ಸಾಗರದಲ್ಲಿ ವೈಜ್ಞಾನಿಕವಾಗಿಲ್ಲ ಸೀಲ್ ಡೌನ್, ಸಮಸ್ಯೆ ಬಗೆಹರಿಸುವಂತೆ ಸಿಎಂಗೆ ಮನವಿ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 4 ಆಗಸ್ಟ್ 2020 ಸಾಗರದ ಪಟ್ಟಣ ವ್ಯಾಪ್ತಿಯ ಸೀಲ್‍ಡೌನ್ ಪ್ರದೇಶದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ವೇದಿಕೆ ಕಾರ್ಯಕರ್ತರು, ಪಟ್ಟಣ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಸೀಲ್‍ ಡೌನ್ ಮಾಡುತ್ತಿಲ್ಲ. ಸೀಲ್‍ ಡೌನ್ ಪ್ರದೇಶದ ಅಕ್ಕಪಕ್ಕದಲ್ಲೂ ಅಂಗಡಿ ಬಾಗಿಲು ತೆಗೆಯಲು ಅವಕಾಶ ಕೊಡುತ್ತಿಲ್ಲ. 14 ದಿನ ಸೀಲ್‍ ಡೌನ್ ಮಾಡುವುದರಿಂದ … Read more

ಸಾಗರ ಬಂದಗದ್ದೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಕ್ಕೆ ವಿರೋಧ, ಕಾರಣವೇನು?

ಶಿವಮೊಗ್ಗ ಲೈವ್.ಕಾಂ | SAGARA NEWS | 4 ಆಗಸ್ಟ್ 2020 ಬಂದಗದ್ದೆ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ನಿರ್ಧಾರ ಕೈಬಿಡುವಂತೆ ಸಾಗರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ವಿರೋಧಕ್ಕೆ ಕಾರಣವೇನು? ವಸತಿ ಶಾಲೆಯಲ್ಲಿ ಕೇರ್ ಸೆಂಟರ್ ಆರಂಭಕ್ಕೆ ಸಿದ್ಧತೆ ನಡೆದಿದೆ. ಆದರೆ ಈ ಭಾಗದಲ್ಲಿ ಹಂದಿಗೋಡು ಕಾಯಿಲೆಯಿಂದ ಬಳಲುತ್ತಿರುವವರು ಇದ್ದಾರೆ. ಹಂದಿಗೋಡು ಕಾಯಿಲೆಗೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಈ ಮಧ್ಯೆ ಕೋವಿಡ್ ಕೇರ್ ಸೆಂಟರ್‍ ಆರಂಭಿಸುವುದಕ್ಕೆ ಹಂದಿಗೋಡು ಕಾಯಿಲೆ … Read more

ಮಾನವೀಯತೆ ಮೆರೆದ ಮಹಿಳಾ ಎಎಸ್ಐ, ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್

020820 Police Help A Lady in Sagara Talaguppa 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಆಗಸ್ಟ್ 2020 ವಿವಸ್ತ್ರಳಾಗಿ ಓಡಾಡುತ್ತಿದ್ದ ಮಹಿಳೆಯೊಬ್ಬರಿಗೆ ಎಎಸ್‍ಐ ಒಬ್ಬರು ಬಟ್ಟೆ ತೊಡಿಸಿ, ಊಟ ಮಾಡಿಸಿ, ಊರಿಗೆ ಬಸ್ಸು ಹತ್ತಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿದ್ದು, ಎಎಸ್ಐ ಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತಾಳಗುಪ್ಪದಲ್ಲಿ ಮಹಿಳೆಯೊಬ್ಬರು ಬಟ್ಟೆ ಇಲ್ಲದೆ ಓಡಾಡುತ್ತಿದ್ದರು. ಬಕ್ರಿದ್ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಎಎಸ್‍ಐ ಮೀರಾಬಾಯಿ ಇದನ್ನು ಗಮನಿಸಿ, ಮಹಿಳೆಗೆ ಬಟ್ಟೆ ತೊಡಿಸಿ, ಊಟ, ತಿಂಡಿ ಕೊಡಿಸಿ, ಆಪ್ತ ಸಮಾಲೋಚನೆ ಮಾಡಿ, ಊರಿಗೆ ಕಳುಹಿಸಿದ್ದಾರೆ. ಮಹಿಳೆ … Read more

ಜಿಲ್ಲಾ ಪಂಚಾಯಿತಿ ಮುಂದೆ ಸಾಗರ ತಾಲೂಕು ಪಂಚಾಯಿತಿ ಸದಸ್ಯರ ಪ್ರತಿಭಟನೆ, ಅಧ್ಯಕ್ಷರನ್ನು ವಿರುದ್ಧ ದೂರು

