SHIVAMOGGA LIVE NEWS | 14 APRIL 2023
SHIMOGA : ಅಪಘಾತದ ವೇಳೆ ಜಗಳವಾಗಿದ್ದು ಬೈಕ್ ಸವಾರನ ಮೇಲೆ ಮಾರಣಾಂತಿಕ ಹಲ್ಲೆ (Attack) ನಡೆಸಲಾಗಿದೆ. ಇಬ್ಬರು ಯುವಕರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಬಸವನಗಂಗೂರು ಸೇತುವೆ ಬಳಿ ಘಟನೆ ಸಂಭವಿಸಿದೆ. ಆದರ್ಶ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಪ್ರಸನ್ನ ಎಂಬುವವರ ಮೇಲೆಯು ಹಲ್ಲೆಯಾಗಿದೆ.
ಏನಿದು ಪ್ರಕರಣ?
ಆದರ್ಶ ಮತ್ತು ಪ್ರಸನ್ನ ಬೈಕಿನಲ್ಲಿ ಸ್ನೇಹಿತನ ಹುಟ್ಟುಹಬ್ಬಕ್ಕೆ ತೆರಳುತ್ತಿದ್ದರು. ಬಸವನಗಂಗೂರು ಸೇತುವೆ ಬಳಿ ಎದುರಿನಿಂದ ಬಂದ ಓಮ್ನಿ ಕಾರು ಮತ್ತು ಬೈಕ್ ಡಿಕ್ಕಿಯಾಗಿದೆ. ಘಟನೆ ಬಳಿಕ ಓಮ್ನಿ ಕಾರು ಚಾಲಕ ಫೋನ್ ಮಾಡಿದ್ದು, ಸುಮಾರು 20 ಮಂದಿ ಬೈಕುಗಳು, ಎರಡು ಟಿಪ್ಪರ್ ಲಾರಿಗಳಲ್ಲಿ ಬಂದಿದ್ದಾರೆ. ಕಬ್ಬಿಣ ರಾಡ್ ಮತ್ತು ಜಾಕ್ ಲಿವರ್ನಿಂದ ಹಲ್ಲೆ (Attack) ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಿಂದ ಜೀರೋ ಟ್ರಾಫಿಕ್ನಲ್ಲಿ ವಿಶೇಷ ಆಂಬುಲೆನ್ಸ್ನಲ್ಲಿ ಡಾ.ವಿನಯ್ ಬೆಂಗಳೂರಿಗೆ ಶಿಫ್ಟ್
ಘಟನೆಯಲ್ಲಿ ಆದರ್ಶ ಎಂಬಾತನಿಗೆ ಗಂಭೀರ ಗಾಯವಾಗಿದೆ. ಪ್ರಸನ್ನ ಎಂಬಾತನ ಮೇಲೂ ಹಲ್ಲೆಯಾಗಿದೆ. ಆದರ್ಶ ಮತ್ತು ಪ್ರಸನ್ನ ಅವರ ಸ್ನೇಹಿತರು, ಪೋಷಕರು ಸ್ಥಳಕ್ಕೆ ಭೇಟಿ ನೀಡಿ ಜಗಳ ಬಿಡಿಸಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200