ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಟ್ರಾಕ್ಟರ್, ಕೆಳಗೆ ಸಿಲುಕಿ ಚಾಲಕ ಸಾವು

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | RIPPONPETE NEWS | 28 ಮೇ 2020 ಕೆರೆಗೆ ಟ್ರಾಕ್ಟರ್ ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದಾರೆ. ಹೊಸನಗರ ತಾಲೂಕು ರಿಪ್ಪನ್‍ಪೇಟೆ ಸಮೀಪದ ಮಾದಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕೊರಟಿಕೆರೆ ತೋಟಪ್ಪ ಎಂಬುವವರ ಮೊಮ್ಮಗ ಚಂದ್ರಶೇಖರ (22) ಮೃತ ಚಾಲಕ. ಸೊರಬದಿಂದ ತನ್ನ ಅಜ್ಜನ ಮನೆಗೆ ಬಂದಿದ್ದ ಚಂದ್ರಶೇಖರ, ಹೂಟಿ ಮಾಡಲು ಜಮೀನಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಒಡ್ಡಿನಕೆರೆಗೆ ಪಲ್ಟಿಯಾಗಿದೆ. ಈ ವೇಳೆ ಟ್ರಾಕ್ಟರ್ ಕೆಳಗೆ ಸಿಲುಕಿದ ಚಂದ್ರಶೇಖರ್ ಸ್ಥಳದಲ್ಲೇ … Read more

ನರಸೀಪುರದ ನಾಟಿ ವೈದ್ಯ ನಾರಾಯಣಮೂರ್ತಿ ಮನೆಗೆ ಸಚಿವ, ಶಾಸಕರ ಭೇಟಿ, ಏನೆಲ್ಲ ಚರ್ಚೆಯಾಯ್ತು? ಔಷಧಿ ಯಾವಾಗ ಸಿಗುತ್ತೆ?

280520 Narasipura Nati Vaidya Narayanamurthy 1

ಶಿವಮೊಗ್ಗ ಲೈವ್.ಕಾಂ | SAGARA NEWS | 28 ಮೇ 2020 ನರಸೀಪುರದ ನಾಟಿ ವೈದ್ಯ ನಾರಾಯಣಮೂರ್ತಿ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದ್ದರು. ಜನರಿಗೆ ಔಷಧಿ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಇಲ್ಲಿಗೆ ಬರುವವರಿಗೆ ಯಾರೂ ಅಡ್ಡಿಪಡಿಸದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಮೇಘಾಲಯದ ಸಚಿವರಿಗೆ ಔಷಧ ಲಾಕ್‍ಡೌನ್ ಸಂದರ್ಭದ ಮೇಘಾಲಯ ರಾಜ್ಯದ ಸಚಿವರೊಬ್ಬರು ಔಷಧ ಬೇಕು ಎಂದು ತಿಳಿಸಿದ್ದರು. … Read more

ಸಾಗರ ಐಬಿ ಸರ್ಕಲ್‌ನಲ್ಲಿ ಕಾರು, ಬೈಕ್ ಡಿಕ್ಕಿ, ವಾಹನಗಳ ಮುಂಭಾಗ ಜಖಂ, ಒಬ್ಬನಿಗೆ ಗಂಭೀರ ಗಾಯ

250520 Car and Bike Accident in Sagara 1

ಶಿವಮೊಗ್ಗ ಲೈವ್.ಕಾಂ | SAGARA | 26 ಮೇ 2020 ಸಾಗರ ಪಟ್ಟಣದ ಐಬಿ ಸರ್ಕಲ್‍ನಲ್ಲಿ ಮಾರುತಿ ಓಮ್ನೆ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೂಸಂತೆಯ ಮಾರುತಿ (27) ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಕೂಡಲೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಅಪಘಾತದ ರಭಸಕ್ಕೆ ಕಾರು ಮತ್ತು ಬೈಕ್‍ನ ಮುಂಭಾಗ ನುಜ್ಜುಗುಜ್ಜಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. … Read more

ಕರೋನ ಸೋಂಕಿತರ ವಿರುದ್ಧ ತೀರ್ಥಹಳ್ಳಿ, ಶಿವಮೊಗ್ಗದ ತುಂಗಾ ನಗರ ಠಾಣೆಗಳಲ್ಲಿ ಕೇಸ್, ಕಾರಣವೇನು? ಕೇಸ್ ಹಾಕಿದ್ಯಾರು?

