ಶಿವಮೊಗ್ಗ ಸಾಗರ ರಸ್ತೆಯಲ್ಲಿ ಮತ್ತೊಂದು ಖಾಸಗಿ ಬಸ್ ಅಪಘಾತ, ಪ್ರಯಾಣಿಕರು ಸೇಫ್

ಶಿವಮೊಗ್ಗ ಲೈವ್.ಕಾಂ | SAGARA | 16 ಅಕ್ಟೋಬರ್ 2019 ಶಿವಮೊಗ್ಗ ಸಾಗರ ರಸ್ತೆಯಲ್ಲಿ ಮತ್ತೊಂದು ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಅತಿ ವೇಗವೆ ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ಆನಂದಪುರ ಬಳಿಯ ಹೊಸೂರು ರೈಲ್ವೆ ಗೇಟ್ ಬಳಿ ರೈಲ್ವೆ ತಡೆಗೋಡೆಗೆ ಬಸ್ ಡಿಕ್ಕಿಯಾಗಿದೆ. ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಹೋಗಿದೆ. ಬಸ್ಸಿನಿಂದ ಕೆಳಗಿಳಿಯಲು ಪ್ರಯಾಣಿಕರ ಹರಸಾಹಸ ರೈಲ್ವೆ ತಡೆಗೋಡೆಗೆ ಡಿಕ್ಕಿಯಾಗಿದ್ದರಿಂದ ಬಸ್ಸಿನ … Read more

ತೀರ್ಥಹಳ್ಳಿಯಲ್ಲಿ ಉಗ್ರರ ಬಂಧನವೆ ಸುಳ್ಳು, ವದಂತಿ ತಳ್ಳಿ ಹಾಕಿದ ಪೊಲೀಸರು, ಆದರೆ ದಿಢೀರ್ ತಪಾಸಣೆ ಮಾಡಿದ್ಯಾಕೆ ಗೊತ್ತಾ?

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | THIRTHAHALLI | 16 ಅಕ್ಟೋಬರ್ 2019 ತೀರ್ಥಹಳ್ಳಿಯಲ್ಲಿ ಶಂಕಿತ ಭಯೋತ್ಪಾದಕರ ಬಂಧನವಾಗಿದೆ ಎಂಬ ವದಂತಿ ಹಬ್ಬಿದೆ. ಇದರಿಂದ ಜನರು ಆತಂಕಕ್ಕೀಡಾಗಿದ್ದಾರೆ. ಆದರೆ ಜಿಲ್ಲಾ ಪೊಲೀಸ್ ಇಲಾಖೆ ಮಾತ್ರ ಉಗ್ರರ ಬಂಧನ ವಿಚಾರವನ್ನು ತಳ್ಳಿಹಾಕಿದೆ. ಸುರಾನಿ ಎಂಬ ಗ್ರಾಮದಲ್ಲಿ ಶಿವಮೊಗ್ಗ ಪೊಲೀಸರು ಮಂಗಳವಾರ ಭಾರಿ ತಲಾಷ್ ನಡೆಸಿದ್ದಾರೆ. ಇಲ್ಲಿನ ತೋಟದ ಮನೆಯೊಂದರಲ್ಲಿ ಪೊಲೀಸರು ಕೆಲ ಹೊತ್ತು ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಬ್ಯಾರಿಕೇಡ್’ಗಳನ್ನು ಹಾಕಲಾಗಿದೆ. ಇಲ್ಲಿ ಓಡಾಡುವ ವಾಹನಗಳ ತಪಾಸಣೆ … Read more

ಮನೆಯವರನ್ನು ಭೂಮಿ ಹುಣ್ಣಿಗೆ ಪೂಜೆಗೆ ಕಳುಹಿಸಿ, ಒಂದೆ ಸೀರೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಅತ್ಮಹತ್ಯೆ

Suicide-Hanging-General

ಶಿವಮೊಗ್ಗ ಲೈವ್.ಕಾಂ | BHADRAVATHI | 14 ಅಕ್ಟೋಬರ್ 2019 ಖಿನ್ನತೆಗೆ ಒಳಗಾಗಿ ಭೂಮಿ ಹುಣ್ಣಿಮೆಯಂದು ದಂಪತಿ ನೇಣಿಗೆ ಶರಣಾಗಿದ್ದಾರೆ. ಮನೆಯವರನ್ನು ಪೂಜೆ ಕಳುಹಿಸಿ, ಒಂದೆ ಸೀರಿಗೆ ನೇಣು ಬಿಗಿದುಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್ (32) ಮತ್ತು ಪಾರ್ವತಿ (27) ಮೃತ ದಂಪತಿ. ಭದ್ರಾವತಿ ತಾಲೂಕು ಅಗರದಳ್ಳಿ ಕ್ಯಾಂಪ್’ನಲ್ಲಿ ಭಾನುವಾರ ಮಧ್ಯಾಹ್ನ ಘಟನೆ ನಡೆದಿದೆ. ಭೂಮಿ ಹುಣ್ಣಿಮೆ ಪೂಜೆಗಾಗಿ ಮನೆಯಲ್ಲಿ ಅಡುಗೆ ಸಿದ್ಧಪಡಿಸಿ, ಕುಟುಂಬದವರನ್ನು ಪೂಜೆ ಕಳುಹಿಸಿದ್ದರು. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್, ಪಾರ್ವತಿ … Read more

