ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ 15 ಮಂದಿ ಶಿವಮೊಗ್ಗದಲ್ಲಿ ಅರೆಸ್ಟ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 MARCH 2021 ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ 15 ಆರೋಪಿಗಳನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಸೀರ್(25), ಗಣೇಶ(23), ಅಹಮದ್ ವಜೀದ್(27), ಮೋಹನ್(37), ರಫೀಕ್ ಅಹಮದ್ (40), ರಮೇಶ್(24), ಅಂಜು ಅಲಿಯಾಸ್  ಮಹಮದ್ ಅಶ್ರಫ್ (31), ಶಾಹಿದ್ (30), ಅಮ್ಜಾದ್ ಅಲಿಯಾಸ್ ಅಮ್ಜು  (30), ಅಪ್ಸರ್ ಪಾಷ (35), ವೆಂಕಟೇಶ (30), ತಿರುಮಲೇಶ್ (26), ತಬ್ರೇಜ್ (24), ಅರುಣ (28), ಚಂದ್ರಾ ನಾಯ್ಕ (57) ಬಂಧಿತರು. ತುಂಗಾನಗರ ಠಾಣೆಯಲ್ಲಿ … Read more

ಗಾಡಿಕೊಪ್ಪ ಬಳಿ ತುಂಗಾ ಚಾನಲ್ಗೆ ಬಿದ್ದ ಸಾಗರದ ವ್ಯಕ್ತಿ, ನಡು ರಾತ್ರಿ 80 ಅಡಿಯಿಂದ ರಕ್ಷಣೆ

160321 Rescue of Person from Tunga Channel 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 MARCH 2021 ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ತುಂಗಾ ಚಾನಲ್‍ಗೆ ವ್ಯಕ್ತಿಯೊಬ್ಬ ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ | ಸೆಲ್ಫಿ ಗಂಡಾಂತರ, ತುಂಗಾ ಡ್ಯಾಂನಲ್ಲಿ ಕಾಲು ಜಾರಿ ನದಿಗೆ ಬಿದ್ದ ಯುವಕ, ಪತ್ತೆಯಾಯ್ತು ಮೃತದೇಹ ಸಾಗರದ ಸಂತೋಷ್ (45) ಎಂಬುವವರು ತುಂಗಾ ಚಾನಲ್‍ಗೆ ಬಿದ್ದಿದ್ದರು. ಅವರು ಚಾನಲ್‍ಗೆ ಬೀಳಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಅಗ್ನಿಶಾಮಕ ಸಿಬ್ಬಂದಿಗೆ … Read more

ಶಿವಮೊಗ್ಗದಲ್ಲಿ ಮತ್ತೆ ಸರಗಳ್ಳರ ಹಾವಳಿ, ತಿಲಕನಗರದಲ್ಲಿ ಮಾಂಗಲ್ಯ ಸರ ಕಳ್ಳತನ

Chain Theft Reference Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 MARCH 2021 ಶಿವಮೊಗ್ಗದಲ್ಲಿ ಮತ್ತೆ ಸರಗಳ್ಳರು ಕೈ ಚಳಕ ತೋರಿಸಿದ್ದಾರೆ. ಬೈಕ್‍ನಲ್ಲಿ ಬಂದು ಮಹಿಳೆಯೊಬ್ಬರ ಕೊರಳಲ್ಲಿ ಇದ್ದ ಮಾಂಗಲ್ಯ ಸರ ಎಳೆದೊಯ್ದಿದ್ದಾರೆ. ನಗರದ ಹೃದಯ ಭಾಗ ತಿಲಕನಗರದಲ್ಲಿ ಘಟನೆ ಸಂಭವಿಸಿದೆ. ಸುವರ್ಣಾ (65) ಎಂಬುವವರ ಮಾಂಗಲ್ಯ ಸರ ಕಳ್ಳತನವಾಗಿದೆ. ಎರಡು ಮಾಂಗಲ್ಯವಿದ್ದ 35 ಗ್ರಾಂನ 1.22 ಲಕ್ಷ ರೂ. ಅಂದಾಜು ಮೌಲ್ಯದ ಚಿನ್ನದ ಸರವನ್ನು ಕದ್ದೊಯ್ಯಲಾಗಿದೆ. ಹೇಗಾಯ್ತು ಘಟನೆ? ತಿಲಕನಗರದ 3ನೇ ಅಡ್ಡರಸ್ತೆಯಲ್ಲಿ ಸುವರ್ಣಾ ಅವರ ಮನೆಯಿದೆ. … Read more

ಪತ್ರದಲ್ಲಿ ಇದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮೂರು ಲಕ್ಷ ಕಳೆದುಕೊಂಡ ಶಿವಮೊಗ್ಗದ ಮಹಿಳೆ

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 MARCH 2021 ಬಹುಮಾನದ ಆಸೆ ಹುಟ್ಟಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ಮೂರು ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಹುಮಾನಕ್ಕೆ ಮೊಬೈಲ್ ನಂಬರ್ ಆಯ್ಕೆಯಾಗಿದೆ ಎಂದು ಪತ್ರ ಕಳುಹಿಸಿ, ವಂಚಿಸಲಾಗಿದೆ. ಇದನ್ನೂ ಓದಿ | ಕೌನ್ ಬನೇಗಾ ಕರೋಡ್‌ಪತಿ ಹೆಸರಲ್ಲಿ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರಿಗೆ 1.43 ಲಕ್ಷ ರೂ. ವಂಚನೆ, ವಂಚಿಸಿದ್ದು ಹೇಗೆ? ಶಿವಮೊಗ್ಗದ ವನಿತಾ (29) ಎಂಬುವವರನ್ನು ವಂಚಿಸಲಾಗಿದೆ. ದೆಹಲಿಯ ನಾಪ್ಟಾಲ್‍ ಆನ್‍ಲೈನ್ ಶಾಪಿಂಗ್ ಪ್ರೈವೇಟ್ ಲಿಮಿಟೆಡ್ … Read more

ಶಿವಮೊಗ್ಗ KSRTC ಬಸ್ ನಿಲ್ದಾಣದ ಮುಂದೆ ಫೋಟೊಗ್ರಾಫರ್ ಮೊಬೈಲ್ ಕದ್ದ ಖದೀಮರು

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 MARCH 2021 ಶಿವಮೊಗ್ಗ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಯುವಕರ ಗುಂಪೊಂದು ವ್ಯಕ್ತಿಯೊಬ್ಬರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ಘಟನೆ? ಫೋಟೊಗ್ರಾಫರ್ ಮಧುಸೂದನ್ ಅವರು ಮೈಸೂರಿಗೆ ಹೋಗಲು ಬೆಳಗಿನ ಜಾವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದರು. ಸ್ನೇಹಿತರೊಬ್ಬರು ಬೈಕ್‍ನಲ್ಲಿ ಮಧುಸೂದನ್ ಅವರನ್ನು ಬಸ್ ನಿಲ್ದಾಣದ ಮುಂದೆ ಇರುವ ಲೋಕಾಯುಕ್ತ ಠಾಣೆ ಮುಂದೆ ಬಿಟ್ಟು ತೆರಳಿದರು. ಸ್ನೇಹಿತ ತೆರಳುತ್ತಿದ್ದಂತೆ, ಎದುರಿನಿಂದ … Read more

ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿಯೇ ಇಂಟರ್ಸಿಟಿ ರೈಲಿಗೆ ಸಿಲುಕಿದ ಯುವಕ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 MARCH 2021 ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿಯೇ ಯುವಕನೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಯುವಕನ ಗುರುತು ಪತ್ತೆಯಾಗಿಲ್ಲ. ಬೆಂಗಳೂರು – ಶಿವಮೊಗ್ಗ ಇಂಟರ್‍ಸಿಟಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ರಾತ್ರಿ ಇಂಟರ್‍ಸಿಟಿ ರೈಲು ಭದ್ರಾವತಿಗೆ ಬಂದಾಗ ಘಟನೆ ಸಂಭವಿಸಿದೆ. ನಿಲ್ದಾಣದಿಂದ ರೈಲು ಹೊರಟ ಬಳಿಕ ಘಟನೆ ಬೆಳಕಿಗೆ ಬಂದಿದೆ. ಯುವಕ ಆಕಸ್ಮಿಕವಾಗಿ ರೈಲಿಗೆ ಸಿಲುಕಿದನೋ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ತನಿಖೆಯಿಂದ ತಿಳಿದು ಬರಬೇಕಿದೆ. ಯುವಕನಿಗೆ 25 ವರ್ಷ ಎಂದು ಆಂದಾಜಿಸಲಾಗಿದೆ. … Read more

ಮಲವಗೊಪ್ಪದ ಬೇಕರಿಯಲ್ಲಿ ಬೆಂಕಿ, ಧಗಧಗ ಉರಿದು ಹೋದವು ಫ್ರಿಡ್ಜ್, ಓವನ್, ಪೀಠೋಪಕರಣ

120321 Fire at Malavagoppa Bakery 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 MARCH 2021 ಶಿವಮೊಗ್ಗದ ಬೇಕರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಗೆಗೆ ಮಳಿಗೆಯಲ್ಲಿದ್ದ ವಸ್ತುಗಳೆಲ್ಲವು ಸುಟ್ಟು ಕರಕಲಾಗಿದೆ. ಮಲವಗೊಪ್ಪದ ಶ್ರೀಕೃಷ್ಣ ಬೇಕರಿಯಲ್ಲಿ ರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ವೇಳೆಗಾಗಲೇ ಬೇಕರಿಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ಫ್ರಿಡ್ಜ್, ಓವನ್, ಪೀಠೋಪಕರಣಗಳೆಲ್ಲವು ಸುಟ್ಟು ಹೋಗಿವೆ. ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ … Read more

ಮರ ಕಡಿದು, 37 ತುಂಡು ಮಾಡಿದ್ದ ಆರೋಪಿಗೆ ಒಂದು ವರ್ಷ ಜೈಲು, ದಂಡ, ಏನಿದು ಕೇಸ್?

