ಶಿವಮೊಗ್ಗ ಲೈವ್.ಕಾಂ | SHIMOGA NEWS | 8 MAY 2021
ಕರೋನ ಸೋಂಕಿತನೊಬ್ಬ ಆಸ್ಪತ್ರೆಯಿಂದ ತಪ್ಪಿಸಿಕೊಂಡು, ಭತ್ತದ ಗದ್ದೆಯಲ್ಲಿ ಅವಿತು ಕುಳಿತು ಆಸ್ಪತ್ರೆ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕ ಮೂಡಿಸಿದ್ದಾನೆ. ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ಸಂಭಿವಿಸಿದೆ.
ಗಾಂಧಿ ಬಜಾರ್ನ ನಿವಾಸಿಯೊಬ್ಬರಿಗೆ (48 ವರ್ಷ) ಆರೋಗ್ಯ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕರೋನ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು.
ಇವತ್ತು ಚಿಕಿತ್ಸೆ ವೇಳೆ ಆತಂಕಕ್ಕೀಡಾಗಿ, ಸೋಂಕಿತ ಆಸ್ಪತ್ರೆಯಿಂದ ಹೊರಗೆ ಓಡಿ ಬಂದಿದ್ದಾನೆ. ಪಕ್ಕದ ಭತ್ತದ ಗದ್ದೆಗೆ ಜಿಗಿದು ಓಡಲು ಯತ್ನಿಸಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಬೆನ್ನಟ್ಟಿ ಬಂದಿದ್ದರಿಂದ ಗದ್ದೆಯಲ್ಲೇ ಅವಿತು ಕೂರಲು ಯತ್ನಿಸಿದ್ದಾನೆ. ಸೋಂಕಿತನನ್ನ ಪತ್ತೆ ಹಚ್ಚಿ ಮನವೊಲಿಸಿದ ಸಿಬ್ಬಂದಿಗಳು ಪುನಃ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]