ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021
ಮಹಿಳಾ ಅಧಿಕಾರಿಯೊಬ್ಬರಿಗೆ ರಾತ್ರಿಯಲ್ಲ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ನಾಪತ್ತೆಯಾಗಿದ್ದು, ಪೊಲೀಸರು ತಲಾಷ್ ನಡೆಸುತ್ತಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರಿಗೆ ಚಿತ್ರಪ್ಪ ಎಂಬಾತ ರಾತ್ರಿಯಲ್ಲ ಕರೆ ಮಾಡುತ್ತಿದ್ದಾರೆ. ವಾಟ್ಸಪ್ ಡಿಪಿಯಲ್ಲಿ ಮಹಿಳಾ ಅರಣ್ಯಾಧಿಕಾರಿ ಫೋಟೊ ಹಾಕಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಏನಿದು ಪ್ರಕರಣ? ದೂರಿನಲ್ಲಿ ಏನಿದೆ?
ಆನೆ ತುಳಿದು ಬೆಳೆ ಹಾನಿಯಾಗಿದೆ. ತಮಗೆ ಪರಿಹಾರಿ ಕೊಡಿಸಿ ಎಂದು ಚಿತ್ರಪ್ಪ ಎಂಬುವವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಕರೆ ಮಾಡಿದ್ದಾರೆ. ತಡರಾತ್ರಿಯಲ್ಲ ಕರೆ ಮಾಡಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ಅಸಭ್ಯವಾಗಿಯೂ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಸಿಎಫ್ ಕಚೇರಿಗೂ ಚಿತ್ರಪ್ಪ ಪದೇ ಪದೇ ಭೇಟಿ ನೀಡಿ, ಏಕ ವಚನದಲ್ಲಿ ಮಾತನಾಡಿ ಅವಮಾನ ಮಾಡುತ್ತಿದ್ದರು. ಅಲ್ಲದೆ ಚಿತ್ರಪ್ಪ ತಮ್ಮ ವಾಟ್ಸಪ್’ನಲ್ಲಿ ಮಹಿಳಾ ಎಸಿಎಫ್ ಫೋಟೋ ಹಾಕಿಕೊಂಡಿದ್ದರು. ಇದರಿಂದ ತಮ್ಮ ಕೌಟುಂಬಿಕ ಜೀವನ ಮತ್ತು ಸರ್ಕಾರಿ ಕರ್ತವ್ಯ ನಿರ್ವಹಣೆಗೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಮಹಿಳಾ ಎಸಿಎಫ್ ದೂರಿನಲ್ಲಿ ತಿಳಿಸಿದ್ದಾರೆ
ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ.