SHIVAMOGGA LIVE NEWS | 24 MARCH 2023
THIRTHAHALLI : ಮಾಂಸಕ್ಕಾಗಿ ದನ ಕಡಿದ (cow slaughter) ದುಷ್ಕರ್ಮಿಗಳು ಅದರ ತಲೆ, ಬಾಲ, ಕರುಳು ಸೇರಿ ಉಳಿದ ಭಾಗಗಳನ್ನು ತುಂಗಾ ನದಿಗೆ ಎಸೆದಿದ್ದಾರೆ. ರಾಮೇಶ್ವರ ದೇವಸ್ಥಾನದ ಹಿಂಭಾಗದ ಇವು ಪತ್ತೆಯಾಗಿವೆ.
ಇದನ್ನೂ ಓದಿ – GOOD NEWS | ಶಿವಮೊಗ್ಗದಿಂದ ವಿಮಾನ ಹಾರಾಟ ಶುರು, ಯಾವ ರೂಟ್? ಎಷ್ಟಿರುತ್ತೆ ಟಿಕೆಟ್ ರೇಟ್?
ಗುರುವಾರ ತುಂಗಾ ನದಿಯ ಚಕ್ರತೀರ್ಥದಲ್ಲಿ ಸ್ನಾನ ಮಾಡಲು ಭಕ್ತರು ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ, ಮುಖ್ಯಾಧಿಕಾರಿ ಕುರಿಯಕೋಸ್, ಆರೋಗ್ಯಾಧಿಕಾರಿ ರೆಮೇಶ್, ತೀರ್ಥಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಅಶ್ವಥ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.