ಶಿವಮೊಗ್ಗದ ಲೈವ್.ಕಾಂ | THIRTAHALLI NEWS | 17 ಫೆಬ್ರವರಿ 2022
ಎಗ್ ರೈಸ್ ತಿನ್ನಲು ಬಂದ ಯುವಕನೊಬ್ಬನಿಗೆ ಬೈಕ್ ಡಿಕ್ಕಿಯಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಮಂಡಗದ್ದೆ ಸಮೀಪದ 17ನೇ ಮೈಲಿ ಕಲ್ಲು ಬಳಿ ಘಟನೆ ಸಂಭವಿಸಿದೆ. ರಾಜೇಶ್ ಎಂಬುವವರಿಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದರು.
ರಾಜೇಶ್ ಅವರ ಸಂಬಂಧಿಯೊಬ್ಬರು ಎಗ್ ರೈಸ್ ತಿನ್ನಲು ಬರುವಂತೆ ತಿಳಿಸಿದ್ದರು. ಮನೆಯಿಂದ ಹೊರ ಬಂದ ರಾಜೇಶ್ ಅವರು ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿಯಾಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಬೈಕ್ ಅತಿ ವೇಗವಾಗಿ ಬಂದು ಡಿಕ್ಕಿ ಹೊಡದಿದೆ.
ಘಟನೆಯಲ್ಲಿ ರಾಜೇಶ್ ಅವರ ಕಾಲು, ಕೈಗೆ ಗಾಯವಾಗಿದೆ. ಕೂಡಲೆ ಅವರನ್ನು 108 ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಘಟನೆ ಸಂಬಂಧ ಬೈಕ್ ಸವಾರ ರಹಮತುಲ್ಲಾ ಎಂಬುವವರ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.