ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ನವೆಂಬರ್ 2021
ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ತನ್ನ ಆದಾಯಕ್ಕಿಂತಲೂ ಶೇ.400ರಷ್ಟು ಹೆಚ್ಚು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಎಸಿಬಿ ದಾಳಿ, ಈವರೆಗೂ ಆಗಿರುವ ಐದು ಬೆಳವಣಿಗೆಗಳೇನು? ಇವತ್ತು ಏನೆಲ್ಲ ನಡೆಯುವ ಸಾಧ್ಯತೆ ಇದೆ?
ಶಿವಮೊಗ್ಗದ ಚಾಲುಕ್ಯ ನಗರ ಮತ್ತು ಗೋಪಾಳದ ಮನೆಗಳ ಮೇಲೆ ದಾಳಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಲೆ ಚಿನ್ನಾಭರಣ, ಆಸ್ತಿಪಾಸ್ತಿ ದಾಖಲೆಗಳು, ಗೃಹೋಪಯೋಗಿ ವಸ್ತುಗಳು, ಬ್ಯಾಂಕ್ ಠೇವಣಿಗಳು ಸಿಕ್ಕಿವೆ. ಇವುಗಳ ಮೊತ್ತೆ 6.65 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಶೇ.400ಕ್ಕಿಂತಲೂ ಹೆಚ್ಚು ಆಸ್ತಿ
ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಈವರೆಗೂ ತಾನು ಗಳಿಸಿರುವ ಅದಾಯಕ್ಕಿಂತಲೂ ಶೇ.400ಕ್ಕಿಂತಲೂ ಹೆಚ್ಚು ಮೊತ್ತದ ಆಸ್ತಿ ಸಂಪಾದಿಸಿದ್ದಾರೆ ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಯಾಂಕ್ ಲಾಕರ್ ಪರಿಶೀಲನೆ
ಇವತ್ತು ರುದ್ರೇಶಪ್ಪನನ್ನು ಶಿವಮೊಗ್ಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಗೋಪಾಲಗೌಡ ಬಡಾವಣೆ ಶಾಖೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ರುದ್ರೇಶಪ್ಪ ಮತ್ತು ಆತನ ಕುಟುಂಬದವರ ಲಾಕರ್’ಗಳನ್ನು ಪರಿಶೀಲನೆ ನಡೆಸಲಾಯಿತು. ಆದರೆ ಲಾಕರ್’ನಲ್ಲಿ ಏನೂ ಇರಲಿಲ್ಲ ಎಂದು ತಿಳಿದು ಬಂದಿದೆ.
ರುದ್ರೇಶಪ್ಪನನ್ನು ಇವತ್ತು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಬಳಿಕ ಮತ್ತಷ್ಟು ವಿಚಾರಣೆ ನಡೆಯಲಿದೆ ಎಂದು ತಿಳಿದು ಬಂದಿದೆ.