ಶಿವಮೊಗ್ಗ ಲೈವ್.ಕಾಂ | HOLEHONNUR NEWS | 26 ಅಕ್ಟೋಬರ್ 2021
ಮನೆ ಮುಂದಿನ ಗೋದಾಮಿನಲ್ಲಿ ಇಟ್ಟಿದ್ದ ನಾಲ್ಕು ಮೂಟೆ ಅಡಕೆಯನ್ನು ರಾತ್ರೋರಾತ್ರಿ ಕಳವು ಮಾಡಲಾಗಿದೆ. ಸಂಸ್ಕರಿಸಿ ಇಟ್ಟಿದ್ದ ಅಡಕೆಯನ್ನು ಖದೀಮರು ಹೊತ್ತೊಯ್ದಿದ್ದಾರೆ.
ಇದನ್ನೂ ಓದಿ | ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಅಡಕೆ ಸಸಿಗಳನ್ನು ಕತ್ತರಿಸಿದ ದುಷ್ಕರ್ಮಿಗಳು
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಗರದಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಹರೀಶ್ ಎಂಬುವವರ ಮನೆ ಮುಂದೆ ಗೋದಾಮಿನಲ್ಲಿ ಅಡಕೆಯನ್ನು ಇಡಲಾಗಿತ್ತು. ಮೂಟೆಯಲ್ಲಿ ಅಡಕೆಯನ್ನು ಕಟ್ಟಿ ಇರಿಸಲಾಗಿತ್ತು.
ಭಾನುವಾರ ರಾತ್ರಿ ಕಳ್ಳರು ಗೋದಾಮಿನೊಳಗೆ ನುಗ್ಗಿ ನಾಲ್ಕು ಮೂಟೆ ಅಡಕೆಯನ್ನು ಕದ್ದೊಯ್ದಿದ್ದಾರೆ.