SHIVAMOGGA LIVE NEWS | ARECA | 7 ಜೂನ್ 2022
ಅಡಕೆ (ARECA) ಬೆಳೆಗಾರರಲ್ಲಿ ಆತಂಕ ಮೂಡಿಸಿದ್ದ ಎಂಟು ಕಳ್ಳರ ಕೈಗೆ ಪೊಲೀಸರು ಕೋಳ ತೊಡಿಸಿದ್ದಾರೆ. ಬಂಧಿತರಿಂದ ಐದು ಲಕ್ಷ ಮೌಲ್ಯದ ಅಡಕೆ ವಶಕ್ಕೆ ಪಡೆಯಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಎಂಟು ಕಳ್ಳರನ್ನು ಬಂಧಿಸಿದ್ದಾರೆ. ಇದರಿಂದ ಏಳು ಕಳ್ಳತನ ಪ್ರಕರಣವನ್ನು ಭೇದಿಸಿದಂತಾಗಿದೆ. ಸಾಗರ ತಾಲೂಕಿನ ವಿವಿಧೆಡೆ ಈ ಕಳ್ಳರು ಅಡಕೆ ಕಳ್ಳತನ ಮಾಡುತ್ತಿದ್ದರು.
ಒಂದು ಕೇಸ್ ಬೆನ್ನು ಹತ್ತಿದ್ದರು
ಮೇ 31ರ ರಾತ್ರಿ ಸಾಗರ ತಾಲೂಕು ದೊಂಬೆ ಗ್ರಾಮದಲ್ಲಿ ಅಡಕೆ ಕಳ್ಳತನವಾಗಿತ್ತು. ಗಜಾನನ ಎಂಬುವವರು ತಮ್ಮ ಮನೆ ಸಮೀಪದ ಗೋಡೋನ್’ನಲ್ಲಿ 2.40 ಲಕ್ಷ ರೂ. ಮೌಲ್ಯದ ಅಡಕೆಯನ್ನು ಸಂಗ್ರಹಿಸಿಟ್ಟಿದ್ದರು. ರಾತ್ರೋರಾತ್ರಿ ಗೋಡೋನ್’ಗೆ ನುಗ್ಗಿದ ಖದೀಮರು ಅಡಕೆಯನ್ನು ಕದ್ದೊಯ್ದಿದ್ದರು.
ಕೆಂಪು ಅಡಕೆ, ಬಿಳಿ ಗೋಟು, ಕಲವಾರು ಅಡಕೆ, ಹಂಡೆಬೆಟ್ಟೆ ಮಾದರಿಯ ಸುಮಾರು 675 ಕೆ.ಜಿ ಅಡಕೆ ಕಳ್ಳತನವಾಗಿದೆ ಎಂದು ಗಜಾನನ ಅವರು ದೂರು ನೀಡಿದ್ದರು.
ಸಿಕ್ಕಿಬಿದ್ದರು ಎಂಟು ಕಳ್ಳರು
ಸಾಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಸಾಗರ ತಾಲೂಕಿನ ವಿವಿಧೆಡೆ ಅಡಕೆ (ARECA) ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಬಂಧಿತರಿಂದ 805 ಕೆಜಿ ಸಿಪ್ಪೆ ಗೋಟು ಅಡಿಕೆ, 70 ಕೆಜಿ ಚಾಲಿ ಅಡಿಕೆ, 349 ಕೆಜಿ ಕೆಂಪು ಅಡಿಕೆ ಮತ್ತು 200 ಕೆಜಿ ಬಿಳಿ ಗೋಟು ಅಡಿಕೆ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇನ್ನು, ಕೃತ್ಯಕ್ಕೆ ಬಳಕೆ ಮಾಡಿದ ಮಾರುತಿ ಓಮ್ನಿ ಕಾರು, ಎರಡು ಬೈಕುಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಗಳ ಬಂಧನದಿಂದ ಸಾಗರ ತಾಲೂಕಿನ ಏಳು ಕಡೆ ಅಡಕೆ ಕಳವು ಪ್ರಕರಣವನ್ನು ಭೇದಿಸಿದಂತಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾರೆಲ್ಲ ಬಂಧಿತರು?
ಬಂಧಿತರೆಲ್ಲ ಸಾಗರ ತಾಲೂಕಿನವರೆ ಆಗಿದ್ದಾರೆ. ಅದರಂತೆ ಗ್ರಾಮದ ಯಶೋದರ (23), ಮಂಜುನಾಥ (28), ಅರುಣ (27), ಸಂದೇಶ (22), ಸಾಗರ ಪಟ್ಟಣದ ಶಶಾಂತ್ (21), ಕಾರ್ತಿಕ್ (20), ಅದರಂತೆ ಗ್ರಾಮದ ಸಂದೀಪ (24), ಅಣಲೆಕೊಪ್ಪದ ಶಾರೂಕ್ ಅಲಿ (24) ಬಂಧಿತರು.
ಸಾಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ – ಒಂದು ಕೋಟಿ ರೂ. ಮೌಲ್ಯದ ಅಡಕೆ ತುಂಬಿಕೊಂಡು ಶಿವಮೊಗ್ಗದಿಂದ ಹೊರಟ ಲಾರಿ ನಾಪತ್ತೆ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.