ಇವತ್ತು ಮಧ್ಯರಾತ್ರಿಯಿಂದ ಭದ್ರಾ ಜಲಾಶಯದ ಎಡ, ಬಲ ನಾಲೆಗಳಿಗೆ ನೀರು

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2020 ಇವತ್ತು ಮಧ್ಯರಾತ್ರಿಯಿಂದ ಭದ್ರಾ ಜಲಾಶಯದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲವಾಗಲಿ ಎಂದು ಜುಲೈ 22ರ ಮಧ್ಯರಾತ್ರಿಯಿಂದ ನಾಲೆಗಳಿಗೆ ನೀರು ಹರಿಸಲಾಗುತ್ತದೆ. ಆದ್ದರಿಂದ ಕಾಲುವೆ ಪಾತ್ರದಲ್ಲಿ ಸಾರ್ವಜನಿರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ಇತರೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ … Read more

ಭದ್ರಾವತಿಯಲ್ಲಿ ಮತ್ತೆ ನಾಲ್ಕು ಮಂದಿಗೆ ಕರೋನ, ಇಬ್ಬರಿಗೆ ಟ್ರಾವಲ್ ಹಿಸ್ಟರಿಯೇ ಇಲ್ಲ, ಯಾರಿಗೆಲ್ಲ ಸೋಂಕು ತಗುಲಿದೆ?

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 18 ಜುಲೈ 2020 ಭದ್ರಾವತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಶುಕ್ರವಾರ ಬಿಡುಗಡೆಯಾಗಿರುವ ವರದಿಯಲ್ಲಿ ನಾಲ್ವರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಪೈಕಿ ಇಬ್ಬರಿಗೆ ಟ್ರಾವಲ್ ಹಿಸ್ಟರಿ ಇಲ್ಲ. ಯಾರಿಗೆಲ್ಲ ಸೋಂಕು ತಗುಲಿದೆ? ಕೆಎಸ್‍ಆರ್‍ಟಿಸಿ ಬಸ್ ಡಿಪೋದ ಹಿಂಭಾಗದಲ್ಲಿ 49 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ತಗುಲಿದೆ. ಇವರು ಇತ್ತೀಚೆಗಷ್ಟೇ ಉಡುಪಿ ಜಿಲ್ಲೆಗೆ ಹೋಗಿ ಬಂದಿದ್ದರು ಎಂದು ಹೇಳಲಾಗುತ್ತಿದೆ. ಇನ್ನು, ಸೀಗೆಬಾಗಿಯ ಯುವಕನೊಬ್ಬನಿಗೆ ಕರೋನ ಪಾಸಿಟಿವ್ ಬಂದಿದೆ. ಈತ ಮಾಚೇನಹಳ್ಳಿ … Read more

ಶಿರಾಳಕೊಪ್ಪದಲ್ಲಿ ಸಹಕಾರ ಬ್ಯಾಂಕ್ ಒಂದರ ಸಿಬ್ಬಂದಿಗೆ ಸೋಂಕು, ಖಾಸಗಿ ಆಸ್ಪತ್ರೆಯ ಮತ್ತೊಬ್ಬ ಸಿಬ್ಬಂದಿಗೂ ಪಾಸಿಟಿವ್

ಶಿವಮೊಗ್ಗ ಲೈವ್.ಕಾಂ | SHIRALAKOPPA NEWS | 18 ಜುಲೈ 2020 ಶಿರಾಳಕೊಪ್ಪದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‍ನ ಸಿಬ್ಬಂದಿ ಒಬ್ಬರಿಗೆ ಸೋಂಕು ತಗುಲಿದ್ದು, ಉಳಿದ ಸಿಬ್ಬಂದಿ ಮತ್ತು ಗ್ರಾಹಕರು ಆತಂಕಕ್ಕೀಡಾಗಿದ್ದಾರೆ. ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಸಿಬ್ಬಂದಿಗೆ ಶುಕ್ರವಾರ ಸೋಂಕು ಇರುವುದು ದೃಢವಾಗಿದೆ. ಮತ್ತೊಂದು ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯ ಮತ್ತೊಬ್ಬ ಸಿಬ್ಬಂದಿಗೆ ಸೋಂಕು ತಗುಲಿದೆ. ಇತ್ತೀಚೆಗೆ ಈ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕರೋನ ಸೋಂಕು ತಗುಲಿತ್ತು. ಈಗ ಅವರ ಸಹಾಯಕಿಗೂ ಕರೋನ ಸೋಂಕು ದೃಢವಾಗಿದೆ. ಚಿತ್ರದುರ್ಗದಿಂದ ಬಂದಿದ್ದ ಯುವತಿಯೊಬ್ಬಳಿಗೆ ಕರೋನ … Read more