ಸೊರಬದಲ್ಲಿ ಅಂದರ್ ಬಾಹರ್ ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ, 12 ಮಂದಿ ಅರೆಸ್ಟ್

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | SORABA | 14 ಅಕ್ಟೋಬರ್ 2019 ಸೊರಬ ಜೂನಿಯರ್ ಕಾಲೇಜು ಬಳಿ ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 12 ಜನರನ್ನು ಅರೆಸ್ಟ್ ಮಾಡಲಾಗಿದೆ. ಜೂನಿಯರ್ ಕಾಲೇಜಿನ ಜೋತಾಡೆ ಕಟ್ಟಡದಲ್ಲಿದ್ದ ಜನತಾ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್’ನಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಡಿಸಲಾಗುತ್ತಿತ್ತು. ಶಿಕಾರಿಪುರದ ಎಎಸ್’ಪಿ ನಿವಾಸಲು ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ದಾಳಿಯಲ್ಲಿ 95,360 ರೂ. ನಗದು, ಟೇಬಲ್, ಚೇರು, ಇಸ್ಪಿಟ್ ಕಾರ್ಡುಗಳನ್ನು ವಶಕ್ಕೆ ಪಡೆಯಲಾಗಿದೆ. … Read more

ಆಯತಪ್ಪಿ ಕೆರೆಗೆ ಬಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುತ್ರ ಕೊನೆಯುಸಿರು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 14 ಅಕ್ಟೋಬರ್ 2019 ಆಯತಪ್ಪಿ ಕೆರೆ ಬಿದ್ದು ಯುವಕನೊಬ್ಬ ಕೊನೆಯುಸಿರೆಳೆದಿದ್ದಾನೆ. ಸಾಗರ ತಾಲೂಕಿನ ಹೊಸಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಗೌತಮ್ (21) ಮೃತ ಯುವಕ. ಗೆಳೆಯರೊಂದಿಗೆ ಭಾನುವಾರ ಮಧ್ಯಾಹ್ನ ಗುಮ್ಮನಹಳ್ಳಿ ಕೆರೆಗೆ ಹೋಗಿದ್ದಾಗ ಘಟನೆ ನಡೆದಿದೆ. ಆಯತಪ್ಪಿ ನೀರಿಗೆ ಬಿದ್ದಿರುವ ಶಂಕೆ ಇದೆ. ಗೌತಮ್, ಗೌತಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ರೇವಪ್ಪ ಅವರ ಪುತ್ರ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.   ಶಿವಮೊಗ್ಗ ಲೈವ್.ಕಾಂ … Read more

ರಾಮೇಶ್ವರ ದೇವಸ್ಥಾನ ಕಳ್ಳತನ ಕೇಸ್, ಕಿಮ್ಮನೆ ಹೆಸರು ಹಾಳು ಮಾಡಲು ಯತ್ನ, ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ

Kimmane Rathnakar General Image 1

ಶಿವಮೊಗ್ಗ ಲೈವ್.ಕಾಂ | THIRTHAHALLI | 10 ಸೆಪ್ಟೆಂಬರ್ 2019 ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಹೆಸರನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ವಿನಾಕಾರಣ ಪ್ರಸ್ತಾಪಿಸುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ತಾಲೂಕು ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕೆಳಕೆರೆ, ಬಿಜೆಪಿ ಯುವ ಮೋರ್ಚಾದವರು ನಿರಂತರ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಶ್ರೀ ರಾಮೇಶ್ವರ ದೇವಸ್ಥಾನದಲ್ಲಿನ … Read more

