ಮರ ಹತ್ತಿ ಕುಳಿತ ಗ್ರಾ. ಪಂ ಉಪಾಧ್ಯಕ್ಷ, ಬೇಡಿಕೆ ಈಡೇರಿಸೋವರೆಗೆ ಕಳೆಗಿಲಿಯಲ್ವಂತೆ, ಇವರ ಡಿಮಾಂಡ್ ಏನ್ ಗೊತ್ತಾ?
ಶಿವಮೊಗ್ಗ ಲೈವ್.ಕಾಂ | 25 ಮಾರ್ಚ್ 2019 ಹೊಸನಗರ ತಾಲೂಕಿನ ಗ್ರಾಮ ಪಂಚಾಯಿತಿ ಒಂದರ ಉಪಾಧ್ಯಕ್ಷರು, ಪಂಚಾಯಿತಿ ಕಚೇರಿ ಮುಂದಿರುವ ಮರವೇರಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳು, ಜನರು ಎಷ್ಟೇ ಮನವೊಲಿಸಿದರು, ಹಣ ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಅಂತಾ ತಿಳಿಸಿದ್ದಾರೆ. ತಾಲೂಕಿನ ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಮರವೇರಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಅನುದಾನ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಮರವೇರಿ ಕುಳಿತಿದ್ದಾರೆ. … Read more