SHIVAMOGGA LIVE NEWS | 28 APRIL 2023
SORABA : ಪುರಸಭೆ ವ್ಯಾಪ್ತಿಯಲ್ಲಿ ಚಿರತೆ (Cheetah) ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜನರು ಒಬ್ಬೊಬ್ಬರೆ ಓಡಾಡದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಸೊರಬದ ಚಿಕ್ಕಶಕುನ ಮತ್ತು ಸೀಗೆಹಳ್ಳಿ ಗ್ರಾಮಗಳಲ್ಲಿ ಕಳೆದ ಮೂರು ದಿನದಿಂದ ಚಿರತೆ (Cheetah) ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯರು ಜಮೀನಿಗೆ ಹೋಗಲು ಹೆದರುವಂತಾಗಿದೆ. ಇನ್ನು, ಈ ಕುರಿತು ವಲಯ ಅರಣ್ಯಾಧಿಕಾರಿ ಜಾವೇದ್ ಬಾಷಾ ಅವರು ಜನರಿಗೆ ಎಚ್ಚರಿಕೆ ನೀಡಿದ್ದು, ಜನರು ಒಬ್ಬೊಂಟಿಯಾಗಿ ಓಡಾಡಬಾರದು. ಚಿರತೆ ಕಾಣಿಸಕೊಂಡರೆ ಕೂಡಲೆ ತಿಳಿಸಬೇಕು. ಅಲ್ಲದೆ ಅತ್ಯಾಧುನಿಕ ಬೋನ್ ಇದ್ದು, ಚಿರತೆ ಸೆರೆ ಹಿಡಿಯಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ – ಸಿಗಂದೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಪಲ್ಟಿ, ಅಪಘಾತಕ್ಕೆ ಕಾರಣವೇನು?