ಶಿಕಾರಿಪುರದಲ್ಲಿ ಯಡಿಯೂರಪ್ಪ ಮಹತ್ವದ ಸಭೆ, ಗೆಲ್ಲುವ ಅಭ್ಯರ್ಥಿ ಅರ್ಜಿ ಸಲ್ಲಿಸದಿದ್ದರೂ ಮನೆಗೆ ಹೋಗಿ ಟಿಕೆಟ್ ನೀಡುವಂತೆ ಸೂಚನೆ

Yedyurappa Pressmeet1 1

ಶಿವಮೊಗ್ಗ ಲೈವ್.ಕಾಂ | 10 ಮೇ 2019 ಗೆಲ್ಲುವ ಅಭ್ಯರ್ಥಿ ಟಿಕೆಟ್’ಗಾಗಿ ಅರ್ಜಿ ಸಲ್ಲಿಸದಿದ್ದರೂ, ಅವರ ಮನೆಗೆ ಹೋಗಿ ಕರೆತರುವ ಕೆಲಸ ಆಗಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ಪ್ರಚಾರ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಭದ್ರಕೋಟೆಯಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಮೇಲೆ ಇಡೀ ರಾಜ್ಯದ ಜನರ ಗಮನವಿದೆ. ಕಾರ್ಯಕರ್ತರು ನಿಷ್ಠೆಯಿಂದ … Read more

ಫಲಿತಾಂಶಕ್ಕೂ ಮೊದಲೇ ಮತದಾರರಿಗೆ ಅಭಿನಂದನೆ, ಶಿಕಾರಿಪುರದಿಂದಲೇ ಗೆಲುವಿನ ಶಿಕಾರಿ ಅಂದ್ರು ಮೈತ್ರಿ ಅಭ್ಯರ್ಥಿ

ಶಿವಮೊಗ್ಗ ಲೈವ್.ಕಾಂ | 10 ಮೇ 2019 ನನಗೆ ಶಿಕಾರಿಪುರ ಮತ್ತು ಸೊರಬ ಎರಡು ಕಣ್ಣುಗಳಿದ್ದಂತೆ. ಶಿಕಾರಿಪುರದಿಂದಲೇ ನನ್ನ ಗೆಲುವಿನ ಶಿಕಾರಿ ಆರಂಭವಾಗಿದೆ. ಹಾಗಾಗಿಯೇ ಫಲಿತಾಂಶಕ್ಕೂ ಮೊದಲೇ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು. ಶಿಕಾರಿಪುರದ ಗುರುಭವನದಲ್ಲಿ ಜೆಡಿಎಸ್, ಕಾಂಗ್ರೆಸ್ ಆಯೋಜಿಸಿದ್ದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಸುಳ್ಳು ಹೇಳುವವರು ಸೋಲುತ್ತಾರೆ. ಸತ್ಯ ಗೆಲ್ಲುತ್ತದೆ. ಇವರ ಸರ್ವಾಧಿಕಾರಿ ಧೋರಣೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಹಾಗಾಗಿ ಅವೆಲ್ಲ ನನಗೆ ಮತಗಳಾಗಿವೆ … Read more

ಶುಂಠಿ ಬೆಳೆ ಮಧ್ಯೆ ಗಾಂಜಾ ಬೆಳೆದವನಿಗೆ ಶಿವಮೊಗ್ಗ ಕೋರ್ಟ್’ನಿಂದ ಕಠಿಣ ಶಿಕ್ಷೆ, ದಂಡ

prison hand cuff image

ಶಿವಮೊಗ್ಗ ಲೈವ್.ಕಾಂ | 10 ಮೇ 2019 ಶುಂಠಿ ಬೆಳೆ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದಿದ್ದನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿದೆ. ಶಿಕಾರಿಪುರದ ಹುಣಸೆಕಟ್ಟೆಯ ತಾಳಗುಪ್ಪದವರ ಮನೆ ಈಶ್ವರ (44) ಶಿಕ್ಷೆಗೊಳಗಾದ ವ್ಯಕ್ತಿ. ಗುಡ್ಡದ ಹೊಸಳ್ಳಿಯ ತನ್ನ ಜಮೀನಿನಲ್ಲಿ ಶುಂಠಿ ಬೆಳೆ ಮಧ್ಯದಲ್ಲಿ ಗಾಂಜಾ ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ಶಿಕಾರಿಪುರದ ಡಿವೈಎಸ್’ಪಿ ಸುಧಾಕರ್.ಎಸ್.ನಾಯಕ್ ಮತ್ತು ಸಿಬ್ಬಂದಿ ದಾಳಿ ಮಾಡಿ, 71 … Read more