290720 Sagara Taluk Panchayat Member Prortest 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಜುಲೈ 2020 ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರದ್ದು ತುಘಲಕ್ ದರ್ಬಾರ್. ಕೂಡಲೆ ಅವರು ಅಧಿಕಾರ ಬಿಟ್ಟು ಕೆಳಗಿಳಿಬೇಕು ಎಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಸದಸ್ಯರು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಸರ್ವ ಪಕ್ಷದ ಸದಸ್ಯರ ಪ್ರತಿಭಟನೆ ಪ್ರತಿಭಟನೆಯಲ್ಲಿ ಬಿಜೆಪಿಯ ಆರು ಸದಸ್ಯರು, ಕಾಂಗ್ರೆಸ್‍ನ ಒಬ್ಬರು, ಜೆಡಿಎಸ್‍ನ ಒಬ್ಬರು ಮತ್ತು ಇಬ್ಬರು ಪಕ್ಷೇತರ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮಲ್ಲಿಕಾರ್ಜುನ ಹಕ್ರೆ ಅವರು … Read more

ಕಾರ್ಗಲ್‌ನಲ್ಲಿ ಮೊದಲ ಕರೋನ ಕೇಸ್, ಸೋಂಕಿತ ವ್ಯಕ್ತಿಯ ಮನೆ ಇರುವ ರಸ್ತೆ ಸೀಲ್ ಡೌನ್

ಶಿವಮೊಗ್ಗ ಲೈವ್.ಕಾಂ | SAGARA | 28 ಜುಲೈ 2020 ಕಾರ್ಗಲ್‌ನಲ್ಲಿ ಮೊಟ್ಟಮೊದಲ ಕರೋನ ಪ್ರಕರಣ ಪತ್ತೆಯಾಗಿದೆ. ಹಾಗಾಗಿ ಸೋಂಕಿತ ವ್ಯಕ್ತಿಯ ಮನೆ ಭಾಗದ ರಸ್ತೆಯನ್ನು ಸೀಲ್‌ ಡೌನ್‌ ಮಾಡಲಾಗಿದೆ. ಇಲ್ಲಿನ ೬೦ ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರು. ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಇವರಿಗೆ ಕರೋನ ಸೋಂಕು ತಗುಲಿರುವುದು ದೃಢವಾಗಿದೆ. ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅವರ ಮನೆ ಇರುವ ರಸ್ತೆಯನ್ನು … Read more

ಸಾಗರದಲ್ಲಿ ಏಳು ಮಂದಿಗೆ ಕರೋನ, ಲಾರಿ ಚಾಲಕನಿಂದ ಕುಟುಂಬದ ಮೂವರಿಗೆ ಸೋಂಕು

ಶಿವಮೊಗ್ಗ ಲೈವ್.ಕಾಂ | SAGARA NEWS | 18 ಜುಲೈ 2020 ಸಾಗರ ತಾಲೂಕಿನಲ್ಲಿ ಶುಕ್ರವಾರ ಏಳು ಮಂದಿಗೆ ಕರೋನ ಸೋಂಕು ತಗುಲಿರುವು ದೃಢವಾಗಿದೆ. ಈ ಪೈಕಿ ಮೂವರಿಗೆ ಲಾರಿ ಚಾಲಕರೊಬ್ಬರಿಂದ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ. ಯಾರಿಗೆಲ್ಲ ಸೋಂಕು ತಗುಲಿದೆ? ಚಾಲಕನಿಂದ ಮೂವರಿಗೆ ಸೋಂಕು | ಆನಂದಪುರದಲ್ಲಿ ಲಾರಿ ಚಾಲಕರೊಬ್ಬರಿಗೆ ಕರೋನ ಸೋಂಕು ತಗುಲಿತ್ತು. ಮೂರು ದಿನದ ಹಿಂದೆ ಇದು ದೃಢವಾಗಿತ್ತು. ಈಗ ಚಾಲಕನ ಪುತ್ರ, ಸೊಸೆ ಮತ್ತು ಮೊಮ್ಮಗನಿಗೆ ಕರೋನ ಸೋಂಕು ತಗುಲಿದೆ. ಮತ್ತೊಂದೆಡೆ … Read more

ಡ್ರೋಣ್ ಪ್ರತಾಪ್ ವಿರುದ್ಧ ಸಾಗರದ ವಕೀಲರೊಬ್ಬರಿಂದ ಕಂಪ್ಲೇಂಟ್, ಏನಂತ ದೂರು ನೀಡಿದ್ದಾರೆ?

170720 Drone Prathap 1

ಶಿವಮೊಗ್ಗ ಲೈವ್.ಕಾಂ | SAGARA NEWS | 17 ಜುಲೈ 2020 ಡ್ರೋಣ್ ಪ್ರತಾಪ್ ವಿರುದ್ಧ ಸಾಗರ ತಾಲೂಕಿನ ವಕೀಲರೊಬ್ಬರು ದೂರು ನೀಡಿದ್ದಾರೆ. ದೇಶದ ಹೆಸರಿನಲ್ಲಿ ಜನರನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. 600 ಡ್ರೋಣ್ ಸಂಶೋಧನೆ ಮಾಡಿದ್ದು, ಜನರಲ್ಲಿ ತಾನೊಬ್ಬ ವಿಜ್ಞಾನಿ ಎಂದು ನಂಬಿಸಿರುವ ಡ್ರೋಣ್ ಪ್ರತಾಪ್ ವಿರುದ್ಧ ತನಿಖೆ ನಡೆಸಬೇಕು ಎಂದು ವಕೀಲ ಪ್ರವೀಣ್ ಅವರು ದೂರು ನೀಡಿದ್ದಾರೆ. ಪೋಸ್ಟ್ ಮೂಲಕ ಪೊಲೀಸ್ ಮಹಾನಿರ್ದೇಶಕರು ಮತ್ತು ಮಂಡ್ಯ ಜಿಲ್ಲಾ ರಕ್ಷಣಾಧಿಕಾರಿಗೆ ಅವರಿಗೆ ದೂರು … Read more

ಆನಂದಪುರ ಸಮೀಪದ ಹಳ್ಳಿಯೊಂದರ ಯುವಕನಿಗೆ ಕರೋನ ಪಾಸಿಟಿವ್, ರಸ್ತೆ ಬಂದ್

ಶಿವಮೊಗ್ಗ ಲೈವ್.ಕಾಂ | ANANDAPURA NEWS | 13 ಜುಲೈ 2020 ಯುವಕನೊಬ್ಬನಲ್ಲಿ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದೇಶ್ವರ ಕಾಲನಿಯನ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಯುವಕನನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದೇಶ‍್ವರ ರಸ್ತೆಯ ಮುಖ್ಯ ದ್ವಾರದ ಬಳಿ ಬ್ಯಾರಿಕೇಡ್ ಹಾಕಿ, ಜನ ಮತ್ತು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕಂಟೈನ್ಮೆಂಟ್ ಜೋನ್‍ನಲ್ಲಿ ಯಾರೊಬ್ಬರು ಮನೆಯಿಂದ ಹೊರ ಬಾರದಂತೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆ, ಪೊಲೀಸರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ … Read more

ಸಾಗರ ಆಸ್ಪತ್ರೆಗೆ ಎರಡು ಆಂಬುಲೆನ್ಸ್, ಮೂರು ವೆಂಟಿಲೇಟರ್ ಸೇರಿ ಮತ್ತಷ್ಟು ಸೌಲಭ್ಯಕ್ಕೆ ಶಾಸಕರ ಡಿಮಾಂಡ್

ಶಿವಮೊಗ್ಗ ಲೈವ್.ಕಾಂ | SAGARA NEWS | 10 ಜುಲೈ 2020 ಸಾಗರದಲ್ಲಿ ಕರೋನ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಆಂಬುಲೆನ್ಸ್, ವೆಂಟಿಲೇಟರ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಹೆಚ್ಚಳ ಮಾಡುವಂತೆ ಶಾಸಕ ಹರತಾಳು ಹಾಲಪ್ಪ ಮನವಿ ಮಾಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರನ್ನು ಶಾಸಕ ಹರತಾಳು ಹಾಲಪ್ಪ ಅವರು ಬೆಂಗಳೂರಿನಲ್ಲಿ ಭೇಟಿಯಾಗಿ, ಚರ್ಚೆ ನಡೆಸಿದರು. ಸಾಗರ, ಸೊರಬ, ಹೊಸನಗರದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿದೆ. ಈ … Read more

ಆನಂದಪುರದಲ್ಲಿ ಅರ್ಧ ದಿನ ಮಾತ್ರ ವ್ಯಾಪಾರಕ್ಕೆ ಅವಕಾಶ ಕೊಡಿ, ಗ್ರಾಮಸ್ಥರಿಂದ ಮನವಿ

ಶಿವಮೊಗ್ಗ ಲೈವ್.ಕಾಂ | ANANDAPURA NEWS | 9 ಜುಲೈ 2020 ಅಕ್ಕಪಕ್ಕದ ಪಟ್ಟಣಗಳಲ್ಲಿ ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆನಂದಪುರದಲ್ಲಿ ಅರ್ಧದಿನ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ಸಾಗರ, ರಿಪ್ಪನ್‍ಪೇಟೆ, ಶಿಕಾರಿಪುರ, ಸೊರಬ, ಹೊಸನಗರದಲ್ಲಿ ಪ್ರತಿನಿತ್ಯ ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹಾಗಾಗಿ ಆನಂದಪುರದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು … Read more