ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018
ನಿಗದಿಗಿಂತಲೂ ವೇಗವಾಗಿ ಅರ್ಜಿಗಳ ವಿಲೇವಾರಿ ಮಾಡಿದ ಹೊಳಲೂರು ನಾಡಕಚೇರಿಗೆ ಭೂಮಾಪನ ಇಲಾಖೆ ಆಯುಕ್ತ ಮುನಿಶ್ ಮೌದ್ಗಿಲ್ ಅಭಿನಂದನೆ ಸಲ್ಲಿಸಿದ್ದಾರೆ. ಸಾವಿರಕ್ಕಿಂತಲೂ ಕಡಿಮೆ ಅರ್ಜಿ ಪಡೆಯುವ ನಾಡ ಕಚೇರಿಗಳ ಪೈಕಿ, ವೇಗವಾಗಿ ವಿಲೇವಾರಿ ಮಾಡಿದ ರಾಜ್ಯದ ಮೂರನೇ ನಾಡ ಕಚೇರಿ ಎಂದು ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಉಪತಹಶೀಲ್ದಾರ್ ತಿಲಕ್ ಅವರಿಗೆ ಅಭಿನಂದನಾ ಪತ್ರ ಕಳುಹಿಸಲಾಗಿದೆ. ನವೆಂಬರ್ ತಿಂಗಳಲ್ಲಿ ಹೊಳಲೂರು ನಾಡಕಚೇರಿಗೆ 509 ಅರ್ಜಿಗಳು ಬಂದಿದ್ದವು. ಅವಧಿಗೂ ಮೊದಲೇ ಶೇ.99.80ಯಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | [email protected]