ಚುನಾವಣೆ, ಪ್ರಚಾರದ ಒತ್ತಡದ ನಡುವೆ ಕುಟುಂಬ ಸಹಿತ ಜಾತ್ರೆಯಲ್ಲಿ ಭಾಗವಹಿಸಿದ ಯಡಿಯೂರಪ್ಪ, ಸೆಲ್ಫಿ ಮುಗಿಬಿದ್ದರು ಜನ

ಶಿವಮೊಗ್ಗ ಲೈವ್.ಕಾಂ | 19 ಏಪ್ರಿಲ್ 2019 ಚುನಾವಣಾ ಪ್ರಚಾರದ ಒತ್ತಡದ ನಡುವೆಯೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿದ್ದರು. ಬೆಳಗ್ಗೆ ಕುಟುಂಬ ಸಹಿತ ದೇವಸ್ಥಾನಕ್ಕೆ ಆಗಮಿಸಿದ ಯಡಿಯೂರಪ್ಪ, ದೇವರ ದರ್ಶನ ಪಡೆದರು. ಕೆಲ ಹೊತ್ತು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಡಿಯೂರಪ್ಪ ಜೊತೆ ಸೆಲ್ಫಿಗೆ ರಶ್ ಇನ್ನು, ಯಡಿಯೂರಪ್ಪ ಅವರು ದೇವರ ದರ್ಶನ ಪಡೆದು ದೇವಸ್ಥಾನದಿಂದ ಹಿಂತಿರುಗುತ್ತಿದ್ದಂತೆ, ಜನರು ಮುಗಿಬಿದ್ದರು. ಸೆಲ್ಫಿ ತೆಗೆಸಿಕೊಳ್ಳಲು ನಾ ಮುಂದು, ತಾ ಮುಂದು ಎಂದು ನೂಕುನುಗ್ಗಲು ಉಂಟಾಯಿತು. ಪೊಲೀಸರ … Read more

‘ನಿಖಿಲ್ ಎಲ್ಲಿದ್ದೀಯಪ್ಪ’ಕ್ಕೆ ಈಶ್ವರಪ್ಪ ಕೊಟ್ಟರು ಉತ್ತರ, ಮಧು ಎಲ್ಲಿದ್ದೀಯಪ್ಪ ಅಂತಾ ಶಿಕಾರಿಪುರದಲ್ಲಿ ಪ್ರಶ್ನಿಸಿದರು ನಟಿ ತಾರಾ

ಶಿವಮೊಗ್ಗ ಲೈವ್.ಕಾಂ | 17 ಏಪ್ರಿಲ್ 2019 ಶಿಕಾರಿಪುರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲೂ ‘ನಿಖಿಲ್ ಎಲ್ಲದ್ದಿಯಪ್ಪ’ ಸೌಂಡ್ ಮಾಡಿದೆ. ಪ್ರಚಾರ ಸಭೆಯ ವೇದಿಕೆಯಲ್ಲೇ, ಶಾಸಕ ಕೆ.ಎಸ್.ಈಶ್ವರಪ್ಪ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯೆ, ನಟಿ ತಾರಾ ಈ ಡೈಲಾಗ್ ಪ್ರಸ್ತಾಪಿಸಿ, ಜೆಡಿಎಸ್ ಮತ್ತು ಅದರ ಅಭ್ಯರ್ಥಿಗಳನ್ನು ವ್ಯಂಗ್ಯ ಮಾಡಿದರು. ಜಾತ್ರೆಯಲ್ಲಿದ್ದೀನಪ್ಪ ಅನ್ನಬೇಕಾಗುತ್ತೆ? ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಶಿಕಾರಿಪುರದಲ್ಲಿ ಇವತ್ತು ಬಿಜೆಪಿ ವತಿಯಿಂದ ಬಹಿರಂಗ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ, ನಿಖಿಲ್ ಎಲ್ಲಿದ್ದಿಯಪ್ಪ ಅನ್ನೋ ಡೈಲಾಗ್ ಪ್ರಸ್ತಾಪಿಸಿದ … Read more

ಯುಗಾದಿ ಆಚರಿಸಲು ಶಿಕಾರಿಪುರಕ್ಕೆ ಯಡಿಯೂರಪ್ಪ, ನಾಲ್ಕು ವರ್ಷ ಯಾರೂ ಅದನ್ನ ನನ್ನಿಂದ ಕಸಿದುಕೊಳ್ಳೋಕೆ ಆಗಲ್ಲ ಅಂತಾ ತಿರುಗೇಟು

ಶಿವಮೊಗ್ಗ ಲೈವ್.ಕಾಂ | 06 ಏಪ್ರಿಲ್ 2019 ಲೋಕಸಭೆ ಚುನಾವಣೆ ಬಳಿಕ ಯಡಿಯೂರಪ್ಪ ಮೂಲೆಗುಂಪಾಗುತ್ತಾರೆ ಅಂತಾ ಜೆಡಿಎಸ್, ಕಾಂಗ್ರೆಸ್ ನಾಯಕರ ಹೇಳಿಕೆಗೆ, ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಶಿಕಾರಿಪುರದಲ್ಲಿ ಶಿವಮೊಗ್ಗ ಲೈವ್.ಕಾಂ ಜೊತೆ ಮಾತನಾಡಿದ ಯಡಿಯೂರಪ್ಪ, ಪಕ್ಷ ಬದಲಾವಣೆ ಬಯಸಿದರೆ ಸ್ವಾಗತಿಸುತ್ತೇನೆ ಎಂದರು. ಬದಲಾವಣೆ ಬಯಸಿದರೆ ಸ್ವಾಗತ ಚುನಾವಣೆ ಬಳಿಕ, ಒಂದು ವೇಳೆ ಪಕ್ಷದ ಬದಲಾವಣೆ ಬಯಸಿದರೆ ತಾವು ಅದನ್ನು ಸ್ವಾಗತಿಸುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ನಾನೀಗ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ಇನ್ನೂ ನಾಲ್ಕು ವರ್ಷ … Read more

ಚೆಕ್’ಪೋಸ್ಟ್’ನಲ್ಲಿ ವಾಹನ ತಪಾಸಣೆ ಮಾಡದೆ ನಿದ್ರೆ ಮಾಡಿದ ಮೂವರು ಸಸ್ಪೆಂಡ್

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | 02 ಏಪ್ರಿಲ್ 2019 ಚೆಕ್’ಪೋಸ್ಟ್’ನಲ್ಲಿ ಕರ್ತವ್ಯ ನಿರ್ವಹಿಸುವ ಬದಲು ನಿದ್ರೆ ಮಾಡಿದ ಮೂವರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಸಸ್ಪೆಂಡ್ ಮಾಡಿದ್ದಾರೆ. ವಾಹನಗಳ ತಪಾಸಣೆ ನಡೆಸದೆ ನಿದ್ರೆ ಮಾಡಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು, ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಶಿಕಾರಿಪುರ ತಾಲೂಕಿನ ಖವಾಸಪುರ ಚೆಕ್’ಪೋಸ್ಟ್’ಗೆ ನಿಯೋಜನೆಗೊಂಡಿದ್ದ, ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅಶೋಕ್ ರಾಜ್, ಮುದ್ದನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜಪ್ಪ, ಬೇಗೂರು ಸಿ.ಆರ್.ಪಿ ಚನ್ನೇಶ್ ಸಸ್ಪೆಂಡ್ ಆದವರು. ಈ … Read more

ಮಧು ಬಂಗಾರಪ್ಪ ಕಾಂಗ್ರೆಸ್ ಚಿಹ್ನೆ ಅಡಿ ಸ್ಪರ್ಧಿಸಬೇಕು ಅಂತಾ ಒತ್ತಾಯ, ವೇದಿಕೆಯಲ್ಲಿದ್ದ ಮಧು ಏನಂದ್ರು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 21 ಮಾರ್ಚ್ 2019 ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಚಿಹ್ನೆ ಅಡಿ ಲೋಕಸಭೆ ಚುನಾವಣೆ ಎದುರಿಸಬೇಕು ಅಂತಾ, ಒತ್ತಾಯ ಶುರುವಾಗಿದೆ. ಶಿಕಾರಿಪುರದಲ್ಲಿ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂದಿದೆ. ಶಿಕಾರಿಪುರ ತಾಲೂಕಿನಲ್ಲಿ ಜೆಡಿಎಸ್’ಗಿಂತಲೂ ಕಾಂಗ್ರೆಸ್ ಪಕ್ಷದ ಹೆಚ್ಚು ಸಂಘಟಿತವಾಗಿದೆ. ಗ್ರಾಮೀಣ ಭಾಗದಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಸಂಘಟನೆಯಿದೆ. ಹಾಗಾಗಿ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷದ ಚಿಹ್ನೆ ಅಡಿ ಸ್ಪರ್ಧಿಸಿದರೆ, ಹೆಚ್ಚು ಮತ ಪಡೆಯಬಹುದು ಅಂತಾ ಯುವ … Read more

