ಶಿವಮೊಗ್ಗ ಲೈವ್.ಕಾಂ |SHIMOGA NEWS | 7 NOVEMBER 2020
ಶಿವಮೊಗ್ಗದ ಗೋಪಾಳ ಸಮೀಪ ದರೋಡೆಗೆ ಹೊಂಚು ಹಾಕಿದ್ದ ಇಬ್ಬರನ್ನು ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋಪಾಳದಿಂದ ಅನುಪಿನಕಟ್ಟೆಗೆ ಹೋಗುವ ಮಾರ್ಗದಲ್ಲಿ ಇರುವ ಚಾನಲ್ನ ಸೇತುವೆ ಬಳಿ ದರೋಡೆಗೆ ಸಂಚು ರೂಪಿಸಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಜೆ.ಪಿ.ನಗರದ ಜುಬೇರ್ ಅಲಿಯಾಸ್ ಜುಬೇರ್ ಉಲ್ಲಾ (28), ಸಾದಿಕ್ ಶೇಖ್ (35) ಬಂಧಿತರು. ಟಿಪ್ಪು ನಗರದ ಕುಲ್ಡ ರಿಯಾಜ್, ನೇಪಾಳಿ ಸಲ್ಮಾನ್, ಇಂಗ್ಲೀಷ್ ವಾಸ ಎಂಬುವವರು ಪರಾರಿಯಾಗಿದ್ದಾರೆ.
ಬಂಧಿತರಿಂದ ಖಾರದ ಪುಡಿ, ಕಬ್ಬಿಣದ ರಾಡು, ಚಾಕು, ಬೈಕು ಜಪ್ತಿ ಮಾಡಲಾಗಿದೆ. ಡಿವೈಎಸ್ಪಿ ಉಮೇಶ್ ನಾಯ್ಕ್ ಮತ್ತು ಸಿಪಿಐ ಸಂಜೀವ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತುಂಗಾ ನಗರ ಠಾಣೆ ಪಿಎಸ್ಐ ತಿರುಮಲೇಶ್, ಸಿಬ್ಬಂದಿಗಳಾದ ಸೈಯದ್ ಇಮ್ರಾನ್, ಗುರುನಾಯ್ಕ್, ಲಂಕೇಶ್, ಅರುಣ್ ಕುಮಾರ್ ಅವರು ದಾಳಿಯಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]