ಹೊಸನಗರದ ಇಬ್ಬರಿಗೆ ಕರೋನ, ಇವರಿಗೆ ಸೋಂಕು ತಗುಲಿದ್ದು ಹೇಗೆ?

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 18 ಜುಲೈ 2020 ಬೆಂಗಳೂರಿನಿಂದ ಹೊಸನಗರಕ್ಕೆ ಬಂದಿದ್ದ ಇಬ್ಬರಿಗೆ ಕರೋನ ಸೋಂಕು ತಗುಲಿದೆ. ಶುಕ್ರವಾರ ಬಿಡುಗಡೆಯಾದ ವರದಿಯಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದೆ ಎಂದು ತಿಳಿಸಲಾಗಿದೆ. ಇದರಿಂದ ತಾಲುಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಯಾರಿಗೆಲ್ಲ ಸೋಂಕು ತಗುಲಿದೆ? ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಳಗಲ್ಲು ಗ್ರಾಮದ 31 ವರ್ಷದ ವ್ಯಕ್ತಿ ಮತ್ತು ಮಾವಿನಕಟ್ಟೆ ಸಮೀಪದ ಸಾವಂತೂರು ಗ್ರಾಮದ 29 ವರ್ಷದ ವ್ಯಕ್ತಿಗೆ ಕರೋನ ಸೋಂಕು ದೃಢವಾಗಿದೆ. ಬೆಂಗಳೂರಿನಿಂದ … Read more

ಸಾಗರದಲ್ಲಿ ಏಳು ಮಂದಿಗೆ ಕರೋನ, ಲಾರಿ ಚಾಲಕನಿಂದ ಕುಟುಂಬದ ಮೂವರಿಗೆ ಸೋಂಕು

ಶಿವಮೊಗ್ಗ ಲೈವ್.ಕಾಂ | SAGARA NEWS | 18 ಜುಲೈ 2020 ಸಾಗರ ತಾಲೂಕಿನಲ್ಲಿ ಶುಕ್ರವಾರ ಏಳು ಮಂದಿಗೆ ಕರೋನ ಸೋಂಕು ತಗುಲಿರುವು ದೃಢವಾಗಿದೆ. ಈ ಪೈಕಿ ಮೂವರಿಗೆ ಲಾರಿ ಚಾಲಕರೊಬ್ಬರಿಂದ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ. ಯಾರಿಗೆಲ್ಲ ಸೋಂಕು ತಗುಲಿದೆ? ಚಾಲಕನಿಂದ ಮೂವರಿಗೆ ಸೋಂಕು | ಆನಂದಪುರದಲ್ಲಿ ಲಾರಿ ಚಾಲಕರೊಬ್ಬರಿಗೆ ಕರೋನ ಸೋಂಕು ತಗುಲಿತ್ತು. ಮೂರು ದಿನದ ಹಿಂದೆ ಇದು ದೃಢವಾಗಿತ್ತು. ಈಗ ಚಾಲಕನ ಪುತ್ರ, ಸೊಸೆ ಮತ್ತು ಮೊಮ್ಮಗನಿಗೆ ಕರೋನ ಸೋಂಕು ತಗುಲಿದೆ. ಮತ್ತೊಂದೆಡೆ … Read more

