ಲಿಂಗನಮಕ್ಕಿ ಜಲಾಶಯದಿಂದ ಹೊರಬಿತ್ತು ಮೊದಲ ಅಲರ್ಟ್

-Linganamakki-Dam-General-Image

ಸಾಗರ | ಭಾರಿ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಡ್ಯಾಂನಲ್ಲಿ ನೀರಿನ ಮಟ್ಟವು ಏರಿಕೆಯಾಗಿದೆ. ಈ ನಡುವೆ ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಲಿಂಗನಮಕ್ಕಿ ಜಲಾಶಯದ ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಜಲಾಶಯಕ್ಕೆ ಇವತ್ತು 30,397 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ತಿಂಗಳು ಭಾರಿ ಮಳೆಯಾದ ಹಿನ್ನೆಲೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ಒಳ ಹರಿವು ದಾಖಲಾಗಿತ್ತು. ಈಗ ಜಲಾನಯನ ಪ್ರದೇಶದಲ್ಲಿ ಪುನಃ ಮಳೆ ಜೋರಾಗಿದ್ದು, ಒಳ ಹರಿವು … Read more

ಅರಣ್ಯಾಧಿಕಾರಿಗಳಿಗೆ ಎಂಎಲ್ಎ ಕ್ಲಾಸ್, ರೈತರ ಮಕ್ಕಳಿಗೆ ಸ್ಲೇಟ್ ಹಿಡಿಸಿದ್ದಕ್ಕೆ ಆಕ್ರೋಶ

Haratalu-Halappa-in-KDP-meeting-at-Sagara

ಸಾಗರ |  ಮಲೆನಾಡಿನಲ್ಲಿ ಕಾಡು ಉಳಿಯಲು ರೈತರು ಕಾರಣವೆ ಹೊರತು ಅರಣ್ಯ (FOREST) ಇಲಾಖೆಯಲ್ಲ. ಕಾಡು ಉಳಿಸಿದ ರೈತರ ಕೈಗೆ ಸ್ಲೇಟ್ ನೀಡಿ, ಭಯೋತ್ಪಾದಕರ ಹಾಗೆ ಫೋಟೊ ಹೊಡೆಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿರುವುದು ಸರಿಯಲ್ಲ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು. ಸಾಗರದ ಸಾಮರ್ಥ್ಯ ಸೌಧದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ ಅವರು, ಅರಣ್ಯ ಇಲಾಖೆ ರೈತರ ಮಕ್ಕಳ ವಿರುದ್ಧ ಇಲ್ಲಸಲ್ಲದ ಕೇಸ್ ದಾಖಲು … Read more

ಕಾರು, ಬಸ್ಸು ಮುಖಾಮುಖಿ ಡಿಕ್ಕಿ ಕೇಸ್, ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ

head-on-collision-between-car-and-bus-at-talguppa-sagara

ಸಾಗರ |  ತಾಳಗುಪ್ಪ ಸಮೀಪ ಸಂಭವಿಸಿದ ಅಪಘಾತದಲ್ಲಿ (ACCIDENT) ಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಂಭೀರ ಗಾಯಗೊಂಡಿದ್ದ ಬಾಲಕ ರಿಹಾನ್ (14) ಮೃತಪಟ್ಟಿದ್ದಾನೆ. ಸಾಗರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಯಿತು. ಈ ಸಂದರ್ಭ ರಿಯಾನ್ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ತಾಳಗುಪ್ಪದ ಆಲಳ್ಳಿಯಲ್ಲಿ ಸೋಮವಾರ ಸಂಜೆ ಭೀಕರ ಅಪಘಾತ (ACCIDENT) ಸಂಭವಿಸಿತ್ತು. ಘಟನೆಯಲ್ಲಿ ಕಾರು ಚಾಲಕ ಶಾಭಾಜ್ (23) ಸ್ಥಳದಲ್ಲೇ … Read more

BREAKING NEWS – ಜೋಗ ನೋಡಿ ಹಿಂತಿರುಗುತ್ತಿದ್ದಾಗ ಭೀಕರ ಅಪಘಾತ

head-on-collision-between-car-and-bus-at-talguppa-sagara

ಸಾಗರ | ಜೋಗ ಜಲಪಾತ (JOG FALLS) ವೀಕ್ಷಣೆ ಮಾಡಿ ಹಿಂತಿರುಗುತ್ತಿದ್ದ ಕುಟುಂಬದವರಿದ್ದ ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿದೆ (ACCIDENT). ಘಟನೆಯಲ್ಲಿ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದು, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಾಲಕ ಶಾಬಾಜ್ (23) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ರಿಹಾನ್(14), ತಬಸ್ಸುಮ್(23), ಶಿಫಾ(27), ಖಮರುನ್ನಿಸಾ (45), ಜಬ್ರುನ್(55), ಮಹಮ್ಮದ್ ಉಸ್ಮಾನ್(25) ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಬಸ್ಸಿನ ಮುಂಭಾಗಕ್ಕೂ ಹಾನಿ ಉಂಟಾಗಿದೆ. ಗಾಯಾಳುಗಳನ್ನು ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ … Read more

