ಶಿವಮೊಗ್ಗ | ಗಾಡಿಕೊಪ್ಪದಲ್ಲಿ ಕಿರಣ್ ಕೊಲೆ ಪ್ರಕರಣ ಎಂಎಸ್ಐಎಲ್ ಮದ್ಯದ (LIQUOR SHOP) ಅಂಗಡಿಯವರಿಗೆ ಸಂಕಷ್ಟ ತಂದೊಡ್ಡಿದೆ. ಅಪ್ರಾಪ್ತನಿಗೆ ಮದ್ಯ ಮಾರಾಟ ಮಾಡಿದ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ.
ಆಗಸ್ಟ್ 2ರಂದು ನಡುರಾತ್ರಿ, ಹೊಸಮನೆಯ ಕಿರಣ್ ಎಂಬಾತನನ್ನು ಗಾಡಿಕೊಪ್ಪದಲ್ಲಿ ಇಬ್ಬರು ಯುವಕರು ಹತ್ಯೆ ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸುತ್ತಿದ್ದ ಪೊಲೀಸರು, ಈಗ ಮದ್ಯದ ಅಂಗಡಿಯವರ ವಿರುದ್ಧವು ಪ್ರಕರಣ ದಾಖಲು ಮಾಡಿದ್ದಾರೆ.
ಅಪ್ರಾಪ್ತನಿಗೆ ಮದ್ಯ ಮಾರಾಟ ಕೇಸ್
ಕಿರಣನ ಹತ್ಯೆ ಪ್ರಕರಣದ ಆರೋಪಿಯು ಅಪ್ರಾಪ್ತನಾಗಿದ್ದಾನೆ. ಕೊಲೆಗೂ ಮೊದಲು ಅಪ್ರಾಪ್ತ ಎಂಎಸ್ಐಎಲ್ ಮದ್ಯದ ಅಂಗಡಿಗೆ (LIQUOR SHOP) ತೆರಳಿ ಮದ್ಯ ಖರೀದಿಸಿದ್ದ. ಕಿರಣನ ಹತ್ಯೆ ಪ್ರಕರಣದ ವಿಚಾರಣೆ ವೇಳೆ ಈ ವಿಚಾರ ಬಾಯಿ ಬಿಟ್ಟಿದ್ದ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯೆ ಮಾರಾಟ ಮಾಡುವಂತಿಲ್ಲ ಎಂಬ ಕಾನೂನು ಇದೆ. ಆದರೆ ಅಪ್ರಾಪ್ತನಿಗೆ ಮದ್ಯ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ತುಂಗಾ ನಗರ ಠಾಣೆ ಪೊಲೀಸರು ಮದ್ಯದ ಅಂಗಡಿಯವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ – ಸ್ನೇಹಿತರಂತೆ ಮಾತನಾಡಿಸಿದರು, ಪಕ್ಕಕ್ಕೆ ಕರೆದೊಯ್ದು ರಾಬರಿ ಮಾಡಿದರು
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.