ತೀರ್ಥಹಳ್ಳಿಯಲ್ಲಿ ಐವರಿಗೆ ಕರೋನ, ಮೂವರಿಗೆ ಬೆಂಗಳೂರು ಸಂಪರ್ಕ, ಯಾರಿಗೆಲ್ಲ ಸೋಂಕು ತಗುಲಿದೆ?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 18 ಜುಲೈ 2020 ತೀರ್ಥಹಳ್ಳಿ ತಾಲೂಕಿನಲ್ಲಿ ದಿನೆ ದಿನೆ ಕಾರೋನ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಶುಕ್ರವಾರ ಜಿಲ್ಲಾಡಳಿತ ಪ್ರಕಟಿಸಿದ ವರದಿಯಲ್ಲಿ ಐವರಿಗೆ ಕರೋನ ಸೋಂಕು ತಗುಲಿರುವುದು ದೃಢವಾಗಿದೆ. ಈ ಪೈಕಿ ಮೂವರಿಗೆ ಬೆಂಗಳೂರಿನ ಸಂಪರ್ಕವಿದೆ. ಯಾರಿಗೆಲ್ಲ ಸೋಂಕು ತಗುಲಿದೆ? ಕೆಎಸ್‍ಆರ್‍ಟಿಸಿ ಚಾಲಕರು | ಸೋಂಕಿತರ ಪೈಕಿ ಇಬ್ಬರು ಕೆಎಸ್‍ಆರ್‍ಟಿಸಿ ಬಸ್ ಚಾಲಕರಾಗಿದ್ದಾರೆ. ಒಬ್ಬರು ಕೋಣಂದೂರು ಮತ್ತು ಇನ್ನೊಬ್ಬರು ಕೋಣಂದೂರು ಸಮೀಪದ ಯೋಗಿಮಳಲಿಯವರು. ಬೆಂಗಳೂರಿನಿಂದ ಬಂದಿದ್ದ ಮಹಿಳೆ | … Read more

ಡ್ರೋಣ್ ಪ್ರತಾಪ್ ವಿರುದ್ಧ ಸಾಗರದ ವಕೀಲರೊಬ್ಬರಿಂದ ಕಂಪ್ಲೇಂಟ್, ಏನಂತ ದೂರು ನೀಡಿದ್ದಾರೆ?

170720 Drone Prathap 1

ಶಿವಮೊಗ್ಗ ಲೈವ್.ಕಾಂ | SAGARA NEWS | 17 ಜುಲೈ 2020 ಡ್ರೋಣ್ ಪ್ರತಾಪ್ ವಿರುದ್ಧ ಸಾಗರ ತಾಲೂಕಿನ ವಕೀಲರೊಬ್ಬರು ದೂರು ನೀಡಿದ್ದಾರೆ. ದೇಶದ ಹೆಸರಿನಲ್ಲಿ ಜನರನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. 600 ಡ್ರೋಣ್ ಸಂಶೋಧನೆ ಮಾಡಿದ್ದು, ಜನರಲ್ಲಿ ತಾನೊಬ್ಬ ವಿಜ್ಞಾನಿ ಎಂದು ನಂಬಿಸಿರುವ ಡ್ರೋಣ್ ಪ್ರತಾಪ್ ವಿರುದ್ಧ ತನಿಖೆ ನಡೆಸಬೇಕು ಎಂದು ವಕೀಲ ಪ್ರವೀಣ್ ಅವರು ದೂರು ನೀಡಿದ್ದಾರೆ. ಪೋಸ್ಟ್ ಮೂಲಕ ಪೊಲೀಸ್ ಮಹಾನಿರ್ದೇಶಕರು ಮತ್ತು ಮಂಡ್ಯ ಜಿಲ್ಲಾ ರಕ್ಷಣಾಧಿಕಾರಿಗೆ ಅವರಿಗೆ ದೂರು … Read more