ಕೂಲಿ ಕೆಲಸಕ್ಕೆ ಹೋದವರ ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆ

theft case general image

ಸಾಗರ | ಕೂಲಿ ಕಾರ್ಮಿಕರೊಬ್ಬರ ಮನೆಗೆ ನುಗ್ಗಿರುವ ಕಳ್ಳರು ಚಿನ್ನಾಭರಣವನ್ನು ಕಳ್ಳತನ (THEFT) ಮಾಡಿದ್ದಾರೆ. ತಾಲೂಕಿನ ಬೊಮ್ಮತ್ತಿಯಲ್ಲಿನ ಕೂಲಿ ಕಾರ್ಮಿಕರ ಮನೆಯಲ್ಲಿ 70 ಸಾವಿರ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳ ಕಳವು ಮಾಡಲಾಗಿದ್ದು, ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಬೊಮ್ಮತ್ತಿಯ ರಾಮಪ್ಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಬೀರುವಿನಲ್ಲಿ ಇಡಲಾಗಿದ್ದ 12 ಗ್ರಾಂ ತೂಕದ 4 ಜತೆ ಬಂಗಾರದ ಓಲೆ, 10 ಗ್ರಾಂ ತೂಕದ 2 ಜತೆ ಬೆಳ್ಳಿಯ ಗೆಜ್ಜೆಗಳನ್ನು ಕಳ್ಳತನ … Read more

ಸೇನೆಯ ಅಗ್ನಿಪಥ್ ನೇಮಕಾತಿಗೆ ಯೋಧರು, ಮಾಜಿ ಯೋಧರಿಂದ ಉಚಿತ ತರಬೇತಿ

Indian-Army-Training-at-Anandapuram

SHIVAMOGGA LIVE NEWS ಸಾಗರ | ಹಾವೇರಿಯಲ್ಲಿ ನಡೆಯಲಿರುವ ಸೇನೆಯ (ARMY) ಅಗ್ನಿಪಥ್ (AGNIPATH) ನೇಮಕಾತಿಗೆ ಉಚಿತ ತರಬೇತಿ ನೀಡಲು ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್ ಸಿದ್ಧತೆ ಮಾಡಿಕೊಂಡಿದೆ. ನೂರು ಅಭ್ಯರ್ಥಿಗಳಿಗೆ ಎಲ್ಲಾ ರೀತಿಯ ತರಬೇತಿ ನೀಡಲು ಯೋಜಿಸಲಾಗಿದೆ. ಸಾಗರ ತಾಲೂಕು ಆನಂದಪುರದ ಶ್ರೀ ಮುರುಘಾಮಠದ ಆವರಣದಲ್ಲಿ ತರಬೇತಿ ಕಾರ್ಯ ನಡೆಯಲಿದೆ. ಆಗಸ್ಟ್ 11ರಿಂದ ಉಚಿತ ತರಬೇತಿ ಆರಂಭವಾಗಲಿದೆ. ರಾಜ್ಯದ ವಿವಿಧೆಡೆಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ. ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು, ಮಾಜಿ ಯೋಧರು ತರಬೇತಿ … Read more

ಮನೆ ಮನೆಗೂ ತಿರಂಗ, ಸಾಗರದಲ್ಲಿ ರೆಡಿಯಾಗ್ತಿದೆ 50 ಸಾವಿರ ರಾಷ್ಟ್ರಧ್ವಜ

National-Flag-Campaign-in-Saragra.

ಸಾಗರ | ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 50 ಸಾವಿರ ತ್ರಿವರ್ಣ ಧ್ವಜ (NATIONAL FLAG) ಹಾರಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಸಾಗರದಲ್ಲಿ ಧ್ವಜ ತಯಾರಿ ಕಾರ್ಯಕ್ಕೆ ಶಾಸಕ ಹರತಾಳು ಹಾಲಪ್ಪ (HARATALU HALAPPA) ಚಾಲನೆ ನೀಡಿದರು. ಪಟ್ಟಣದ ಗಾಂಧಿ ಮೈದಾನದ ನಗರಸಭೆ ರಂಗಮಂದಿರದಲ್ಲಿ ಧ್ವಜ ತಯಾರಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಆಗಸ್ಟ್ 13 ರಿಂದ 15ರವರೆಗೆ ತಾಲೂಕು ಆಡಳಿತ ಮತ್ತು ನಗರಸಭೆ ವತಿಯಿಂದ ಸಾಗರ (SAGARA) ತಾಲೂಕಿನ 50 ಸಾವಿರ ಮನೆಗಳಿಗೆ ಉಚಿತವಾಗಿ ರಾಷ್ಟ್ರಧ್ವಜ ವಿತರಿಸಲು … Read more

ಲಿಂಗನಮಕ್ಕಿ ಜಲಾಶಯಕ್ಕೆ ಇವತ್ತೆಷ್ಟಿದೆ ಒಳ ಹರಿವು?

