SHIVAMOGGA LIVE NEWS | 20 ಮಾರ್ಚ್ 2022
ಪ್ರಿಯಕರನ ಮದುವೆ ದಿನ ಯುವತಿ ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರು ವಿರುದ್ಧ ಕೇಸ್ ದಾಖಲಾಗಿದೆ.
ರೂಪಶ್ರೀ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೀರೆಯಿಂದ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.
ಸಹ್ಯಾದ್ರಿ ಕಾಲೇಜಿನಲ್ಲಿ ಎಂ.ಎ ವಿದ್ಯಭ್ಯಾಸ ಮಾಡುತ್ತಿದ್ದಾಗ ಮಾರ್ನಮಿ ಬೈಲ್ ನಿವಾಸಿ ಮುರುಳಿ ಎಂಬಾತನ ಪರಿಚಯವಾಗಿ, ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಆಗುವುದಾಗಿ ನಂಬಿಸಿದ ಮುರುಳಿ, ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಚೆಗೆ ಮುರುಳಿಯು ರೂಪಶ್ರೀಯನ್ನು ಮದುವೆ ಆಗುವುದಿಲ್ಲ ತಿಳಿಸಿದ್ದ. ಬೇರೊಬ್ಬರೊಂದಿಗೆ ಮದುವೆ ಆಗುತ್ತಿರುವುದಾಗಿ ಹೇಳಿದ್ದ. ಇದರಿಂದ ಮನನೊಂದು ಇವತ್ತು ರೂಪಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕರಣ ಸಂಬಂಧ ಮುರುಳಿ ಮತ್ತು ಆತನಿಗೆ ಮದುವೆ ಆಗಬೇಡ ಎಂದು ಕುಮ್ಮಕ್ಕು ನೀಡಿದ ಭಾಸ್ಕರ್ ಮತ್ತು ದೀಪಕ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ರೂಪಶ್ರೀ ಸಹೋದರ ನೀಡಿದ ದೂರಿನ ಅನ್ವಯ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಪ್ರಿಯಕರನ ಮದುವೆ ದಿನವೇ ಪ್ರಿಯತಮೆ ಆತ್ಮಹತ್ಯೆ, ಕಲ್ಯಾಣ ಮಂಟಪದಿಂದ ಮದುಮಗ ನಾಪತ್ತೆ
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200