SHIVAMOGGA LIVE NEWS | 17 DECEMBER 2022
ಶಿವಮೊಗ್ಗ : ಬಸ್ ಹತ್ತುವ ಭರದಲ್ಲಿ ವ್ಯಕ್ತಿಯೊಬ್ಬರ ಕಾಲಿಗೆ ಸೂಟ್ ಕೇಸ್ (suit case) ತಾಗಿದೆ. ಇದೆ ವಿಚಾರವಾಗಿ ಎರಡು ಕಡೆಯವರು ಕೈ ಕೈ ಮಿಲಾಯಿಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು, ಪ್ರತಿದೂರು ದಾಖಲಾಗಿದೆ.
ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ತಾಹೀರ್ ಪರ್ವೀನ್ ಮತ್ತು ಅವರ ಮಗ ದಾವಣಗೆರೆ ಬಸ್ ಹತ್ತಲು ತೆರಳುತ್ತಿದ್ದರು. ತಾಹೀರ್ ಪರ್ವಿನ್ (60) ಅವರ ಮಗ ಹಿಡಿದುಕೊಂಡಿದ್ದ ಸೂಟ್ ಕೇಸ್ (suit case) ಕೇಶವಮೂರ್ತಿ (70) ಎಂಬುವವರ ಕಾಲಿಗೆ ತಾಗಿದೆ. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿದ್ದಾರೆ.
(suit case)
ಕೇಶವಮೂರ್ತಿ ಆರೋಪವೇನು?
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಶವಮೂರ್ತಿ ಅವರು ದೂರು ನೀಡಿದ್ದಾರೆ. ‘ಸೂಟ್ ಕೇಸ್ ಕಾಲಿಗೆ ತಾಗಿತು. ಸರಿಯಾಗಿ ನೋಡಿಕೊಂಡು ಬಾರಯ್ಯ ಎಂದಿದ್ದಕ್ಕೆ ಆ ವ್ಯಕ್ತಿ ಅವಾಚ್ಯವಾಗಿ ಬೈದು, ಹೊಡೆಯಲು ಆರಂಭಿಸಿದ. ಇದೆ ಹೊತ್ತಿಗೆ ಇನ್ನೂ ಮೂವರು ಯುವಕರು ಆತನ ಜೊತೆಯಾಗಿ ತನ್ನ ಮೇಲೆ ಹಲ್ಲೆ ಮಾಡಿ, ಬಟ್ಟೆ ಹರಿದಿದ್ದಾರೆ. ತನ್ನ ಬಳಿ ಇದ್ದ 3500 ರೂ. ನಗದು, 8 ಗ್ರಾಂ ತೂಕದ ಬಂಗಾರದ ಚೈನ್ ಕಿತ್ತುಕೊಂಡು ಹೋಗಿದ್ದಾರೆ. ತಾಹೀರ್ ಪರ್ವಿನ್ ಎಂಬ ಮಹಿಳೆ ಯುವಕರಿಗೆ ಕುಮ್ಮಕ್ಕು ನೀಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ತಾಹೀರ್ ಪರ್ವೀನ್ ದೂರಿನಲ್ಲಿ ಏನಿದೆ?
ಘಟನೆ ಸಂಬಂಧ ತಾಹೀರ್ ಪರ್ವೀನ್ ಕೂಡ ದೂರು ನೀಡಿದ್ದಾರೆ. ‘ಸೂಟ್ ಕೇಸ್ ತಾಗಿದ್ದಕ್ಕೆ ಆ ವ್ಯಕ್ತಿ ಅವಾಚ್ಯವಾಗಿ ಬೈದಿದ್ದಾರೆ. ಗೊತ್ತಾಗಿಲ್ಲ ಎಂದು ತಾನು ಮತ್ತು ಮಗ ಹೇಳಿದೆವು. ಇದಕ್ಕೆ ಸುಮ್ಮನಾಗದ ಆ ವ್ಯಕ್ತಿ ಅವಾಚ್ಯವಾಗಿ ನಿಂದಿಸಿ, ತನ್ನ ಮಗನಿಗೆ ಹೊಡೆದರು. ಬಿಡಿಸಲು ಹೋದಾಗ ತನ್ನನ್ನು ಎಳೆದಾಡಿ, ಬಟ್ಟೆ ಹರಿದಿದ್ದಾರೆ. ಈ ಹೊತ್ತಿಗೆ ಸಾರ್ವಜನಿಕರು ಜಗಳ ಬಿಡಿಸಿದ್ದಾರೆ. ಆಗ ಆ ವ್ಯಕ್ತಿಯ ಬಟ್ಟೆ ಹರಿದಿದೆ’ ಎಂದು ದೂರಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ 20 ಚೆಕ್ ಪೋಸ್ಟ್, ಪೊಲೀಸರಿಂದ ದಿಢೀರ್ ಕಾರ್ಯಾಚರಣೆ, 46 ಜನರ ವಿರುದ್ಧ ಕೇಸ್
ಘಟನೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200