BREAKING NEWS | ಕ್ರೀಡಾಕೂಟದಲ್ಲಿ ಜಗಳ, ಶಿರಾಳಕೊಪ್ಪದಲ್ಲಿ ಬಿಗುವಿನ ವಾತಾವರಣ, ಅಂಗಡಿಗಳು ಬಂದ್

Shiralakoppa-Clash-over-sports-shops-closed.

ಶಿಕಾರಿಪುರ | ಕ್ರೀಡಾಕೂಟದ ವೇಳೆ ಕ್ಷುಲಕ ವಿಚಾರವಾಗಿ ಶುರುವಾದ ಗಲಾಟೆಯಿಂದಾಗಿ ಶಿರಾಳಕೊಪ್ಪ (SHIRALAKOPPA) ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದಿಢೀರ್ ಅಂಗಡಿಗಳನ್ನು ಬಂದ್ (SHOPS CLOSED) ಮಾಡಿಸಲಾಗಿದೆ. ಶಿರಾಳಕೊಪ್ಪದ ಇಂದಿರಾ ಗಾಂಧಿ (INDIRA GANDHI STADIUM) ಕ್ರೀಡಾಂಗಣದಲ್ಲಿ ವಲಯ ಮಟ್ಟದ ಶಾಲಾ ಕ್ರೀಡಾಕೂಟದ ವೇಳೆ ಕ್ಷುಲಕ ವಿಚಾರವಾಗಿ ಗಲಾಟೆಯಾಗಿದೆ. ಮಕ್ಕಳೊಂದಿಗೆ ಬಂದಿದ್ದ ಪೋಷಕರು ಕೂಡ ಮಾತಿಗೆ ಮಾತು ಬೆಳೆಸಿದ್ದಾರೆ. ಬಳಿಕ ಕ್ರೀಡಾಂಗಣದಿಂದ ಹೊರ ಬಂದ ವೇಳೆ ಗಲಾಟೆ ಹೆಚ್ಚಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯುವಕನ ಮೇಲೆ … Read more

ಶಿವಮೊಗ್ಗದ 100 ಅಡಿ ರಸ್ತೆಯ ವ್ಯಕ್ತಿ ಬಳಿ ಸಿಕ್ತು 9 ಬೈಕ್, ಶಿಕಾರಿಪುರ ಪೊಲೀಸರಿಂದ ಅರೆಸ್ಟ್

Shikaripura-Bike-thief-Arrest-in-by-police

ಶಿಕಾರಿಪುರ | ಇಲ್ಲಿನ ಹೊಸ ಸಂತೆ ಮಾರುಕಟ್ಟೆಯಲ್ಲಿ ಬೈಕ್ ಕಳ್ಳತನ (BIKE) ಮಾಡಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ 9 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದ ಹನುಮಂತನಗರ 100 ಅಡಿ ರಸ್ತೆಯ ರಾಜಪ್ಪ (35) ಎಂಬಾತನನ್ನು ಬಂಧಿಸಲಾಗಿದೆ. ಶಿಕಾರಿಪುರದ ಹೊಸ ಸಂತೆ ಮಾರುಕಟ್ಟೆ ಬಳಿ ಜುಲೈ 16ರಂದು ಹೀರೋ ಹೆಚ್.ಎಫ್ ಡಿಲಕ್ಸ್ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಶಿಕಾರಿಪುರ ಪಟ್ಟಣದಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ರಾಜಪ್ಪನನ್ನು ಬಂಧಿಸಿದ್ದಾರೆ. ಆತನಿಂದ 2.65 … Read more

