ಶಿವಮೊಗ್ಗ ಲೈವ್.ಕಾಂ | 21 ಮೇ 2019
ಮಹಾವೀರ ಸರ್ಕಲ್’ನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. KSRTC ಬಸ್ ಮತ್ತು ಬೊಲೆರೋ ಪಿಕಪ್ ವಾಹನಗಳ ನಡುವೆ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ.
ಮಹಾವೀರ ಸರ್ಕಲ್’ನಲ್ಲಿ ಬಸ್, ಪಿಕಪ್ ವಾಹನ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ನುಜ್ಜುಗುಜ್ಜಾಗಿದೆ. ಪಿಕಪ್ ವಾಹನ ಪಲ್ಟಿಯಾಗಿದೆ. ಸರ್ಕಲ್’ನಲ್ಲಿದ್ದ ಸಿಗ್ನಲ್ ಲೈಟಿನ ಕಂಬಕ್ಕೂ ಹಾನಿಯಾಗಿದೆ.
KSRTC ಬಸ್, ಬಿಜಾಪುರದಿಂದ ಮೈಸೂರಿಗೆ ತೆರಳುತ್ತಿತ್ತು. ಇನ್ನು, ಪಿಕಪ್ ವಾಹನ ಸೈಯದ್ ದಸ್ತಗೀರ್ ಎಂಬುವವರಿಗೆ ಸೇರಿದ್ದು, ಗದಗದಿಂದ ಚಿಕ್ಕಮಗಳೂರಿಗೆ ತೆರಳುತ್ತಿತ್ತು. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹತ್ತು ದಿನದ ಹಿಂದೆಯಷ್ಟೇ ಮಹಾವೀರ ಸರ್ಕಲ್’ನಲ್ಲಿ ಆಟೋ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ, ಆಟೋ ಪಲ್ಟಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]