ಶಿವಮೊಗ್ಗ ಲೈವ್.ಕಾಂ | ರಿಪ್ಪನ್’ಪೇಟೆ | 30 ಆಗಸ್ಟ್ 2019
ಹಳೆ ವೈಷಮ್ಯದ ಹಿನ್ನೆಲೆ ಗುಂಪೊಂದು ಯುವಕನ ಮೇಲೆ ತೀವ್ರ ಹಲ್ಲೆ ನಡೆಸಿ ಎದೆಗೆ ಚಾಕುವಿನಿಂದ ಇರಿದಿದೆ.
ಹೊಸನಗರ ತಾಲೂಕು ರಿಪ್ಪನ್ಪೇಟೆ ಸಮೀಪದ ಗವಟೂರು ಗ್ರಾಮದ ಶಶಿಕುಮಾರ್ (28) ಇರಿತಕ್ಕೆ ಒಳಗಾದವನು. ಸುಮಾರು ಎಂಟು ಯುವಕರ ಗುಂಪು ಗವಟೂರಿನ ನೆಹರು ಬಡವಾಣೆಯಲ್ಲಿ ಶಶಿಕುಮಾರ್ ಮೇಲೆ ದಾಳಿ ಮಾಡಿ, ಚಾಕು ಇರಿದಿದೆ.
ಯುವತಿಯೊಬ್ಬಳ ವಿಚಾರವಾಗಿ ಗಲಾಟೆಯಾಗಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಿಪ್ಪನ್’ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]