SHIVAMOGGA LIVE NEWS | 27 ಮಾರ್ಚ್ 2022
ರಾತ್ರಿ ಮಾರಿಕಾಂಬ ಜಾತ್ರೆಗೆ ಹೋಗಿ ಬಂದಾಗ ಇದ್ದ ಬೈಕು ಬೆಳಗಾಗುವುದರಲ್ಲಿ ಕಳ್ಳತನವಾಗಿದೆ ಎಂದು ಶಿವಮೊಗ್ಗದ ಫೋಟೊಗ್ರಾಫರ್ ಒಬ್ಬರು ದೂರು ನೀಡಿದ್ದಾರೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇತನ್ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಆಲ್ಕೊಳ ಸಮೀಪದ ಆದಿ ಶಂಕರಚಾರ್ಯಾ ಲೇಔಟ್’ನಲ್ಲಿ ಘಟನೆ ಸಂಭವಿಸಿದೆ.
ಚೇತನ್ ಅವರು ಮಾರ್ಚ್ 24ರಂದು ಕುಟಂಬ ಸಹಿತ ಕಾರಿನಲ್ಲಿ ಮಾರಿಜಾತ್ರೆಗೆ ತೆರಳಿ, ಪೂಜೆ ಮುಗಿಸಿ ರಾತ್ರಿ ಮರಳಿದ್ದರು. ಆಗ ತಮ್ಮ ಬೈಕು ಮನೆ ಮುಂದೆ ಇತ್ತು. ಬೆಳಗ್ಗೆ ಮನೆಯಿಂದ ಹೊರ ಬಂದು ನೋಡಿದಾಗ ಬೈಕ್ ಕಾಣೆಯಾಗಿತ್ತು.
ಎಲ್ಲೆಡೆ ಹುಡುಕಾಡಿದ ಚೇತನ್ ಅವರು, ಬೆಳಿಕ ವಿನೋಬನಗರ ಠಾಣೆಗೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200