Linganamakki-Dam-General-Image

SHIVAMOGGA LIVE NEWS | SAGARA| 18 ಜುಲೈ 2022 ಶರಾವತಿ (SHARAVATHI RIVER) ಹಿನ್ನೀರು ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆ ಲಿಂಗನಮಕ್ಕಿ ಜಲಾಶಯಕ್ಕೆ (LINGANAMAKKI DAM) ಒಳ ಹರಿವು ನಿರಂತರವಾಗಿದೆ. ಸಾಗರ (SAGARA) ತಾಲೂಕಿನ ಲಿಂಗನಮಕ್ಕಿ ಜಲಾಶಯಕ್ಕೆ 41,604 ಕ್ಯೂಸೆಕ್ ಒಳ ಹರಿವು ಇದೆ. ಪ್ರಸ್ತುತ ಜಲಾಶಯದಲ್ಲಿ 1795.60 ಅಡಿಯಷ್ಟು ನೀರಿನ ಸಂಗ್ರಹವಿದೆ. ಕಳೆದ ವರ್ಷ ಈ ದಿನ ಲಿಂಗನಮಕ್ಕಿ ಜಲಾಶಯದಲ್ಲಿ 1791.20 ಅಡಿಯಷ್ಟು ನೀರು ಜಲಾಶಯದಲ್ಲಿ ಸಂಗ್ರಹವಾಗಿತ್ತು. ಇದನ್ನೂ ಓದಿ – ADVERTISEMENT ಆರೋಗ್ಯ … Read more

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಕಳೆದ 24 ಗಂಟೆಯಲ್ಲಿ ಎರಡೂವರೆ ಅಡಿಯಷ್ಟು ಏರಿಕೆ

Linganamakki-Dam-General-Image

SHIVAMOGGA LIVE NEWS | SAGARA | 15 ಜುಲೈ 2022 ಸಾಗರ, ಹೊಸನಗರ ಸೇರಿದಂತೆ ಲಿಂಗನಮಕ್ಕಿ ಜಲಾಶಯದ (LINGANAMAKKI DAM) ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಎರಡೂವರೆ ಅಡಿಯಷ್ಟು ಹೆಚ್ಚಳವಾಗಿದೆ. ಜು.14ರಂದು ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1787.3 ಅಡಿಯಷ್ಟು ಇತ್ತು. ಇವತ್ತು 1789.70 ಅಡಿಗೆ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ದಿನ 1788.10 ಅಡಿಯಷ್ಟು ನೀರಿನ ಸಂಗ್ರಹವಿತ್ತು. ಲಿಂಗನಮಕ್ಕಿ ಜಲಾಶಯಕ್ಕೆ ಪ್ರಸ್ತುತ 56,012 … Read more

ಸಾಗರ – ಸಿಗಂದೂರು ಮಾರ್ಗದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

Sigandur-road-tree-fall.

SHIVAMOGGA LIVE NEWS | SAGARA | 13 ಜುಲೈ 2022 ಮರ ಧರೆಗುರುಳಿ ಸಿಂಗದೂರು (SIGANDUR) ರಸ್ತೆ ಕೆಲವು ಹೊತ್ತು ಬಂದ್ ಆಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸಾಗರ (SAGARA) ಸಿಗಂದೂರು ರಸ್ತೆಯ ಅಂಬಾರಗೋಡ್ಲು ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದಿದೆ. ಹಾಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಸಿಗಂದೂರು ಪ್ರವಾಸಿಗರಿಗೆ ಕಷ್ಟ ಕಷ್ಟ ಅಂಬಾರಗೋಡ್ಲು ರಸ್ತೆಯಲ್ಲಿ ಮರ ಬಿದ್ದಿದ್ದರಿಂದ ಸಿಗಂದೂರು ಪ್ರವಾಸಿಗರಿಗೆ ಸಮಸ್ಯೆ ಉಂಟಾಯಿತು. ಸಿಗಂದೂರಿಗೆ ತೆರಳುವವರು … Read more