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಮೇ 2020 ಅಧಿಕೃತ ಪಾಸ್ ಇಲ್ಲದೆ ಅನ್ಯರಾಜ್ಯದಿಂದ ಶಿವಮೊಗ್ಗ ಜಿಲ್ಲೆಗೆ ಬಂದವರ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಐವರ ವರುದ್ಧ ಕೇಸ್ ದಾಖಲಾಗಿದೆ. ಈ ಐವರು ಕರೋನ ಸೋಂಕಿಗೆ ತುತ್ತಾಗಿದ್ದಾರೆ. ಕೇಸ್ 1 | ತೀರ್ಥಹಳ್ಳಿ ಪೊಲೀಸ್ ಠಾಣೆ ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ NDMA ಕಾಯ್ದೆಯ ಸೆಕ್ಷನ್ 51(B) ಅನ್ವಯ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಈ ವ್ಯಕ್ತಿ … Read more

ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ, ಧಗಧಗ ಹೊತ್ತಿ ಉರಿದ ಕಾರು

230520 Car Burnt In Holehonnur 1 1

ಶಿವಮೊಗ್ಗ ಲೈವ್.ಕಾಂ | HOLEHONNURU NEWS | 23 ಮೇ 2020 ಪೂಜೆಗೆಂದು ತೆರಳುತ್ತಿದ್ದವರ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಕೆಲವೆ ಕ್ಷಣದಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 13ರ ಕೂಡ್ಲಿ ಕ್ರಾಸ್ ಬಳಿ ಚಲಿಸುತ್ತಿದ್ದ ಕಾರಿನ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದ ಅಪ್ಪ, ಮಗ ಕೂಡಲೇ ರಸ್ತೆ ಪಕ್ಕಕ್ಕೆ ನಿಲ್ಲಿಸಿ, ಕೆಳಗಿಳಿದಿದ್ದಾರೆ. ಕೆಲವೇ ಕ್ಷಣದಲ್ಲಿ ಕಾರು ಧಗಧಗ ಹೊತ್ತಿ ಉರಿದಿದೆ. ಪೂಜೆಗೆ ಹೊರಟಿದ್ದಾಗ ಅವಘಡ ಶಿವಮೊಗ್ಗದ ನೆಹರು ರಸ್ತೆಯ … Read more

ಮಹಾರಾಷ್ಟ್ರದಿಂದ ಬಂದವರಿಗೆ ರಾತ್ರೋರಾತ್ರಿ ಕ್ವಾರಂಟೈನ್‌ಗೆ ಯತ್ನ, ಭದ್ರಾವತಿ ಜಂಕ್ಷನ್‌ನಲ್ಲಿ ಸ್ಥಳೀಯರ ಆಕ್ರೋಶ

230520 Bhadravathi Junction Quarantine Clash 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 23 ಮೇ 2020 ಮಹಾರಾಷ್ಟ್ರದಿಂದ ಬಂದವರ ಹಾಸ್ಟೆಲ್ ಕ್ವಾರಂಟೈನ್‍ಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಭದ್ರಾವತಿ ತಾಲೂಕು ಜಂಕ್ಷನ್‍ನಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿಗಾಗಲಿ, ಗ್ರಾಮಸ್ಥರಿಗಾಗಲಿ ತಿಳಿಸದೆ ಏಕಾಏಕಿ ಕ್ವಾರಂಟೈನ್ ಮಾಡಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮಹಾರಾಷ್ಟ್ರದಿಂದ ಬಂದಿರುವ 18 ಮಂದಿಯನ್ನು ಇಲ್ಲಿನ ಸರ್ಕಾರಿ ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಲು ಕರೆತರಲಾಗಿತ್ತು. ಗ್ರಾಮಸ್ಥರಿಗೆ ತಿಳಿಸದೆಯೆ ಏಕಾಏಕಿ ಬಂದು ಕ್ವಾರಂಟೈನ್ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಭದ್ರಾವತಿ ಗ್ರಾಮಾಂತರ ಠಾಣೆ … Read more

ಸೋನಿಯಾ ಗಾಂಧಿ ವಿರುದ್ಧ ಸಾಗರದಲ್ಲಿ ಕೇಸ್, ಇನ್ಸ್‌ಪೆಕ್ಟರ್‌ ಅಮಾನತಿಗೆ ಶಿವಮೊಗ್ಗದಲ್ಲಿ ಪ್ರೊಟೆಸ್ಟ್

220520 FIR against Sonia Gandhi in Sagara 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಮೇ 2020 ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಸಾಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದು ಜಿಲ್ಲಾ ಕಾಂಗ್ರೆಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಸೋನಿಯಾ ಗಾಂಧಿ ವಿರುದ್ದ ಕೇಸ್ ಯಾಕೆ? ಪಿಎಂ ಕೇರ್ಸ್ ಫಂಡ್‍ ಪ್ರಧಾನಿ ಅವರ ವೈಯಕ್ತಿಕ ಕೇರ್ ಫಂಡ್ ಆಗಿದೆ. ಈ ಹಣವನ್ನು ಸದುಪಯೋಗ ಮಾಡುತ್ತಿಲ್ಲ ಎಂದು INC India ಟ್ವಿಟರ್ … Read more

ಮಹಿಳೆಗೆ ಕರೋನ ಪಾಸಿಟಿವ್, ಹಳೆ ಸೊರಬ ಈಗ ಕಂಟೈನ್ಮೆಂಟ್ ಜೋನ್, ಹೇಗಿದೆ ಪರಿಸ್ಥಿತಿ?

