SHIVAMOGGA LIVE NEWS | 3 ಮಾರ್ಚ್ 2022
ಶಿವಮೊಗ್ಗದ ಮಹಾದೇವಿ ಟಾಕೀಸ್ ಮುಂಭಾಗ ಸೆಕ್ಯೂರಿಟಿ ಗಾರ್ಡ್ ಒಬ್ಬರ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಮಧ್ಯರಾತ್ರಿ ಘಟನೆ ಸಂಭವಿಸಿದೆ.
ಮಣಿ (68) ಎಂಬವವರು ಹಲ್ಲೆಗೊಳಗಾದವರು. ಮಹಾದೇವಿ ಟಾಕೀಸ್ ಮುಂಭಾಗ ಖಾಸಗಿ ಶಾಲೆಗಳ ಬಸ್ ನಿಲುಗಡೆ ಸ್ಥಳವಿದೆ. ಅದರ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಏನಿದು ಘಟನೆ?
ಫೆ.28ರ ನಡುರಾತ್ರಿ ಮಹಾದೇವಿ ಟಾಕೀಸ್ ಮುಂಭಾಗ ಖಾಸಗಿ ಶಾಲೆಗಳ ಬಸ್ ನಿಲುಗಡೆ ಸ್ಥಳಕ್ಕೆ ವ್ಯಕ್ತಿಯೊಬ್ಬ ಬಂದಿದ್ದಾನೆ. ತನ್ನನ್ನು ಹೊಸಮನೆಯ ಚಂದ್ರು ಎಂದು ಪರಿಚಯಿಸಿಕೊಂಡಿದ್ದಾನೆ. ತಾನು ಮಾಚೇನಹಳ್ಳಿಗೆ ಕೆಲಸಕ್ಕೆ ಹೋಗಬೇಕು. ಸ್ವಲ್ಪ ಹೊತ್ತು ಇಲ್ಲಿ ಮಲಗುತ್ತೇನೆ ಎಂದು ತಿಳಿಸಿದ್ದಾನೆ. ಸೆಕ್ಯೂರಿಟಿ ಮಣಿ ಅವರು ಇದಕ್ಕೆ ಒಪ್ಪದಿದ್ದಾಗ ಕಲ್ಲಿನಿಂದ ಹೊಡೆದು ಓಡಿ ಹೋಗಿದ್ದಾನೆ.
ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.