ಶಿವಮೊಗ್ಗ ಲೈವ್.ಕಾಂ | SHIMOGA | 27 ಡಿಸೆಂಬರ್ 2019
ಹುಟ್ಟುಹಬ್ಬಕ್ಕೆ ಭದ್ರಾವತಿಗೆ ಉಚಿತ ಆಂಬುಲೆನ್ಸ್ ಕೊಡುಗೆ
ಭದ್ರಾವತಿ | ಹುಟ್ಟುಹಬ್ಬದ ದಿನ ಹುಟ್ಟೂರು ಭದ್ರಾವತಿಗೆ ಆಂಬುಲೆನ್ಸ್ ಕೊಡುಗೆ ನೀಡಿದ ಪೊಲೀಸ್. ಉಚಿತ ಸೇವೆಗಾಗಿ ಆಂಬುಲೆನ್ಸ್ ಕೊಡುಗೆ ನೀಡಿದ ಪೊಲೀಸ್ ಉಮೇಶ್. ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಅವರು, ಸ್ನೇಹಜೀವಿ ಬಳಗದ ಮೂಲಕ ಆಂಬುಲೆನ್ಸ್ ನೀಡಿದ್ದಾರೆ. ಹುತ್ತಾ ಕಾಲೋನಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಮ್ಮ 45 ಹುಟ್ಟುಹಬ್ಬ ಆಚರಿಸಿಕೊಂಡು, ಆಂಬುಲೆನ್ಸ್ ನೀಡಿದರು.
ಜಿಲ್ಲಾಧಿಕಾರಿ ಮನೆಯಲ್ಲಿ ಪೈಪ್ ಕಾಂಪೋಸ್ಟ್
ಶಿವಮೊಗ್ಗ | ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರ ಮನೆಯಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಸಲಾಯಿತು. ಪಾಲಿಕೆ ಆಯಕ್ತ ಚಿದಾನಂದ ವಟಾರೆ, ಯೋಜನಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ಪ್ರಮೋದ್ ಮತ್ತಿತರರಿದ್ದರು. ಜನರು ಕೂಡ ಪೈಪ್ ಕಾಂಪೋಸ್ಟ್ ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]