ಭದ್ರಾವತಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವೈಭದ ವೈಕುಂಠ ಏಕಾದಶಿ, ತನ್ನಿಂತಾನೆ ತೆರೆದುಕೊಳ್ಳುತ್ತವೆ ವೈಕುಂಠದ ಏಳು ಬಾಗಿಲು

060120 bhadravathi vaikunta ekadashi 1

ಶಿವಮೊಗ್ಗ ಲೈವ್.ಕಾಂ | SHIMOGA | 6 ಜನವರಿ 2020 ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಭದ್ರಾವತಿ ನಗರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಬೆಳಗ್ಗೆ ಐದು ಗಂಟೆಗಾಗಲೇ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು. ಬಳಿಕ ದೇವಾಲಯದ ಮುಂದೆ ಸ್ಥಾಪಿಸಲಾಗಿರುವ ಏಳು ಬಾಗಿಲು ತಾನಾಗಿಯೇ ತೆರೆದುಕೊಳ್ಳುವಂತೆ ರೂಪಿಸಲಾಗಿತ್ತು. ಗುಡಿಯೊಳಗೆ ಆಸಿನರಾಗಿದ್ದ ಶ್ರೀ ಲಕ್ಷ್ಮೀ ಹಾಗೂ ನರಸಿಂಹ ಸ್ವಾಮಿಯ ದರ್ಶನವನ್ನು ಸಾವಿರಾರು ಭಕ್ತರು ಪಡೆದುಕೊಂಡರು. ವೈಕುಂಠ ಏಕಾದಶಿಯಂದು 33 ಕೋಟಿ ದೇವತೆಗಳು ನರಸಿಂಹನ ದರ್ಶನಕ್ಕಾಗಿ … Read more

ಎರಡು ಜಿಂಕೆ ಬೇಟೆಯಾಡಿ, ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್, ನಾಲ್ಕು ಮಂದಿ ಎಸ್ಕೇಪ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 6 ಜನವರಿ 2020 ಎರಡು ಜಿಂಕೆಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಇಬ್ಬರನ್ನು ಬಂಧಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನಾಪತ್ತೆ ಆಗಿರುವ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಶಿವಮೊಗ್ಗ ತಾಲೂಕು ಉಂಬಳೆಬೈಲು ಗ್ರಾಮದಲ್ಲಿ ಘಟನೆ ನಡೆದಿದೆ. ಕಣಗಲಸರ ಗ್ರಾಮದ ದಿನೇಶ್ ಮತ್ತು ರಮೇಶ್ ಬಂಧಿತರು. ಇವರಿಂದ 2 ಜಿಂಕೆ ಚರ್ಮ, ಮಾಂಸ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕಣಗಲಸರದ ದಿವಾಕರ್, ನಾಗರಾಜ್, ಉಂಬಳೆಬೈಲಿನ ಶಿವಾನಂದ್, … Read more

ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ, ಸಂಬಂಧಿಕರಿಂದ ಕೊಲೆ ಆರೋಪ

Suicide-Hanging-General

ಶಿವಮೊಗ್ಗ ಲೈವ್.ಕಾಂ | BHADRAVATHI| 4 ಜನವರಿ 2020 ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭದ್ರಾವತಿ ತಾಲೂಕು ಮೈದೊಳಲು ಗ್ರಾಮದಲ್ಲಿ ಘಟನೆ ನಡೆದಿದೆ. ದೀಪಾ (25) ಮೃತ ದುರ್ದೈವಿ. ಮೈದೊಳಲು ಗ್ರಾಮದ ಪ್ರದೀಪ್ ಎಂಬುವವರೊಂದಿಗೆ ದೀಪಾ ವಿವಾಹವಾಗಿದ್ದರು. ಐದು ವರ್ಷದಿಂದಲು ಮಕ್ಕಳಾಗಿರಲಿಲ್ಲ ಎಂದು ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದು ದೀಪಾ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ದೀಪಾಳ … Read more

ಸಕ್ರೆಬೈಲಲ್ಲಿ ನಟ ಶಿವರಾಜ್ ಕುಮಾರ್ ಸಿನಿಮಾ ಶೂಟಿಂಗ್, ನಾಲ್ಕು ಗಂಟೆ ಚಿತ್ರೀಕರಣ, ಏನೇನೆಲ್ಲ ಚಿತ್ರೀಕರಣ ಮಾಡಲಾಯ್ತು?

