ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021
ಹಣಗೆರೆಯಲ್ಲಿ ಪೂಜೆ ಸಲ್ಲಿಸಿ ಮರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ದಂಪತಿ ಗಾಯಗೊಂಡಿದ್ದಾರೆ. ಬೇರೊಂದು ವಾಹನದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಹಿಂತಿರುಗಿದಾಗ, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ.
ಶಿವಮೊಗ್ಗದ ಇನಾಯತ್ ಉಲ್ಲಾ ಅವರ ಬೈಕ್ ಕಳುವಾಗಿದೆ. ತಮ್ಮ ಪತ್ನಿ ಜೊತೆಗೆ ಅವರು ಹಣಗೆರೆ ಕಟ್ಟೆಗೆ ತೆರಳಿ, ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದರು. ಸಿರಿಗೆರೆ ಅರಣ್ಯ ಚೆಕ್ ಪೋಸ್ಟ್ ಸಮೀಪ ಬೈಕ್ ಸ್ಕಿಡ್ ಆಗಿದೆ.
ಕಾರಲ್ಲಿ ಆಸ್ಪತ್ರೆಗೆ ದಂಪತಿ
ಸ್ಕಿಡ್ ಆಗಿ ಅಪಘಾತಕ್ಕೀಡಾಗಿದ್ದ ಇನಾಯತ್ ಉಲ್ಲಾ ದಂಪತಿಗೆ ಕಾರಿನಲ್ಲಿ ಬಂದವರೊಬ್ಬರು ನೆರವಾಗಿದ್ದರು. ತಮ್ಮದೆ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಪಡೆದು ಬೈಕ್ ತೆಗೆದುಕೊಂಡು ಹೋಗಲು ಇನಾಯತ್ ಉಲ್ಲಾ ಅವರು ಸಿರಿಗೆರೆ ಚೆಕ್ ಪೋಸ್ಟ್ ಸಮೀಪ ಬಂದಿದ್ದಾರೆ. ಆಗ ಅವರ ಬೈಕ್ ನಾಪತ್ತೆಯಾಗಿತ್ತು.
ತಮ್ಮ ಬೈಕ್ ಹುಡುಕಿ ಕೊಡುವಂತೆ ಇನಾಯತ್ ಉಲ್ಲಾ ಅವರು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200