ಚುನಾವಣಾ ಚೆಕ್’ಪೋಸ್ಟ್’ನಲ್ಲಿ ಕಾರು ತಪಾಸಣೆ ವೇಳೆ ಬ್ಯಾಗ್’ನಲ್ಲಿ ಕಂತೆ ಕಂತೆ ಹಣ ಪತ್ತೆ

ಶಿವಮೊಗ್ಗ ಲೈವ್.ಕಾಂ | 19 ಮಾರ್ಚ್ 2019 ಚುನಾವಣೆ ನೀತಿ ಸಂಹಿತೆ ಹಿನ್ನೆಲೆ, ವಾಹನಗಳ ತಪಾಸಣೆ ವೇಳೆ, ಚೆಕ್’ಪೊಸ್ಟ್ ಒಂದರಲ್ಲಿ ಹತ್ತು ಲಕ್ಷ ರುಪಾಯಿ ಹಣ ಪತ್ತೆಯಾಗಿದೆ. ಕಾರು ತಪಾಸಣೆ ವೇಳೆ ಬ್ಯಾಗ್’ನಲ್ಲಿ ಹಣವಿರುವುದು ಪತ್ತೆಯಾಗಿದೆ. ಚೆಕ್ ಪೋಸ್ಟ್ ಸಿಬ್ಬಂದಿ, ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವರ್ಗಾಯಿಸಿದ್ದಾರೆ. ಶಿಕಾರಿಪುರದ ಅತ್ತಿಬೈಲು ಚೆಕ್’ಪೋಸ್ಟ್’ನಲ್ಲಿ ವಾಹನಗಳ ತಪಾಸಣೆ ವೇಳೆ ಹಣ ಪತ್ತೆಯಾಗಿದೆ. ಹಿರೇಕೆರೂರು ತಾಲೂಕಿನ ಮಳವಳ್ಳಿ ಗ್ರಾಮದ ಕೊಟ್ರೇಶಪ್ಪ ಎಂಬುವವರ ಮಾರತಿ ಕಾರಿನಲ್ಲಿ ಹಣ ಸಿಕ್ಕಿದೆ. ಶಿವಮೊಗ್ಗದ ಆಕ್ಸಿಸ್ … Read more

ಶಿರಾಳಕೊಪ್ಪದಲ್ಲಿ ಮೂರು ದಿನ ಕನ್ನಡದಲ್ಲಿ ಕುರಾನ್ ಪ್ರವಚನ, ಭಾಗವಹಿಸಲಿದ್ದಾರೆ ಪ್ರಮುಖ ಸ್ವಾಮೀಜಿಗಳು

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | 25 ಫೆಬ್ರವರಿ 2019 ಜಮಾಅತೆ ಇಸ್ಲಾಮೀ ಹಿಂದ್ ಶಿರಾಳಕೊಪ್ಪ ಶಾಖೆ ವತಿಯಿಂದ ಶಿರಾಳಕೊಪ್ಪದ ಬಿ.ಎಂ.ಮಹದೇವಯ್ಯ ಬಯಲು ರಂಗಮಂದಿರದಲ್ಲಿ ಫೆಬ್ರವರಿ 27 ರಿಂದ ಮೂರು ದಿನ  ಪ್ರತಿದಿನ ಸಂಜೆ 7.20 ರಿಂದ 9.30ರವರೆಗೆ ನೆಮ್ಮದಿಯ ಬದುಕಿಗಾಗಿ ಕನ್ನಡದಲ್ಲಿ ಕುರಾನ್ ಪ್ರವಚನ ನಡೆಸಲಾಗುತ್ತದೆ. ಇನ್ನು, ಪೊಲೀಸ್ ಠಾಣೆಯ ಮುಂಭಾಗದ ಖಾಲಿ ಜಾಗದಲ್ಲಿ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಮಾನವೀಯ ಮೌಲ್ಯಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯ ಅಬ್ದುಲ್ ವಾಹಿಬ್ … Read more