040120 Shivaraj Kumar in Sakrebyle 1

ಶಿವಮೊಗ್ಗ ಲೈವ್.ಕಾಂ | SHIMOGA | 4 ಜನವರಿ 2020 ಸಕ್ರೆಬೈಲು ಆನೆ ಬಿಡಾರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾದ ಶೂಟಿಂಗ್ ನಡೆಯಿತು. ಆನೆ ಮೇಲೆ ಕುಳಿತು ಹೋಗುವ ಸೀನ್ ಮತ್ತು ಆನೆಗೆ ಸ್ನಾನ ಮಾಡಿಸುವ ಸೀನ್’ಗಳನ್ನು ಶೂಟಿಂಗ್ ಮಾಡಲಾಯಿತು. ಇದಕ್ಕಾಗಿ ಸಕ್ರೆಬೈಲು ಆನೆ ಬಿಡಾರದ ಕ್ರಾಲ್ ಏರಿಯಾ ಮತ್ತು ತುಂಗಾ ನದಿ ತೀರದಲ್ಲಿ ಚಿತ್ರೀಕರಣ ಮಾಡಲಾಯಿತು. ಸತತ ನಾಲ್ಕು ಗಂಟೆ ಕಾಲ ಆನೆ ಬಿಡಾರದಲ್ಲಿ ನಟ ಶಿವರಾಜ್ ಕುಮಾರ್ ಅವರು … Read more

ಸಾಗರ ಮಾರಿಕಾಂಬ ಜಾತ್ರೆಗೆ ಚಾಲನೆ, ನೆರವೇರಿತು ಮರ ಗುರುತಿಸುವ ಕಾರ್ಯ, ಏನಿದು ಸಂಪ್ರದಾಯ? ವಿಶೇಷತೆ ಏನು?

ಶಿವಮೊಗ್ಗ ಲೈವ್.ಕಾಂ | SAGARA | 31 ಡಿಸೆಂಬರ್ 2019 ಇತಿಹಾಸ ಪ್ರಸಿದ್ಧ ಮಾರಿಕಾಂಬ ಜಾತ್ರೆಗೆ ಸಾಗರದಲ್ಲಿ ವಿದ್ಯುಕ್ತ ಚಾಲನೆ ಸಿಕ್ಕಿದೆ. ಇವತ್ತು ಮರ ಗುರುತಿಸಿ, ಕಡಿಯುವ ಶಾಸ್ತ್ರ ನೆರವೇರಿಸಲಾಯಿತು. ಬೃಹತ್ ಹಲಸಿನ ಮರವನ್ನು ಗುರುತಿಸಲಾಗಿದೆ. ಏನಿದು ಮರ ಕಡಿಯುವ ಶಾಸ್ತ್ರ? ಮಾರಿಕಾಂಬ ಜಾತ್ರೆಗೂ ಮೊದಲು ಮರು ಗುರುತಿಸಿ, ಕಡಿಯಲಾಗುತ್ತದೆ. ರವಿ ಪೋತರಾಜ ಅವರು ಮರ ಗುರುತಿಸಿದರು. ಬಿ.ಹೆಚ್.ರಸ್ತೆಯ ಪೊಲೀಸ್ ವಸತಿ ಗೃಹದ ಬಳಿ ಇರುವ ಬೃಹತ್ ಹಲಸಿನ ಮರವನ್ನು ಗುರುತಿಸಲಾಗಿದೆ. ಮರ ಇರುವ ಮನೆ ಮಾಲೀಕರ … Read more

ತಾಳಗುಪ್ಪದಲ್ಲೇ ಆಗಬೇಕು ರೈಲ್ವೆ ಟರ್ಮಿನಲ್, ಕೊಂಕಣ ರೈಲ್ವೆಗೂ ಬೇಕು ಕನೆಕ್ಷನ್, ಸಾಗರ ರೈಲ್ವೆ ಸ್ಟೇಷನ್ ಮುಂದೆ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | SAGARA | 31 ಡಿಸೆಂಬರ್ 2019 ತಾಳಗುಪ್ಪದಲ್ಲೇ ರೈಲ್ವೆ ಟರ್ಮಿನಲ್ ನಿರ್ಮಿಸಬೇಕು ಮತ್ತು ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿ ಮಲೆನಾಡು ರೈಲ್ವೆ ಹೋರಾಟ ಸಮಿತಿ ನೇತೃತ್ವದಲ್ಲಿ ಇವತ್ತು ಪ್ರತಿಭಟನೆ ನಡೆಸಲಾಯಿತು. ಗಣಪತಿ ದೇವಸ್ಥಾನದಿಂದ ಸಾಗರ ರೈಲ್ವೆ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಯಿತು. ತಾಳಗುಪ್ಪದಲ್ಲೇ ರೈಲ್ವೆ ಟರ್ಮಿನಲ್ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಾಗರ ತಾಲೂಕು ತಾಳಗುಪ್ಪದಲ್ಲಿ ರೈಲ್ವೆ ಟರ್ಮಿನಲ್ ನಿರ್ಮಿಸಲಾಗತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ ಶಿವಮೊಗ್ಗದ ಕೋಟೆ ಗಂಗೂರಿನಲ್ಲಿ ಟರ್ಮಿನಲ್ … Read more

ಜಿಲ್ಲಾ ಪಂಚಾಯಿತಿ ಸದಸ್ಯೆಯನ್ನು ಅರೆಸ್ಟ್ ಮಾಡಿದ ಪೊಲೀಸ್, ಆನಂದಪುರ ಆಹಾರ ಘಟಕದ ಮುಂದೆ ಹೈಡ್ರಾಮಾ

ಶಿವಮೊಗ್ಗ ಲೈವ್.ಕಾಂ | SHIMOGA | 30 ಡಿಸೆಂಬರ್ 2019 ಪೌಷ್ಠಿಕ ಆಹಾರ ಘಟಕ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ ನಡೆಸಿದ ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರನ್ನು, ಪೊಲೀಸರು ಬಂಧಿಸಿದ್ದಾರೆ. ಇದರಿಂದಾಗಿ ಕೆಲಕಾಲ ಆನಂದಪುರದ ಆಹಾರ ಘಟಕದ ಮುಂದೆ ಹೈಡ್ರಾಮಾ ನಡೆಯಿತು. ಈ ವೇಳೆ, ತಮ್ಮ ಬಂಧನ ಕ್ರಮವೇ ತಪ್ಪು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಆರೋಪ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರತಿಭಟಿಸಿದ್ದೇಕೆ? ಆನಂದಪುರದಲ್ಲಿ ಸಾಗರ ಮತ್ತು ಸೊರಬ ತಾಲೂಕು ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಘಟಕವಿದೆ. … Read more

ಊಟ ಮಾಡ್ತಿದ್ದ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷನನ್ನು ಮನೆಯಿಂದ ಹೊರಗೆ ಕರೆಯಿಸಿ ಚೂರಿ ಇರಿತ

ಶಿವಮೊಗ್ಗ ಲೈವ್.ಕಾಂ | BHADRAVATHI | 29 ಡಿಸೆಂಬರ್ 2019 ಭದ್ರಾವತಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಗ್ರಾಮದಲ್ಲಿ ಘಟನೆ ನಡೆದಿದೆ. ಶಾಂತಕುಮಾರ್ (50) ಅವರ ಮೇಲೆ ಹಲ್ಲೆಯಾಗಿದೆ. ಹೇಗಾಯ್ತು ಘಟನೆ? ಕಾರಣವೇನು? ಶನಿವಾರ ರಾತ್ರಿ ಶಾಂತಕುಮಾರ್ ಅವರು ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ, ಅದೇ ಗ್ರಾಮದ ಮೂವರು ಮನೆಗೆ ಬಂದಿದ್ದಾರೆ. ಶಾಂತಕುಮಾರ್ ಅವರನ್ನು … Read more

