SHIVAMOGGA LIVE NEWS |10 JANUARY 2023
ಶಿವಮೊಗ್ಗ : ಬಜರಂಗದಳ ಸಹ ಸಂಚಾಲಕ ಸುನಿಲ್ ಮೇಲೆ ದಾಳಿಗೆ ಯತ್ನಿಸಿದ ಪ್ರಕರಣ (attack case) ಸಂಬಂಧ ಪ್ರಮುಖ ಆರೋಪಿ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಯೊಬ್ಬಳನ್ನು ಚುಡಾಯಿಸಿದ್ದೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ಸಮೀರ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿಚಾರಣೆ ನಡೆಯುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. (attack case)
ಸ್ನೇಹಿತರ ಪಾತ್ರದ ಕುರಿತು ವಿಚಾರಣೆ
ಬಿ.ಹೆಚ್.ರಸ್ತೆಯಲ್ಲಿರುವ ಲಾಡ್ಜ್ ನಲ್ಲಿ ಸಮೀರ್ ನ ಸ್ನೇಹಿತರು ತಂಗಿದ್ದರು. ಕ್ರಿಕೆಟ್ ಆಡಲು ಬಂದಿದ್ದವರು ಅಲ್ಲಿ ಉಳಿದುಕೊಂಡಿದ್ದರು. ಅದಕ್ಕಾಗಿ ಸಮೀರ್ ಅಲ್ಲಿಗೆ ಬಂದಿದ್ದ. ಆಗ ಅದೆ ರಸ್ತೆಯಲ್ಲಿ ಸುನಿಲ್ ಬಂದಾಗ ಘಟನೆ ಸಂಭವಿಸಿದೆ. ಪ್ರಕರಣದಲ್ಲಿ ಸಮೀರನ ಸ್ನೇಹಿತರ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು. (attack case)
ಇದನ್ನೂ ಓದಿ – ಸಾಗರ ಪಟ್ಟಣ ಬಂದ್, ಅಂಗಡಿ ಮುಂಗಟ್ಟು ಕ್ಲೋಸ್, ರಸ್ತೆಗಿಳಿದ ಹಿಂದೂ ಕಾರ್ಯಕರ್ತರು
ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಇನ್ನು, ಸುನಿಲ್ ಮತ್ತು ಸಮೀರ್ ನಡುವೆ ಹಲವು ದಿನದಿಂದ ಜಗಳ ನಡೆಯುತ್ತಿತ್ತು. ಸಮೀರನ ಸಹೋದರಿಗೆ ಸನಿಲ್ ಚುಡಾಯಿಸಿದ್ದ. ಆಕೆಯ ನಂಬರ್ ಕೊಡುವಂತೆ ಸಮೀರ್ ಗೆ ಸುನಿಲ್ ಫೋನ್ ಮಾಡಿದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಹೇಳಿಕೆಯ ವಿಡಿಯೋ ಇಲ್ಲಿದೆ.