ಗುಂಡಿ ಬಿದ್ದ ರಸ್ತೆ ಮುಂದೆ ಬೈಕ್ ಉರುಳಿಸಿ, ಡಿಫರೆಂಟ್ ಪ್ರತಿಭಟನೆ ಮಾಡಿದ ಯುವಕರು

ಶಿವಮೊಗ್ಗ ಲೈವ್.ಕಾಂ | SAGARA | 10 ಅಕ್ಟೋಬರ್ 2019 ಇಲ್ಲಿ ಬಿದ್ದು ಗಾಯಗೊಂಡವರಿಗೆ ಲೆಕ್ಕವಿಲ್ಲ. ಜಗದ್ವಿಖ್ಯಾತ ಜೋಗ ಜಲಪಾತದ ಹಾದಿಯಲ್ಲಿ ಬರಿ ಗುಂಡಿಗಳೋ ಗುಂಡಿಗಳು.. ರಸ್ತೆ ಗುಂಡಿ ಮುಂದೆ ಯುವಕರ ಡಿಫರೆಂಟ್ ಪ್ರತಿಭಟನೆ. ಸಾಗರ ತಾಳಗುಪ್ಪ ನಡುವೆ ಗಾಳಿಪುರ ಸೇತುವೆ ಬಳಿ ರಸ್ತೆಯಲ್ಲಿ ಭಾರಿ ಗುಂಡಿಗಳಾಗಿವೆ. ಇವುಗಳಿಂದಾಗಿ ಜಾರಿಬಿದ್ದು ಹಲವು ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದಾರೆ. ಗುಂಡಿಗಳಿಗೆ ಮುಕ್ತಿ ನೀಡುವಂತೆ ಅಧಿಕಾರಿಗಳಿಗೆ ಎಷ್ಟೆ ಮನವಿ ಮಾಡಿದರು ಪ್ರಯೋಜವಾಗಿಲ್ಲ. ಹಾಗಾಗಿ ಸ್ಥಳೀಯ ಯುವಕರು ಗುಂಡಿ ಮುಂದೆ ನಿಂತು … Read more

‘ಮಲೆನಾಡು ರೈತರಿಗೆ ಕರಾವಳಿ ಮಾದರಿಯಲ್ಲಿ ನೆರೆ ಪರಿಹಾರ ಕೊಡಲಿ’

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI | 10 ಸೆಪ್ಟೆಂಬರ್ 2019 ನೆರೆಯಿಂದ ಹಾನಿಗೊಳಗಾಗಿರುವ ಮಲೆನಾಡು ಭಾಗದ ರೈತರಿಗೆ ಕರಾವಳಿ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದ ನೆರೆಪೀಡಿತ ರೈತರಿಗೆ ಕಡಿಮೆ ಪರಿಹಾರ ಸಿಗುತ್ತಿದೆ. ಹಾಗಾಗಿ ಕರಾವಳಿ ಮಾದರಿಯಲ್ಲಿ ಪರಿಹಾರ ವಿತರಿಸಬೇಕು. ಅಡಕೆ ತೋಟಕ್ಕೆ ನೀಡಲಾಗುತ್ತಿರುವ ಮೈಲುತುತ್ತ ಸಹಾಯಧನವನ್ನು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು. ಕೃಷಿಕ ಸಮಾಜದ ಉಪಾಧ್ಯಕ್ಷ ಕಿಮ್ಮನೆ ಕೃಷ್ಣಮೂರ್ತಿ, ಖಜಾಂಚಿ … Read more

ನದಿಯಲ್ಲಿ ಈಜಲು ಹೋಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ನೀರನಲ್ಲಿ ಮುಳುಗಿ ಸಾವು

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA | 9 ಅಕ್ಟೋಬರ್ 2019 ಸ್ನೇಹಿತರ ಜೊತೆಗೆ ನದಿಯಲ್ಲಿ ಈಜಲು ತೆರಳಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಶಶಾಂಕ್ (17) ಮೃತ ಯುವಕ. ಕುಮದ್ವತಿ ನದಿಗೆ ಈಜಲು ತೆರಳಿದ್ದ ಶಶಾಂಕ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ. ಶಶಾಂಕ್, ವಿನಾಯಕ ಬಡಾವಣೆ ನಿವಾಸಿ ಸತೀಶ್ ಎಂಬುವವರ ಪುತ್ರ. ಘಟನೆ ಕುರಿತು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   … Read more

ಭದ್ರಾವತಿಯಲ್ಲಿ ವಿಜಯದಶಮಿ ಮೆರವಣಿಗೆ ಜೋರು, ಹೇಗಿತ್ತು ಗೊತ್ತಾ ವೈಭವ?

ಶಿವಮೊಗ್ಗ ಲೈವ್.ಕಾಂ | BHADRAVATHI | 9 ಅಕ್ಟೋಬರ್ 2019 ಭದ್ರಾವತಿಯಲ್ಲಿ ವೈಭವದಿಂದ ವಿಜಯದಶಮಿ ಆಚರಿಸಲಾಯಿತು. ಲೋಯರ್ ಹುತ್ತಾದ ಶ್ರೀ ತಿರುಮಲ ದೇವಸ್ಥಾನದಲ್ಲಿ ಶಾಸಕ ಸಂಗಮೇಶ್ವರ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ 40ಕ್ಕೂ ಹೆಚ್ಚು ದೇವಾನುದೇವತೆಗಳು ಪಾಲ್ಗೊಂಡಿದ್ದವು. ಅಲ್ಲವೆ ವಿವಿಧ ಕಲಾ ತಂಡಗಳು ಮೆರವಣಿಗೆ ಮೆರಗು ಹೆಚ್ಚಿಸಿದವು. ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ ಸಾಗಿದ ಮೆರವಣಿಗೆ, ಕನಕ ಮಂಟಪ ಮೈದಾನದಕ್ಕೆ ತಲುಪಿತು. ಕನಕ ಮಂಟಪ ಮೈದಾನದಲ್ಲಿ ಬನ್ನಿ ಮಂಟಪ ಸ್ಥಾಪಿಸಲಾಗಿತ್ತು. … Read more