಿ ಯುವಕರಿಂದ ಚಾಲಕನಿಗೆ ಮನಸೋಯಿಚ್ಛೆ ಥಳಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA, 5 AUGUST 2024 : ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಯುವಕರ ಗುಂಪೊಂದು ಕಾರನ್ನು ಅಡ್ಡಗಟ್ಟಿ ಒಳಗಿದ್ದ ವ್ಯಕ್ತಿಯ ಮೇಲೆ ಮನಸೋಯಿಚ್ಛೆ ಹಲ್ಲೆ ನಡೆಸಿದ್ದಾರೆ. ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿ (HIGHWAY) ಘಟನೆ ಸಂಭವಿಸಿದೆ.

ಸೋಮಿನಕೊಪ್ಪದ ನವೀನ್‌ ಕುಮಾರ್‌ ಎಂಬುವವರು ಗಾಯಗೊಂಡಿದ್ದಾರೆ. ಜು.28ರಂದು ರಾತ್ರಿ ನವೀನ್‌ ಕುಮಾರ್‌ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಎಂಆರ್‌ಎಸ್‌ ಸರ್ಕಲ್‌ ಬಳಿ ಎರಡು ಬೈಕ್‌ಗಳನ್ನು ಓವರ್‌ಟೇಕ್‌ ಮಾಡಿದ್ದರು. ಆ ಬೈಕಿನಲ್ಲಿದ್ದವರು ಕಾರನ್ನು ಬೆನ್ನಟ್ಟಿ ಬಂದು ಮಲವಗೊಪ್ಪದ ಬಳಿ ಅಡ್ಡಗಟ್ಟಿ, ನವೀನ್‌ ಕುಮಾರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಆರೋಪಿಸಲಾಗಿದೆ.

ಕಾರನ್ನು ವೇಗವಾಗಿ ಚಲಾಯಿಸಿಕೊಂಡು ತೆರಳಿದ್ದ ನವೀನ್‌ ಕುಮಾರ್‌ ಅವರನ್ನು ನಾಲ್ಕೈದು ಬೈಕುಗಳನ್ನು ಪುನಃ ಯುವಕರ ಗುಂಪು ಬೆನ್ನಟ್ಟಿತ್ತು ಎಂದು ಆರೋಪಿಸಲಾಗಿದೆ. ಬಿದರೆ ಕ್ರಾಸ್‌ ಬಳಿ ಅಡ್ಡಗಟ್ಟಿ ನವೀನ್‌ ಕುಮಾರ್‌ ಅವರನ್ನು ಕಾರಿನಿಂದ ಕೆಳಗೆಳೆದು ಮನಸೋಯಿಚ್ಛೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಚಿನ್ನದ ಸರ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ⇓

ಶಿವಮೊಗ್ಗದ ವಾಹನ ಸವಾರರೆ ಹುಷಾರ್‌, ಅತಿ ವೇಗದ ಬೈಕ್‌ ಚಾಲನೆಗೆ ದಾಖಲಾಯ್ತು ಮೊದಲ ಎಫ್‌ಐಆರ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment