SHIVAMOGGA LIVE NEWS | 28 ಮಾರ್ಚ್ 2022
ನೀರಿನ ಬಾಟಲಿ ಖರೀದಿಗೆ ಬಂದವರು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. KTM ಬೈಕಿನಲ್ಲಿ ಬಂದಿದ್ದ ಇಬ್ಬರು ಕಳ್ಳರು ಕೃತ್ಯ ಎಸಗಿದ್ದಾರೆ.
ಅಂಗಡಿ ಮಾಲಕಿ ಜಯಮ್ಮ ಎಂಬುವವರ ಮಾಂಗಲ್ಯ ಸರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ಘಟನೆ ಸಂಭವಿಸಿದೆ.
ರಿಪ್ಪನ್ ಪೇಟೆಯ ಶಿವಮೊಗ್ಗ ರಸ್ತೆಯಲ್ಲಿ ಜಯಮ್ಮ ಅವರ ಕಿರಾಣಿ ಅಂಗಡಿ ಇದೆ. ಭಾನುವಾರ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ನೀರಿನ ಬಾಟಲಿ ಕೇಳಿದ್ದಾನೆ. ಬಾಟಲಿ ಕೊಟ್ಟು ಜಯಮ್ಮ ಹಿಂತಿರುಗುತ್ತಿದ್ದ ಹಾಗೆ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾರೆ. ಜಯಮ್ಮ ಅವರು ಕೂಡಲೆ ಸರವನ್ನು ಬಿಗಿ ಹಿಡಿದಿದ್ದರಿಂದ, ಅರ್ಧ ಭಾಗ ತುಂಡಾಗಿದ್ದು ಅವರ ಕೈಯಲ್ಲೆ ಉಳಿದಿದೆ. ಇನ್ನರ್ಧವನ್ನು ಕಳ್ಳ ಕದ್ದೊಯ್ದಿದ್ದಾನೆ.
ಈ ಸಂದರ್ಭ ಜಯಮ್ಮ ಅವರು ಜೋರಾಗಿ ಕೂಗಿಕೊಂಡಿದ್ದಾ. ಅಷ್ಟು ಹೊತ್ತಿಗಾಗಲೆ ಕಳ್ಳರು ಕೆಟಿಎಂ ಬೈಕಿನಲ್ಲಿ ಪರಾರಿಯಾಗಿದ್ದಾರೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200