ಪೊಲೀಸರಿಗೆ ಸಿಕ್ಕಿಬಿದ್ದ ಮೂವರು ಬರೀ ಬೈಕ್ ಕಳ್ಳರಾಗಿರಲಿಲ್ಲ

Shiralakoppa-Police-Arrest-Bike-Theft-case

SHIVAMOGGA LIVE NEWS | SHIRALAKOPPA | 27 ಜುಲೈ 2022 ಒಂದು ತಿಂಗಳ ಹಿಂದೆ ನಡೆದಿದ್ದ ಬೈಕ್ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ (ARREST). 16 ಬೈಕುಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಸುವ ವೇಳೆ ಬಂಧಿತರು ಬರೀ ಬೈಕ್ ಕಳ್ಳರಲ್ಲ, ಶ್ರೀಗಂಧ ಚೋರರು ಹೌದು ಎಂಬುದು ಬೆಳಕಿಗೆ ಬಂದಿದೆ. ಶಿಕಾರಿಪುರ ತಾಲೂಕು ಸಂಡ ಗ್ರಾಮದ ಸೈಯ್ಯದ್ ಇಸ್ರಾರ್ (26), ಪುನೇದಹಳ್ಳಿಯ ರಾಕೇಶ್ (24), ಶಿಕಾರಿಪುರ ಪಟ್ಟಣದ ಗೋಪಾಲ (28) ಬಂಧಿತರು. ಒಂದು … Read more

ಆಗ ಹಿರಿ ಮಗನಿಗೆ ಕ್ಷೇತ್ರ ಬಿಟ್ಟಿದ್ದರು, ಈಗ ಕಿರಿ ಮಗನನ್ನು ಉತ್ತರಾಧಿಕಾರಿ ಎಂದು ಘೋಷಿಸಿದ್ರು

Yedyurappa-Raghavendra-vijayendra-during-Shimoga-Dasara

SHIVAMOGGA LIVE NEWS | SHIKARIPURA | 22 ಜುಲೈ 2022 ಶಿಕಾರಿಪುರ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ (VIJAYENDRA) ಅವರು ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ಹಲವರ ಹುಬ್ಬೇರುವಂತೆ ಮಾಡಿದೆ. ಚರ್ಚೆ ಹುಟ್ಟುಹಾಕಿದೆ. ಆದರೆ ಯಡಿಯೂರಪ್ಪ (YEDIYURAPPA) ಅವರು ಪುತ್ರನಿಗಾಗಿ ಕ್ಷೇತ್ರ ಬಿಟ್ಟುಕೊಡುತ್ತಿರುವುದು ಇದೆ ಮೊದಲಲ್ಲ. ಯಡಿಯೂರಪ್ಪ ಅವರು 1983ರಲ್ಲಿ ಮೊದಲ ಭಾರಿ ಶಿಕಾರಿಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಆ ನಂತರ ಎಂಟು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1999ರಲ್ಲಿ ಕಾಂಗ್ರೆಸ್ ಪಕ್ಷದ ಬಿ.ಎನ್.ಮಹಾಲಿಂಗಪ್ಪ ಅವರ … Read more

ದೊಡ್ಡ ಕುತೂಹಲಕ್ಕೆ 12 ಸೆಕಂಡ್’ನಲ್ಲಿ ತೆರೆ ಎಳೆದ ಯಡಿಯೂರಪ್ಪ

Shikaripura-Yedyurappa-and-vijayendra

SHIVAMOGGA LIVE NEWS | SHIKARIPURA | 22 ಜುಲೈ 2022 ಮುಂದಿನ ವಿಧಾನಸಭೆ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (YEDIYURAPPA) ಅವರು ಸ್ಪರ್ಧೆ ಮಾಡುತ್ತಿಲ್ಲ. ಪುತ್ರ ವಿಜಯೇಂದ್ರ (VIJAYENDRA) ಅವರು ಶಿಕಾರಿಪುರ (SHIKARIPURA) ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಈ ಕುರಿತು ಯಡಿಯೂರಪ್ಪ ಅವರೆ ಹೇಳಿಕೆ ನೀಡಿದ್ದಾರೆ. ತೀವ್ರ ಕುತೂಹಲಕ್ಕೆ ಮೂಡಿಸಿದ್ದ ಬೆಳವಣಿಗೆಗೆ ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿ ಯಡಿಯೂರಪ್ಪ ತೆರೆ ಎಳೆದಿದ್ದಾರೆ. 12 ಸೆಕೆಂಡ್’ನ ಅವರ ಹೇಳಿಕೆ ಜಿಲ್ಲೆ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯ ರಾಜಕಾರಣದಲ್ಲೂ ಕುತೂಹಲ ಹುಟ್ಟುಹಾಕಿದೆ. … Read more