Shivamogga Court 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 MARCH 2021 ಮರ ಕಡಿದ ಆರೋಪಿಯೊಬ್ಬನಿಗೆ ಒಂದು ವರ್ಷ ಜೈಲು, ದಂಡ ವಿಧಿಸಲಾಗಿದೆ. ಚೋರಡಿ ಗ್ರಾಮದ ಕರಡಿಬೆಟ್ಟದ ಮನ್ನಾ ಕಾಡಿನಲ್ಲಿ ಮರ ಕಡಿಯಲಾಗಿತ್ತು. ಈ ಸಂಬಂಧ ಕಮ್ಮನಹಳ್ಳಿ ನಾಗರಾಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಶಿವಮೊಗ್ಗದ 2ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಆರೋಪಿಗೆ ಒಂದು ವರ್ಷ ಸಾದಾ ಸಜೆ ಮತ್ತು 2 ಸಾವಿರ ರೂ. ದಂಡ ವಿಧಿಸಲಾಗಿದೆ. ಕರ್ನಾಟಕ ಅರಣ್ಯ ನಿಯಮದ … Read more

ಬೈಕ್ ಅಪಘಾತದಂತೆ ಬಿಂಬಿಸಿ ಮಹಿಳೆಯ ಕೊಲೆ, ಮೂವರು ಅರೆಸ್ಟ್, ಏನಿದು ಕೇಸ್? ಹತ್ಯೆಗೇನು ಕಾರಣ?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 12 MARCH 2021 ಮದುವೆ ಆಗುವುದಾಗಿ ನಂಬಿಸಿ ಮಹಿಳೆಯೊಬ್ಬಳ ಹತ್ಯೆ ಮಾಡಿ, ಅಪಘಾತ ಎಂದು ಬಿಂಬಿಸಿದ್ದ ಮೂವರ ಹೆಡೆಮುರಿ ಕಟ್ಟುವಲ್ಲಿ ತೀರ್ಥಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಮ್ಮರಡಿಯ ರವೀಶ್ (32), ಆದರ್ಶ (31) ಮತ್ತು ಚಿಕ್ಕಮಗಳೂರಿನ ಮೂಡಿಗೆರೆಯ ಸಂದೀಪ್ (30) ಬಂಧಿತರು. ತನಿಖೆ ನಡೆಸಿದ ಪೊಲೀಸರಿಗೆ ಇದು ಅಪಘಾತವಲ್ಲ, ಕೊಲೆ ಎಂಬ ಸಂಶಯ ಮೂಡಿತ್ತು. ಏನಿದು ಪ್ರಕರಣ? ಹತ್ಯೆಗೇನು ಕಾರಣ? ಫೆಬ್ರವರಿ 26ರಂದು ಕೊಪ್ಪ ರಸ್ತೆಯ ಜಟ್ಟಿನಮಕ್ಕಿ ಗ್ರಾಮದ ಬಳಿ … Read more

ಭದ್ರಾವತಿ ಶಾಸಕ ಸಂಗಮೇಶ್ವರ್, ಕುಟುಂಬದವರಿಗೆ ಜಾಮೀನು

BK Sangameshwara Bhadravathi BDVT 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 MARCH 2021 ಕಬಡ್ಡಿ ಪಂದ್ಯಾವಳಿ ವೇಳೆ ಗಲಾಟೆ ಪ್ರಕರಣದಲ್ಲಿ ಭದ್ರಾವತಿ ಶಾಸಕ ಸಂಗಮೇಶ್ವರ್ ಸೇರಿ ಏಳು ಜನರ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣ ಸಂಬಂಧ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದೆ. ಇದನ್ನೂ ಓದಿ | ಭದ್ರಾವತಿ ಶಾಸಕ ಸಂಗಮೇಶ್ವರ್ ಪುತ್ರ ಅರೆಸ್ಟ್ ಭದ್ರಾವತಿ ಶಾಸಕ ಸಂಗಮೇಶ್ವರ್, ಪುತ್ರರಾದ ಬಿ.ಎಸ್.ಗಣೇಶ್, ಬಿ.ಎಸ್.ಬಸವೇಶ‍್, ಸಂಗಮೇಶ್ವರ್ ಸಹೋದ ಬಿ.ಕೆ.ಮೋಹನ್, ಅವರ ಪುತ್ರರಾದ ಬಿ.ಎಂ.ರವಿ ಕುಮಾರ್, … Read more