ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020
ಹಿಂದೂ ಮುಖಂಡರ ಹತ್ಯೆ ಮಾಡಿ, ಹಿಂದು ಸಮಾಜದಲ್ಲಿ ಭೀತಿ ಹುಟ್ಟಿಸಲು ಯತ್ನಿಸುತ್ತಿರುವ SDPI, PFI ಮತ್ತು KFD ಸಂಘಟನೆಗಳನ್ನು ನಿಷೇಧ ಮಾಡಬೇಕು ಒಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಿದ್ಧವಾಗಿದ್ದ ಹಲವರನ್ನು ಬಂಧಿಸಲಾಗಿದೆ. ಇವರಿಗೆಲ್ಲ SDPI, PFI ಮತ್ತು KFD ಸಂಘಟನೆಗಳ ಜೊತೆ ನಂಟು ಇರುವುದು ಗೊತ್ತಾಗಿದೆ. ಹಾಗಾಗಿ ಈ ಸಂಘಟನೆಯ ಎಲ್ಲ ಜಿಲ್ಲೆಗಳ ಮುಖಂಡರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾದವ್, ಜಿಲ್ಲಾ ಕಾರ್ಯದರ್ಶಿ ನಟರಾಜ್, ಬಜರಂಗದಳ ಜಿಲ್ಲಾ ಸಂಚಾಲಕ ನಾರಾಯಣ್ ಜೀ ವರ್ಣೇಕರ್, ದೀನದಯಾಳು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
- ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಸಿದವರಿಗೆ ಇವತ್ತು ನಿರ್ಣಾಯಕ, ಸ್ವಲ್ಪ ಯಾಮಾರಿದ್ದರೂ ಕಣದಿಂದಲೇ ಹೊರಕ್ಕೆ
- ಡಿವೈಡರ್ ಬಳಿ ನಿಂತಿದ್ದ ಬೈಕ್ಗೆ ಕಾರು ಡಿಕ್ಕಿ, ಸವಾರನ ಮೂಳೆಗಳು ಕಟ್
- ಹೊಸಗುಂದದಲ್ಲಿ ಶೃಂಗೇರಿ ಶ್ರೀ, ದೇವರ ಪ್ರತಿಷ್ಠಾಪನೆ, ಮಹಾರುದ್ರ ಯಾಗದ ಪೂರ್ಣಾಹುತಿ
- ಪಿಯುಸಿ ನಂತರ ಮುಂದೇನು? ಕಾಮರ್ಸ್ ವಿದ್ಯಾರ್ಥಿಗಳಿಗೆ ಶಿವಮೊಗ್ಗದಲ್ಲಿ ಉಚಿತ ಕಾರ್ಯಾಗಾರ, ಎಲ್ಲಿ? ಯಾವಾಗ?
- ಚಾನಲ್ನಲ್ಲಿ ಬಟ್ಟೆ ಒಗೆದು ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಆಘಾತ, ಆಗಿದ್ದೇನು?
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]