ಕೋಡೂರು ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಫೋನ್ ಮಾಡಿದ, ಬಟ್ಟಮಲ್ಲಪ್ಪ ಮಹಿಳೆ ಬ್ಯಾಂಕ್ ಖಾತೆಯಿಂದ ಹಣ ದೋಚಿದ

Hosanagara Police Station General Image 1

ಶಿವಮೊಗ್ಗ ಲೈವ್.ಕಾಂ | HOSANAGARA | 29 ಡಿಸೆಂಬರ್ 2019 ಕೋಡೂರು ಕೆನರಾ ಬ್ಯಾಂಕ್’ನ ಅಧಿಕಾರಿ ಎಂದು ನಂಬಿಸಿ ಮಹಿಳೆಯೊಬ್ಬರನ್ನು ವಂಚಿಸಿ, ಅವರ ಅಕೌಂಟ್’ನಿಂದ ಹಣ ದೋಚಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಘಟನೆ? ಹೊಸನಗರ ಬಟ್ಟೆಮಲ್ಲಪ್ಪ ಗ್ರಾಮದ ಛಾಯಾ (23) ಎಂಬುವವರಿಗೆ ವಯಕ್ತಿಯೊಬ್ಬರ ಕರೆ ಮಾಡಿದ್ದಾನೆ. ತನ್ನನ್ನು ಕೋಡೂರು ಕೆನರಾ ಬ್ಯಾಂಕ್ ಅಧಿಕಾರಿ ಎಂದು ಪರಿಚಿಯಿಸಿಕೊಂಡಿದ್ದಾನೆ. ನಿಮ್ಮ ಎಟಿಎಂ ಕಾರ್ಡ್ ಅವಧಿ ಮುಕ್ತಾಯವಾಗಿದೆ. ನವೀಕರಿಸಲು ಎಟಿಎಂ ಕಾರ್ಡ್ … Read more

ತೀರ್ಥಹಳ್ಳಿ | ಅದ್ಧೂರಿ ತೆಪ್ಪೋತ್ಸವ, ಒಂದೂವರೆ ಗಂಟೆ ಪಟಾಕಿ ಪ್ರದರ್ಶನ, ಹೇಗಿತ್ತು ಗೊತ್ತಾ ವೈಭವ?

ಶಿವಮೊಗ್ಗ ಲೈವ್.ಕಾಂ | THIRTHAHALLI | 29 ಡಿಸೆಂಬರ್ 2019 ತೀರ್ಥಹಳ್ಳಿಯ ತುಂಗಾ ನದಿ ದಂಡೆ ಮೇಲೆ ಎಳ್ಳಮವಾಸ್ಯೆಯ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಬಾನಂಗಳದಲ್ಲಿ ಸಿಡಿಮದ್ದುಗಳ ಆಕರ್ಷಕ ಚಿತ್ತಾರ ಜನರ ಕಣ್ಮನ ಸೆಳೆಯಿತು. ತುಂಗಾ ನದಿಯಲ್ಲಿ ಶ್ರೀರಾಮೇಶ್ವರ ದೇವರ ಉತ್ಸವಮೂರ್ತಿಯ ಆಕರ್ಷಕ ತೆಪ್ಪೋತ್ಸವ ನಡೆಯಿತು. ವಿಭಿನ್ನ ಆಲಂಕಾರದ ತೆಪ್ಪವನ್ನು ಸಿದ್ಧಪಡಿಸಲಾಗಿತ್ತು. ತೆಪ್ಪೋತ್ಸವ ಕಣ್ತುಂಬಿಕೊಂಡ ಜನರು, ದೇವರಿಗೆ ನಮಿಸಿದರು. ಒಂದೂವರೆ ಗಂಟೆಯ ಸಿಡಿಮದ್ದು ಪ್ರದರ್ಶನ ರಾಮ ದೇವರಿಗೆ ತೆಪ್ಪೋತ್ಸವದ ದೀಪ ಬೆಳಗುತ್ತಿದ್ದಂತೆ ಸಿಡಿಮದ್ದು ಪ್ರದರ್ಶನ ಆರಂಭವಾಯಿತು. ಸುಮಾರು ಒಂದೂವರೆ … Read more