ಶಿವಮೊಗ್ಗದ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022
ನಗರದ ಖಾಸಗಿ ಬಸ್ ಮಾಲೀಕ ನಿಧನದ ಬಳಿಕ ಅವರ ಸಹೋದರ, ಆತನ ಪುತ್ರ ಮತ್ತು ಕಂಡಕ್ಟರ್ಗಳು 11.65 ಲಕ್ಷ ರೂ. ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಲದೆ ಮೃತ ಮಾಲೀಕನ ಪತ್ನಿ ಮತ್ತು ಮಗಳಿಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ.
ಖಾಸಗಿ ಬಸ್ಗಳ ಮಾಲೀಕ ಮೃತಪಟ್ಟ ಬಳಿಕ ನಾಲ್ಕು ಬಸ್ಗಳಿಂದ 11,65,013 ರೂ. ದೈನಂದಿನ ಕಲೆಕ್ಷನ್ ಆಗಿತ್ತು. ಆದರೆ ಬಸ್ಗಳ ಕಂಡೆಕ್ಟರ್ ಕಲೆಕ್ಷನ್ ಹಣವನ್ನು ಮಾಲೀಕರ ಪತ್ನಿಗೆ ನೀಡದೇ ಸಹೋದರನಿಗೆ ನೀಡಿದ್ದಾರೆ.
ಈ ಬಗ್ಗೆ ಈ ಪ್ರಶ್ನೆ ಮಾಡಿದ್ದಕ್ಕೆ ಅತ್ತಿಗೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಮೃತ ಮಾಲಿಕನ ಪತ್ನಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.