SHIVAMOGGA LIVE NEWS | 14 ಮಾರ್ಚ್ 2022
ಯುವಕರ ತಂಡವೊಂದು ಊರಿನ ಬಸ್ ತಂಗುದಾಣಕ್ಕೆ ಹೊಸ ರೂಪ ನೀಡಿದ್ದಾರೆ. ಕಳೆಗಿಡಗಳನ್ನು ಸ್ವಚ್ಛಗೊಳಿಸಿ, ಬಸ್ ತಂಗುದಾಣಕ್ಕೆ ಬಣ್ಣ ಬಳಿದು ಕಂಗೊಳಿಸುವಂತೆ ಮಾಡಿದ್ದಾರೆ.
ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿ ಯಡೆಹಳ್ಳಿಯ ಗೇರುಬಿಸು ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಬಸ್ ತಂಗುದಾಣ ಹಾಳು ಕೊಂಪೆಯಾಗಿತ್ತು. ಪಂಚಾಯಿತಿ ವತಿಯಿಂದ ನಿರ್ಮಾಣವಾಗಿದ್ದ ತುಂಗುದಾಣದಲ್ಲಿ ನಿಲ್ಲಲು ಜನ ಹೆದರುವಂತಿತ್ತು.
ಭಾನುವಾರದ ಶ್ರಮದಾನ
ARMY ಕ್ಲಬ್ ವತಿಯಿಂದ ಯುವಕರ ತಂಡ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿದೆ. ಭಾನುವಾರ ಶ್ರಮದಾನ ಮಾಡಿ, ಬಸ್ ತಂಗುದಾಣ ಕಂಗೊಳಿಸುವಂತೆ ಮಾಡಿದ್ದಾರೆ. ಯುವಕರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರವಿಕುಮಾರ್ ಎಸ್.ಯಡೆಹಳ್ಳಿ, ಪ್ರಮೋದ್ ಶ್ರೀನಿವಾಸ್, ಸುನಿಲ್ ಶೆಟ್ಟಿ, ಸುಶಾಂತ್, ಚೇತು, ಸೀಬು, ಮುನಾಫ್, ಮಂಜು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200