ಶಿವಮೊಗ್ಗ ಲೈವ್.ಕಾಂ |HOLEHONNURU NEWS | 24 ಅಕ್ಟೋಬರ್ 2021
ಜಮೀನಿನಲ್ಲಿ ಬೆಳೆದಿದ್ದ ಸುಮಾರು ಮೂರೂವರೆ ವರ್ಷದ ಅಡಕೆ ಸಸಿಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ಹಾಕಿದ್ದಾರೆ. 39 ಸಸಿಗಳಿಗೆ ಕೊಡಲಿ ಬೀಸಲಾಗಿದೆ.
ಭದ್ರಾವತಿ ತಾಲೂಕು ದಾಸರ ಕಲ್ಲಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಅಣ್ಣಪ್ಪ ಎಂಬುವವರಿಗೆ ಸೇರಿದ ತೋಟದಲ್ಲಿ ಅಡಕೆ ಸಸಿಗಳನ್ನು ಕಡಿಯಲಾಗಿದೆ.
ಸಂಜೆ ಅಣ್ಣಪ್ಪ ಅವರ ಚಿಕ್ಕಪ್ಪ ತೋಟದಲ್ಲಿ ದನಗಳನ್ನು ಮೇಯಿಸಿಕೊಂಡು ಬಂದಿದ್ದಾರೆ. ಆಗ ತೋಟದಲ್ಲಿ ಎಲ್ಲಾ ಸಸಿಗಳು ಚನ್ನಾಗಿದ್ದವು. ಬೆಳಗ್ಗೆ ಪಕ್ಕದ ಜಮೀನಿನ ಮಾಲೀಕರು ಅಣ್ಣಪ್ಪ ಅವರ ಮನೆ ಬಳಿಗೆ ಬಂದು ಯಾರೋ ಸಸಿಗಳನ್ನು ಕಡಿದಿದ್ದಾರೆ ಎಂದು ತಿಳಿಸಿದ್ದಾರೆ. ಮನೆಯವರೆಲ್ಲ ತೋಟಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.
ದುಷ್ಕರ್ಮಿಗಳು 39 ಸಸಿಗಳನ್ನು ಕೊಡಲಿಯಿಂದ ಕಡಿದು ಹಾಕಿರುವ ಶಂಕೆ ಇದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.