ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಜುಲೈ 2021
ಶಿವಮೊಗ್ಗದ ಎಟಿಎಂ ಕೇಂದ್ರವೊಂದರಲ್ಲಿ ಕಳ್ಳತನ ಯತ್ನವಾಗಿದೆ. ಎಟಿಎಂ ಮೆಷಿನ್ ಒಡೆದು ಹಾನಿಗೊಳಿಸಿ, ಹಣ ದೋಚಲು ಪ್ರಯತ್ನಿಸಲಾಗಿದೆ.
ಇದನ್ನೂ ಓದಿ | ಸ್ಕ್ರೂಡ್ರೈವರ್, ಸ್ಪಾನರ್ ಬಳಸಿ ಭದ್ರಾವತಿಯಲ್ಲಿ ಎಟಿಎಂ ಮೆಷಿನ್ ಒಡೆಯಲು ಯತ್ನ
ಇಲ್ಲಿನ ಬಿ.ಹೆಚ್.ರಸ್ತೆಯಲ್ಲಿ ಎಟಿಎಂ ಕೇಂದ್ರದಲ್ಲಿ ಕಳ್ಳರು ಎಟಿಎಂ ಮೆಷಿನ್ ಹಾನಿಗೊಳಿಸಿದ್ದಾರೆ. ಮೆಷಿನ್ ಒಡೆದು ಹಣ ದೋಚಲು ಪ್ರಯತ್ನಿಸಿದ್ದಾರೆ. ಕಳ್ಳರ ಕೃತ್ಯದಿಂದ ಎಟಿಎಂ ಮೆಷನ್ ಹಾನಿಗೊಳಲಾಗಿದೆ.
ಹಣ ಸಿಗದೆ ಬರಿಗೈಲಿ ವಾಪಸ್
ಎಟಿಎಂ ಮೆಷಿನ್ ಒಡೆದರೂ ಕಳ್ಳರಿಗೆ ಹಣ ಸಿಕ್ಕಿಲ್ಲ. ಮೆಷಿನ್ನಲ್ಲಿದ್ದ ಹಣದ ಬ್ಲಾಕ್ ಒಡೆಯಲು ಸಾಧ್ಯವಾಗಿಲ್ಲ. ಹಾಗಾಗಿ ಎಟಿಎಂನ ಒಳಗಿದ್ದ ಹಣ ಭದ್ರವಾಗಿ ಉಳಿದುಕೊಂಡಿದೆ. ಶನಿವಾರ ರಾತ್ರಿ ಅಥವಾ ಭಾನುವಾರ ಘಟನೆ ಸಂಭವಿಸಿರುವ ಸಾಧ್ಯತೆ ಇದೆ. ಇವತ್ತು ಬ್ಯಾಂಕ್ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿದಾಗ ಕಳ್ಳತನ ಯತ್ನ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ | ಎಟಿಎಂನಿಂದ ಹಣ ತೆಗೆದುಕೊಡುವ ನೆಪದಲ್ಲಿ ಶಿವಮೊಗ್ಗದಲ್ಲಿ ಹೊಳೆಹೊನ್ನೂರು ರೈತನಿಗೆ ಮೋಸ, ಹೇಗಾಯ್ತು ವಂಚನೆ?
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
VIDEO NEWS
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200