ಮಗನನ್ನೇ ಸ್ವಯಂ ಕ್ವಾರಂಟೈನ್ಗೆ ಒಳಪಡಿಸಿದ ತೀರ್ಥಹಳ್ಳಿ ಎಂಎಲ್ಎ

Aaraga Jnanendra Thirthahalli MLA 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 17 ಜುಲೈ 2020 ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ, ರಾಜ್ಯದಿಂದ ಬಂದವರ ಕುರಿತು ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಇವರಿಂದಲೇ ಕರೋನ ಹರಡುವ ಸಾದ್ಯತೆ ಹೆಚ್ಚಿದೆ. ಇದೇ ಕಾರಣಕ್ಕೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಮ್ಮ ಮಗನನ್ನೇ ಸ್ವಯಂ ಕ್ವಾರಂಟೈನ್‍ಗೆ ಒಳಪಡಿಸಿ, ಉಳಿದವರಿಗೆ ಮಾದರಿಯಾಗಿದ್ದಾರೆ. ಸ್ವಯಂ ಕ್ವಾರಂಟೈನ್‍ಗೆ ಒಳಪಡಿಸಿದ್ದೇಕೆ? ಬೆಂಗಳೂರಿನಿಂದ ಹಿಂತಿರುಗಿದ ಕಾರಣಕ್ಕೆ ಮಗನನ್ನು ಸ್ವಯಂ ಕ್ವಾರಂಟೈನ್‍ಗೆ ಒಳಪಡಿಸಿದ್ದಾರೆ ಶಾಸಕ ಆರಗ ಜ್ಞಾನೇಂದ್ರ. ಕರೋನ ನಿಯಂತ್ರಣಕ್ಕೆ ತೀರ್ಥಹಳ್ಳಿಯಲ್ಲಿ ಪ್ರಮುಖರ ಸಭೆಯಲ್ಲಿ … Read more

ಭದ್ರಾವತಿಯಲ್ಲಿ ಸಹೋದರರಿಗೆ ಕರೋನ ಪಾಸಿಟಿವ್, ಶಾಸಕರ ಮನೆ ಮುಂಭಾಗದ ರಸ್ತೆ ಸೀಲ್ ಡೌನ್

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಜುಲೈ 2020 ಬೆಂಗಳೂರಿಗೆ ಹೋಗಿ ಹಿಂತಿರುಗಿದ್ದ ಸಹೋದರರಲ್ಲಿ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆ, ಅವರ ಮನೆ ಇರುವ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಭದ್ರಾವತಿಯ ಎನ್‍ಎಂಸಿ ಬಡಾವಣೆಯ ಮೂರನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದ ಸಹೋದರರು ಬೆಂಗಳೂರಿಗೆ ಹೋಗಿ ಹಿಂತಿರುಗಿದ್ದರು. ಜುಲೈ 9ರಂದು ಬೆಂಗಳೂರಿನಿಂದ ಹಿಂತಿರುಗುತ್ತಿದ್ದಂತೆ ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರು. ಜುಲೈ 11ರಂದು ಕರೋನ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಹೋದರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ … Read more

ಆನಂದಪುರ ಸಮೀಪದ ಹಳ್ಳಿಯೊಂದರ ಯುವಕನಿಗೆ ಕರೋನ ಪಾಸಿಟಿವ್, ರಸ್ತೆ ಬಂದ್

ಶಿವಮೊಗ್ಗ ಲೈವ್.ಕಾಂ | ANANDAPURA NEWS | 13 ಜುಲೈ 2020 ಯುವಕನೊಬ್ಬನಲ್ಲಿ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದೇಶ್ವರ ಕಾಲನಿಯನ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಯುವಕನನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದೇಶ‍್ವರ ರಸ್ತೆಯ ಮುಖ್ಯ ದ್ವಾರದ ಬಳಿ ಬ್ಯಾರಿಕೇಡ್ ಹಾಕಿ, ಜನ ಮತ್ತು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕಂಟೈನ್ಮೆಂಟ್ ಜೋನ್‍ನಲ್ಲಿ ಯಾರೊಬ್ಬರು ಮನೆಯಿಂದ ಹೊರ ಬಾರದಂತೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆ, ಪೊಲೀಸರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ … Read more