ಶಿವಮೊಗ್ಗ : ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಸೇರಿದಂತೆ ವಿವಿಧ ಮಾಹಿತಿಗೆ ಕರ್ನಾಟಕ ನೀರಾವರಿ ನಿಗಮ ಸಹಾಯವಾಣಿ ಆರಂಭಿಸಿದೆ. 08282-256338 ಗೆ ಕಚೇರಿ ಅವಧಿಯಲ್ಲಿ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಜಲಾಶಯದ ನೀರಿನ ಮಟ್ಟ, ಪ್ರವಾಹದಿಂದಾಗುವ ನೀರಿನ ಮಟ್ಟ, ನೀರಿನ ಕಾಲುವೆಗಳ ಸುಸ್ಥಿತಿ, ದುಸ್ಥಿತಿಯ ಬಗ್ಗೆ ಮತ್ತು ನಾಲೆಗಳಲ್ಲಿ ನೀರು ಹರಿಸುವ, ನಿಲ್ಲಿಸುವ ಸೇರಿದಂತೆ ವಿವಿಧ ಮಾಹಿತಿಗಳನ್ನು ಇಲ್ಲಿ ಪಡೆಯಬಹುದಾಗಿದೆ ಎಂದು ಭದ್ರಾ ಯೋಜನಾ ಬಿ.ಆರ್.ಪ್ರಾಜೆಕ್ಟ್ ಅಧೀಕ್ಷಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.