210520 Soraba Sanitization Corona 1

ಶಿವಮೊಗ್ಗ ಲೈವ್.ಕಾಂ | SORABA NEWS | 21 ಮೇ 2020 ಸೊರಬ ತಾಲೂಕನಲ್ಲಿ ಮೊದಲ ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಮಹಿಳೆಯೊಬ್ಬರಲ್ಲಿ ಕರೋನ ಪತ್ತೆಯಾಗಿದ್ದು, ಅವರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಟ್ರಾವಲ್ ಹಿಸ್ಟರಿ ಪರಿಶೀಲನೆ ಹಳೆ ಸೊರಬದ 60 ವರ್ಷದ ಮಹಿಳೆಯೊಬ್ಬರಿಗೆ ಕರೋನ ಸೋಂಕು ತಗುಲಿದೆ. ತೀವ್ರ ಉಸಿರಾಟ ತೊಂದರೆ ಸೋಂಕು (SARI) ಪತ್ತೆಯಾದ ಹಿನ್ನೆಲೆ, ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಮಹಿಳೆಯ ಟ್ರಾವಲ್ ಹಿಸ್ಟರಿ ಪತ್ತೆ ಹಚ್ಚಲಾಗುತ್ತಿದೆ. ಇದರ ಆಧಾರದಲ್ಲಿ ಪ್ರಮೈಮರಿ ಮತ್ತು ಸಕೆಂಡರಿ … Read more

ಪ್ರಧಾನಿ ಮೋದಿ ವಿರುದ್ಧ ಅವಹೇಳನ ಟ್ವೀಟ್, ಸಾಗರದಲ್ಲಿ ದೂರು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 21 ಮೇ 2020 ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್  ಪ್ರಕಟಿಸಿದ ಟ್ವಿಟರ್‌ ಖಾತೆ ವಿರುದ್ಧ ಸಾಗರದಲ್ಲಿ ದೂರು ದಾಖಲಾಗಿದೆ. @INCIndia ಎಂಬ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಗಾಳಿ ಸುದ್ದಿ ಹರಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಟ್ವೀಟರ್ ಖಾತೆಯ ನಿರ್ವಾಹಕರು, ಅಧ್ಯಕ್ಷರು ಮತ್ತು ಸಂಬಂಧಪಟ್ಟವರ ವಿರುದ್ಧ ಸಾಗರದ ವಕೀಲ ಕೆ.ವಿ.ಪ್ರವೀಣ್ ದೂರು ನೀಡಿದ್ದಾರೆ. ಪಿಎಂ ಕೇರ್ಸ್ ಫಂಡ್‍ ಪ್ರಧಾನಿ ಅವರ ವೈಯಕ್ತಿಕ … Read more

ಪಿ1305ಗೆ ಕರೋನ ಸೋಂಕು ತಗುಲಿದ್ದು ಹೇಗೆ ಅನ್ನೋದೇ ನಿಗೂಢ, ಊಹಾಪೋಹದಿಂದ ಕುಂಸಿ, ಚೋರಡಿ ಸುತ್ತಲು ಆತಂಕ

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಮೇ 2020 ಪೇಷೆಂಟ್ ನಂಬರ್ 1305 ಕೇಸ್ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಇವರಿಗೆ ಕರೋನ ಸೋಂಕು ತಗುಲಿದ್ದು ಹೇಗೆ ಅನ್ನುವುದು ಈತನಕ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹಾಗಾಗಿ ಸೋಂಕು ಮತ್ತಷ್ಟು ಜನಕ್ಕೆ ಹರಡಬಹುದೆ ಎಂಬ ಅನುಮಾನ ಮೂಡಿದೆ. ಶಿವಮೊಗ್ಗ ತಾಲೂಕು ಬಾಳೆಕೊಪ್ಪ ಗ್ರಾಮದ ಪಿ1305 ಅವರಿಗೆ ಸೋಂಕು ತಗುಲಿರುವ ಕುರಿತು ನಿನ್ನೆ ಸ್ಟೇಟ್ ಬುಲೆಟಿನ್‍ನಲ್ಲಿ ಪ್ರಕಟಿಸಲಾಗಿದೆ. ಇವರಿಗೆ 63 ವರ್ಷ ವಯಸ್ಸು. ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು … Read more