ಶಿವಮೊಗ್ಗ ಲೈವ್.ಕಾಂ | SHIMOGA | 27 ಅಕ್ಟೋಬರ್ 2019
ಪರಿಸರ ಉಳಿಸಲು ಪಟಾಕಿ ಹೊಡೆಯಬೇಡಿ ಅಂತಾ ವಿವಿಧ ಸಂಘಟನೆಗಳು ಇವತ್ತು ಶಿವಮೊಗ್ಗದಲ್ಲಿ ಜಾಗೃತಿ ಮೂಡಿಸಿದವು. ಪಟಾಕಿ ಬೇಡ ಘೋಷಣೆಯೊಂದಿಗೆ ನೆಹರು ಕ್ರೀಡಾಂಗಣದ ಮುಂದೆ ಫ್ಲೇಕರ್ ಹಿಡಿದು ಘೋಷಣೆ ಕೂಗಿದರು.
ಪಟಾಕಿ ಶಬ್ದಕ್ಕೆ ಪ್ರಾಣಿಗಳಿಗೆ ತೊಂದರೆ ಆಗಲಿದೆ. ಪರಿಸರಕ್ಕು ಹಾನಿ ಆಗಲಿದೆ ಎಂದು ಜಾಗೃತಿ ಮೂಡಿಸಲಾಯಿತು. ಮೂರು ಶ್ವಾನಗಳು ಕೂಡ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಇನ್ನು, ವಾಟರ್ ಕ್ಯಾನ್ ಒಳಗೆ ಗಿಡವನ್ನು ಇರಿಸಿ, ಪೈಪ್ ಮೂಲಕ ಮಾಸ್ಕ್ ತೊಟ್ಟು ಉಸಿರಾಡುವ ಪ್ರಾತ್ಯಕ್ಷಿಕೆಯನ್ನು ಮಾಡಲಾಯಿತು.
ಗ್ರೋ ಗ್ರೀನ್, ಅಣ್ಣಾ ಹಜಾರೆ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