ಪೊಲೀಸ್ ಠಾಣೆ ಮುಂದೆ ಏಕಾಂಗಿಯಾಗಿ ಧರಣಿ, ಕಾರಣವೇನು?

Youth-Protest-Against-Police-in-Shikaripura

SHIVAMOGGA LIVE NEWS | SHIKARIPURA | 20 ಜುಲೈ 2022 ದೂರು ಕೊಡಲು ಬಂದಾಗ ಪೊಲೀಸರು (POLICE) ನಿಂದಿಸಿದ್ದಾರೆ ಎಂದು ಆಪಾದಿಸಿ ಪೊಲೀಸ್ ಠಾಣೆ ಮುಂದೆ ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಧರಣಿ (PROTEST) ನಡೆಸಿದರು. ಯುವ ಕಾಂಗ್ರೆಸ್ (YOUTH CONGRESS) ಅಧ್ಯಕ್ಷ ಮಲ್ಲಿಕ್ ನಾಯ್ಕ್ ಅವರು ಶಿಕಾರಿಪುರ (SHIKARIPURA) ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದರು. ದೂರು ನೀಡಲು ಬಂದಾಗ ಪಿಎಸ್ಐ ಅವರು ನಿಂದಿಸಿದ್ದಾರೆ ಎಂದು ಆರೋಪಿಸಿ ಮಲ್ಲಿಕ್ ನಾಯ್ಕ್ ಧರಣಿ ಮಾಡಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಗೆ … Read more

ಅಂಜನಾಪುರ ಜಲಾಶಯ ಭರ್ತಿ, ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು

Anjanapura-Dam-Full

SHIVAMOGGA LIVE NEWS | SHIKARIPURA | 7 ಜುಲೈ 2022 ನಿರಂತರ ಮಳೆ ಹಿನ್ನೆಲೆ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ (DAM) ಕೋಡಿ ಬಿದ್ದಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ. ಹಿನ್ನೀರು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಆದ್ದರಿಂದ ಅಂಜನಾಪುರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಹಾಗಾಗಿ ಅಂಜನಾಪುರ ಜಲಾಶಯ ಕೋಡಿ ಬಿದ್ದಿದೆ. 23 ಅಡಿ ನೀರು ಭರ್ತಿಯಾದರೆ ಜಲಾಶಯ ಕೋಡಿ ಬೀಳುತ್ತದೆ. ವಾಡಿಕೆಗಿಂತಲೂ ಮೊದಲೆ ಭರ್ತಿ ಅಂಜನಾಪುರ ಜಲಾಶಯ ಈ … Read more

ಅಂಜನಾಪುರ ಜಲಾಶಯ ಭರ್ತಿಗೆ ಇನ್ನೆರಡು ಅಡಿ ಬಾಕಿ

Anjanapura-Dam-Shikaripura

SHIVAMOGGA LIVE NEWS | SHIKARIPURA | 6 ಜುಲೈ 2022 ನಿರಂತರ ಮಳೆಯಿಂದಾಗಿ ಅಂಜನಾಪುರ ಜಲಾಶಯದ (DAM) ಒಳ ಹರಿವು ಹೆಚ್ಚಳವಾಗಿದೆ. ಇನ್ನೊಂದೆರಡು ದಿನ ಮಳೆ ಮುಂದುವರೆದರೆ ಜಲಾಶಯ ಭರ್ತಿ ಆಗಲಿದೆ. ರಿಪ್ಪನ್ ಪೇಟೆ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಭಾರಿ ಮಳೆ ಆಗುತ್ತಿದೆ. ಇದರಿಂದ ಅಂಜನಾಪುರ ಜಲಾಶಯಕ್ಕೆ ನಿತ್ಯ 400 ರಿಂದ 450 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಾಗಾಗಿ ನೀರಿನ ಮಟ್ಟ 21 ಅಡಿಗೆ ಏರಿಕೆಯಾಗಿದೆ. ಇನ್ನು ಎರಡು ಅಡಿ ನೀರು ಬಂದರೆ ಕೋಡಿ … Read more

ಮಾರುತಿ 800 ಕಾರಿನ ಸೀಟಿನ ಕೆಳಗಿತ್ತು 40 ಬಾಕ್ಸ್, ಕೂಡಲೆ ಚಾಲಕ ಅರೆಸ್ಟ್

Shiralakoppa-Police-raid-on-illegal-liquor-selling

SHIVAMOGGA LIVE NEWS | SHIRALAKOPPA | 4 ಜುಲೈ 2022 ಕಾರಿನಲ್ಲಿ ಅಕ್ರಮವಾಗಿ ಮದ್ಯ (ILLEGAL LIQUOR) ಸಾಗಣೆ ಮಾಡುತ್ತಿದ್ದ ಆರೋಪಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸೊರಬ ತಾಲೂಕು ಕಲ್ಲಂಬಿ ಗ್ರಾಮದ ಸಚಿನ್ (23) ಎಂಬಾತನನ್ನು ಬಂಧಿಸಲಾಗಿದೆ. ಮಾರುತಿ 800 ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡಲಾಗುತ್ತಿತ್ತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೀಟ್ ಕೆಳಗಿತ್ತು ಬಾಕ್ಸ್’ಗಟ್ಟಲೆ ಮದ್ಯ ತೊಗರ್ಸಿ ಕಡೆಯಿಂದ ಶಿರಾಳಕೊಪ್ಪ … Read more

ಆಯಾತಪ್ಪಿ ಕೆಳಗೆ ಬಿದ್ದ ವೃದ್ಧನ ತಲೆ ಮೇಲೆ ಹತ್ತಿದ ಚಕ್ರಗಳು

crime name image

SHIVAMOGGA LIVE NEWS | ACCIDENT | 3 ಜೂನ್ 2022 ಬಸ್ಸಿನಿಂದ ಇಳಿಯುವಾಗ ಆಯಾತಪ್ಪಿ ಕೆಳಗೆ ಬಿದ್ದ ವೃದ್ಧನ ತಲೆ ಮೇಲೆ ಅದೇ ಬಸ್ಸಿನ ಚಕ್ರಗಳು ಚಲಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕನ ನಿರ್ಲಕ್ಷ್ಯವೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಶಿಕಾರಿಪುರ ತಾಲೂಕು ಕಪ್ಪನಹಳ್ಳಿಯ ಬೂದ್ಯಪ್ಪ (60) ಮೃತ ದುರ್ದೈವಿ. ಶಿಕಾರಿಪುರದ ಎಸ್.ಎಸ್.ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬೂದ್ಯಪ್ಪ ಅವರು ಶಿರಾಳಕೊಪ್ಪದಿಂದ ಶಿಕಾರಿಪುರಕ್ಕೆ ಆಗಮಿಸಿದ್ದರು. ಎಸ್.ಎಸ್.ರಸ್ತೆಯಲ್ಲಿ ಬಸ್ ನಿಲ್ಲಿಸಿದಾಗ ಬೂದ್ಯಪ್ಪ ಅವರು ಕೆಳಗೆ ಇಳಿಯುತ್ತಿದ್ದರು. ಈ ವೇಳೆ … Read more