ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2020
ಭದ್ರಾವತಿಯಲ್ಲಿ KSRTC ಕಂಡಕ್ಟರ್ ಒಬ್ಬರಿಗೆ ಕರೋನ ಸೋಂಕು ತಗುಲಿದೆ. ಅವರ ತಂದೆ, ತಾಯಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಕಂಡಕ್ಟರ್ಗೆ ಸೋಂಕು ತಗುಲಿದ್ದು ಹೇಗೆ?
ಬೆಂಗಳೂರು ಡಿಪೋದಲ್ಲಿ ಕಂಡಕ್ಟರ್ ಆಗಿದ್ದರು. ನಿತ್ಯ ಬೆಂಗಳೂರು ಮಂಗಳೂರು ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಸೋಂಕು ತಗುಲಿದೆ. ಜೂ.25ರಂದು ಭದ್ರಾವತಿಗೆ ಬಂದಿದ್ದರು.
ಜೂನ್ 26ರಂದು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ ಜೂ.27ರಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನ ಪರೀಕ್ಷೆ ನಡೆಸಲಾಗಿತ್ತು. ಜೂ.30ರಂದು ವರದಿ ಬಂದಿದ್ದು, ಕೂಡಲೇ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೋಂಕು ತಗುಲಿದೆ ಹಿನ್ನೆಯಲ್ಲಿ ಹೊಸಮನೆಯ ರಸ್ತೆಯೊಂದನ್ನು ಸೀಲ್ ಡೌನ್ ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200ಈ ಮೇಲ್ ಐಡಿ | [email protected]