SHIVAMOGGA LIVE NEWS | 21 OCTOBER 2023
SHIMOGA : ಬೈಕ್ ಹಾರನ್ (Horn) ಮಾಡಿದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಲಾಗಿದೆ. ನವುಲೆ ಕೆರೆ ಬಳಿ ದಾಳಿಯಾಗಿದೆ. ಬೈಕಿನಲ್ಲಿ ಬಂದ ಅಪರಿಚಿತರು ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಏನಿದು ಪ್ರಕರಣ?
ವೆಂಕಟಾಪುರದ ಬಸ್ ಚಾಲಕ ಮಂಜುನಾಥ್ ಹೊಟೇಲ್ನಲ್ಲಿ ಊಟ ಮುಗಿಸಿ ತಮ್ಮ ಚಿಕ್ಕಪ್ಪನ ಮಗನೊಂದಿಗೆ ರಾತ್ರಿ 10 ಗಂಟೆ ಹೊತ್ತಿಗೆ ಬೈಕಿನಲ್ಲಿ ಮನೆಗೆ ತರಳುತ್ತಿದ್ದರು. ಮಥುರಾ ಪ್ಯಾರಡೈಸ್ ಸಮೀಪ ಯಮಹಾ ಬೈಕ್ ಒಂದರಲ್ಲಿ ಇಬ್ಬರು ಯುವಕರು ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದರು. ಹಾಗಾಗಿ, ಮಂಜುನಾಥ್ ಅವರು ದಾರಿಗಾಗಿ ಬೈಕ್ ಹಾರನ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಯಮಹಾ ಬೈಕಿನಲ್ಲಿದ್ದ ಯುವಕರು ಮಂಜುನಾಥ್ ಮತ್ತು ಅವರ ಚಿಕ್ಕಪ್ಪನ ಮಗನನ್ನು ಮಹಾವೀರ ಸರ್ಕಲ್ನಲ್ಲಿ ಅಡ್ಡಗಟಿ ಅವಾಚ್ಯವಾಗಿ ನಿಂದಿಸಿದ್ದಾರೆ.
ಸವಳಂಗ ರಸ್ತೆಯಲ್ಲಿ ತೆರಳುತ್ತಿದ್ದಾಗ ಕಮಲಾ ನರ್ಸಿಂಗ್ ಹೋಂ ಸಮೀಪ ಪುನಃ ಅಡ್ಡಗಟ್ಟಿ ನಿಂದಿಸಿದ್ದಾರೆ. ನವುಲೆ ಕೆರೆ ಬಳಿ ಮಾರಕಾಸ್ತ್ರದಿಂದ ಮಂಜುನಾಥ್ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಅವರ ಚಿಕ್ಕಪ್ಪನ ಮಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡೆಸಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಗೋಮಾಂಸ ಮಾರಾಟ ಆರೋಪ, ಮನೆ ಮೇಲೆ ಪೊಲೀಸ್ ದಾಳಿ
ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರದಿಂದ ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಬ್ಬರು ಅಪರಿಚಿತ ಯುವಕರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.