ಶಿವಮೊಗ್ಗ ಲೈವ್.ಕಾಂ | SAGARA NEWS | 13 ಅಕ್ಟೋಬರ್ 2020
ಸಾಗರ ತಾಲೂಕಿನ ಐಗಿನಬೈಲು ಬಳಿ ಸರಣಿ ಅಪಘಾತ ಸಂಭವಿಸಿದ್ದು ಆಟೋ ಚಾಲರೊಬ್ಬರಿಗೆ ಗಂಭೀರ ಗಾಯವಾಗಿದೆ. ಘಟನೆಯಲ್ಲಿ ಎರಡು ಕಾರು, ಒಂದು ಆಟೋಗೆ ಹಾನಿಯಾಗಿದೆ.
ಹೇಗಾಯ್ತು ಅಪಘಾತ?
ಶಿರಸಿಯಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಆಟೋ ಮತ್ತು ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋ ನಜ್ಜುಗುಜ್ಜಾಗಿದೆ. ಆಟೋದ ಹಿಂಬದಿಯಲ್ಲಿ ಬರುತ್ತಿದ್ದ ಸ್ವಿಫ್ಟ್ ಕಾರಿಗೂ ಡಿಕ್ಕಿಯಾಗಿದೆ.
ಆಟೋ ಚಾಲಕನಿಗೆ ಗಂಭೀರ ಗಾಯ
ಶಿರಾಳಕೊಪ್ಪದ ಗುರುರಾಜ್ ಎಂಬುವವರ ಜೊತೆಗೆ ಸಾಗರದ ಶಾಂತಿನಗರದ ಜಮೀರ್ (35) ಅವರು ಆಟೋದಲ್ಲಿ ಹೊನ್ನಾಳಿಗೆ ತೆರಳಿದ್ದರು. ಅಲ್ಲಿಂದ ತರಕಾರಿ ತೆಗೆದುಕೊಂಡು ಸಾಗರದ ಕಡೆಗೆ ಮರಳುವಾಗ ಐಗಿನಬೈಲು ಬಳಿ ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಜಮೀರ್ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
PHOTO : GNS NEWS
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]